Saturday, June 21, 2025

Latest Posts

ಶ್ರಾವಣದ ಮೊದಲ ಹಬ್ಬ ನಾಗರಪಂಚಮಿಯ ವಿಶೇಷತೆಗಳೇನು ಗೊತ್ತಾ..?

- Advertisement -

ಹಬ್ಬಗಳ ಮಾಸ ಶ್ರಾವಣ ಮಾಸ ಶುರುವಾಗಿದೆ. ಜುಲೈ 25 ಅಂದರೆ ನಾಳೆ ಶ್ರಾವಣದ ಮೊದಲ ಹಬ್ಬವಾದ ನಾಗರಪಂಚಮಿ ಇದೆ. ಕೆಲವರು ಇಂದು ನಾಗರಚೌತಿಯನ್ನ ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆಗಳೇನು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.

ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಅಂದ್ರೆ ನಾಗ. ಆಷಾಢದ ಅಮವಾಸ್ಯೆ ಕಳೆದು ಐದು ದಿನಕ್ಕೆ ಬರುವ ಹಬ್ಬವೇ ನಾಗರಪಂಚಮಿ. ಕೆಲವೆಡೆ ಇದನ್ನ ಸ್ತ್ರೀಯರ ಹಬ್ಬವೆಂದೇ ಹೇಳಲಾಗುತ್ತದೆ. ನಾಗರಪಂಚಮಿಗೆ ಗಂಡನ ಮನೆಯಲ್ಲಿರುವ ತಂಗಿಯನ್ನ ಕರೆದುಕೊಂಡು ಬರುವ ಅಣ್ಣ, ಆಕೆಗೆ ಒಡವೆ ವಸ್ತ್ರ ಕೊಡಿಸುವ ಪದ್ಧತಿಯೂ ಕೆಲವೆಡೆ ಇದೆ. ಅಲ್ಲದೇ ಹಳ್ಳಿಕಡೆ ಮಕ್ಕಳೆಲ್ಲ ಸೇರಿ ಜೋಕಾಲಿ ಕಟ್ಟಿ ಆಡುತ್ತಾರೆ. ಪ್ರಸಾದದ ರೂಪದಲ್ಲಿ ವಿವಿಧ ತರಹದ ಲಾಡು ಮಾಡಿ ನೈವೇದ್ಯ ಮಾಡುತ್ತಾರೆ.

ನಾಗಪಂಚಮಿಯಂದು ಭಕ್ತಿಯಿಂದ ನಾಗನನ್ನು ಪೂಜಿಸಲಾಗುತ್ತದೆ. ಹುತ್ತ ಅಥವಾ, ನಾಗರಕಟ್ಟೆಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ.

ಇನ್ನು ಇದರ ಹಿನ್ನೆಲೆ ನೋಡುವುದಾದರೆ, ಕೆಲವೆಡೆ ಶ್ರೀಕೃಷ್ಣ ಕಾಳಿಂಗಮರ್ದನ ಮಾಡಿದ ದಿನವೇ ನಾಗರಪಂಚಮಿ ಆಚರಣೆ ಮಾಡಲಾಗುತ್ತದೆ ಎನ್ನಲಾಗಿದೆ. ಯಮುನಾ ನದಿ ತಟದಲ್ಲಿ ಆಡುತ್ತಿದ್ದ ಶ್ರೀಕೃಷ್ಣ, ಅಲ್ಲಿ ಕಾಳಿಂಗನ ಉಪಟಳವಾಗುವುದನ್ನ ಅರಿತು, ಅದರೊಟ್ಟಿಗೆ ಕಾದಾಡಿ, ಕಾಳಿಂಗ ಮರ್ದನ ಮಾಡುತ್ತಾನೆ. ಈ ದಿನವನ್ನೇ ನಾಗರಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಮಾತಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss