Wednesday, June 18, 2025

Latest Posts

ಬಿಜೆಪಿಯವರು ಮೋದಿ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಲಿ: ಶಿವರಾಜ್ ತಂಗಡಗಿ

- Advertisement -

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯುತ್ತಿದ್ದು, ಹುಬ್ಬಳ್ಳಿಯ ಗಿರಣಿಚಾಳ ಮೈದಾನದಲ್ಲಿ ವೇದಿಕೆ ಸಿದ್ಧವಾಗಿದೆ. ವೇದಿಕೆಯ ಮೇಲೆ ಎತ್ತಿನ ಬಂಡೆ ಮತ್ತು ಸಿಲಿಂಡರ್ ಇಟ್ಟು ಪೂಜೆ ಮಾಡಲಾಗಿದೆ.

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ ರಾಜ್ಯದಲ್ಲಿ ಆಕ್ರೋಶಯಾತ್ರೆ ಮಾಡೋದಯ ಬೇಡಾ. ದೆಹಲಿಯ ಪ್ರಧಾನಿ ಮೋದಿ ಮನೆ ಮುಂದೆ ಪ್ರತಿಭಟನೆ ಮಾಡಲಿ. ಆ ಧಮ್ಮು, ತಾಕತ್ತು ಇದೆಯಾ ಬಿಜೆಪಿ ಅವರಿಗೆ. ದೇಶಕ್ಕೆ ಬಿಜೆಪಿ ಕೊಡುಗೆ ಏನು ಇಲ್ಲ.

ಯುದ್ಧ ಮತ್ತು ದೇಶ ಭಕ್ತಿ ಬಗ್ಗೆ ಬಿಜೆಪಿಯಿಂದ ಕಲಿಯುವ ಅವಶ್ಯಕತೆ ಇಲ್ಲ. ಅಮಾಯಕರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಇದು ಮೋದಿ ಅವರಿಗೆ ಬೇಕಿಲ್ಲ, ಆ ಸಮಯದಲ್ಲಿ ಮೋದಿ ಬಿಹಾರ ಚುನಾವಣೆ ಭಾಷಣ ಮಾಡತ್ತಾರೆ. ಪಾಕಿಸ್ತಾನದ ಮೇಲೆ ನಾವು ಯುದ್ಧ ಮಾಡಿ ಗೆದ್ದಿದ್ದೆವೆ. ಚುನಾವಣೆ ಸಮಯದಲ್ಲಿ ಇಂತಹ ಘಟನೆಗಳು ಯಾಕೆ ಆಗತ್ತವೆ. ಪುಲ್ವಾಂ ದಾಳಿ ಬಗ್ಗೆ ಇನ್ನೂ ಸಮಗ್ರ ತನಿಖೆ ಆಗಿಲ್ಲ. ಅಷ್ಟು ಪ್ರಮಾಣದಲ್ಲಿ ಆರ್ ಡಿ ಎಕ್ಸ್ ದೇಶದೊಳಗೆ ಹಾಗೆ ಬಂತು ಅಂತ ಇನ್ನೂ ತನಿಖೆ ಆಗಿಲ್ಲ. ಈ ದೇಶದಲ್ಲಿ ಸಂವಿಧಾನದ ರಕ್ಷಣ ಆಗಬೇಕಿದೆ ಎಂದಿದ್ದಾರೆ.

- Advertisement -

Latest Posts

Don't Miss