Thursday, June 19, 2025

Latest Posts

Belagavi News: ಸುದ್ದಿಗೋಷ್ಠಿ ವೇಳೆ ಭಾವುಕರಾದ ಶಾಸಕ ವಿನಯ್ ಕುಲಕರ್ಣಿ

- Advertisement -

Belagavi News: ಬೆಳಗಾವಿಯ ಕಿತ್ತೂರಲ್ಲಿ ಶಾಸಕ ವಿನಯ ಕುಲಕರ್ಣಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಈ ವೇಳೆ ವಿನಯ್ ಅವರ ಪತ್ನಿ ಕೂಡ ಹಾಜರಾಿದ್ದರು.

ಈ ವೇಳೆ ಮಾತನಾಡಿರುವ ವಿನಯ್, ಕ್ಷೇತ್ರದಲ್ಲಿ ನಾನಿಲ್ಲ ಅಂದ್ರೆ ತೊಂದರೆ ಆಗೋದು ಸಹಜ. ಕೋರ್ಟ್ ಆದೇಶಕ್ಕಾಕೆ ನಾನು ತಲೆ ಬಾಗಲೇ ಬೇಕಾಗುತ್ತೆ. ಬೆಳಗಾವಿಯಲ್ಲಿ ಅಧಿಕಾರಿಗಳಿಗೆ ನಾನು ಜನರ ಬಗ್ಗೆ ಕಾಳಜಿ ವಹಿಸಲು ಸೂಚನೆ ನಿಡಿದ್ದೇನೆ. ನಾನು ಶಾಸಕನಾದ ನಂತ್ರ ನಾನು ಕ್ಷೇತ್ರದಲ್ಲಿ ಇಲ್ಲಾ ಅಂದ್ರು ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಪತ್ನಿ, ಮುಖಂಡರು ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ನಾನು ವಾರದಲ್ಲಿ ಒಂದೆರಡು ಬಾರಿ ಕಿತ್ತೂರಲ್ಲಿ ಸಭೆ ಮಾಡಿದ್ದೇನೆ. ಕೋರ್ಟ್ ನಲ್ಲಿ ಬೇಲ್ ಕ್ಯಾನ್ಸಲ್ ಆಗಿದೆ. ಇಂದು ಸಂಜೆವರೆಗೆ ಜನರನ್ನ ಭೇಟಿ ಆಗ್ತೇನೆ ಎಂದಿದ್ದಾರೆ.

800 ಕಿಲೋಮೀಟರ್ ರಸ್ತೆ ಮಾಡಿದ್ದೇನೆ. ರಸ್ತೆ ಹಾಳಾದಲ್ಲಿ ಹೊಸ ರಸ್ತೆ ನಿರ್ಮಾಣ ಮಾಡಿದ್ದೇನೆ. ಜಿಲ್ಹಾ ಪಂಚಾಯತ್ ನಲ್ಲಿ 18 ಕೋಟಿ ಬಂದಿತ್ತು ಸಾಕಷ್ಟು ಕೆಲಸ ಮಾಡಿದ್ದೇನೆ. 30 ಕೋಟಿ ನೀರಾವರಿ ಇಲಾಖೆಯಲ್ಲಿ ಬಂದಿತ್ತು ಕೆಲಸ ಮಾಡಿದ್ದೇನೆ. 128 ಕೋಟಿ ತುಪ್ಪರಿ ಹಳ್ಳಕ್ಕೆ ಬಂದಿದೆ. 148 ಕೋಟಿ ಸಹ ಬಂದಿದೆ..
ಶಹರದಲ್ಲೂ ಸಹ 38 ಕೋಟಿ ತಂದಿದ್ದೇನೆ. ಯುಜಿಡಿ ಯಲ್ಲಿ 178 ಕೋಟಿ ಅನುದಾನ ತಂದಿದ್ದೇನೆ. ಹಾಸ್ಟೆಲ್ ಕೊರತೆ ಸಹ ಬಹಳಷ್ಟು ಇತ್ತು. 10 ಹೊಸ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಅಲ್ಪಸಂಖ್ಯಾತ ಇಲಾಖೆಯಲ್ಲಿ 8 ಹಾಸ್ಟೆಲ್.

ಮುರಾರ್ಜಿ ಹೊಸ ಹಾಸ್ಟೆಲ್ ಅನ್ನ ಸಹ ತಂದಿದ್ದೇನೆ. 126 ಶಾಲೆಗಳ ದುರಸ್ಥಿ ಕೆಲಸ ಮಾಡಿಸಿದ್ದೇನೆ. ಹುಡಾ ದಿಂದ 3.75 ಕೋಟಿ ವೆಚ್ಚದಲ್ಲಿ ಕೆಲಸ ಮಾಡ್ತಾ ಇದ್ದೇನೆ. ಇಂತಹ ಸಾಕಷ್ಟು ಕೆಲಸಗಳನ್ನ ನನ್ನ ಕ್ಷೇತ್ರದಲ್ಲಿ ತಂದಿದ್ದೇನೆ. ನಾನು ಸಚಿವ ಇದ್ದಾಗ ಧಾರವಾಡ 28ನೆ ಸ್ಥಾನದಲ್ಲಿ ಇತ್ತು, ಈಗ 6 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ನನ್ನ ಕ್ಷೇತ್ರ 11, ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವಿನಯ್ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನು ಪತ್ನಿ ಪಕ್ಕದಲ್ಲಿ ಇಟ್ಟುಕೊಂಡು ಮಾಡ್ತಾರೆ ಅಂತ ಮಾಧ್ಯಮದಲ್ಲಿ ಬಂದಿದೆ. ನನ್ನ ಮನೆ ಬಾಗಿಲಿಗೆ ಬಂದಾಗ ನನ್ನ ಪತ್ನಿ, ಮಕ್ಕಳು, ಮುಖಂಡರು ಕೆಲಸ ಮಾಡಬೇಕು. ಯಾವಾಗ ಕಾರಣಕ್ಕೆ ನಡೆದಿದೆ ಅಂತ ಎಲ್ಲರಿಗೂ ಗೊತ್ತು. ನಾನು ಮಾಡಿದ ಕೆಲಸ ಜನ ಮರೆಯೋದಿಲ್ಲ. ದುಡ್ಡು ಕೊಟ್ಟರು ಜನ ಬರಲ್ಲ, ಆದರೆ ನನಗಾಗಿ ಜನ ಬಂದು ಕಾಯ್ತಾರೆ ಅದೇ ಖುಷಿ… ಕೋರ್ಟ್ ಗೆ ತಲೆ ಬಾಗುತ್ತೇನೆ. ದೇವರು ಇರ್ತಾರೆ ಅವರು ನೋಡ್ಕೋತಾರೆ ಎಂದು ವಿನಯ್ ಕುಲಕರ್ಣಿ ಭಾವುಕರಾಗಿದ್ದಾರೆ.

ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ನನ್ನ ಬಗ್ಗೆ ಮಾತನಾಡಬೇಡಿ. ಜೀವನದಲ್ಲಿ ಒಬ್ಬರಿಗೂ ನಾನು ಅನ್ಯಾಯ ಮಾಡಿಲ್ಲ. ನಾನು ನೇರವಾಗಿ ಮುಖದ ಮುಂದೆ ಮಾತಾಡ್ತೇನೆ. ಈ ಪ್ರಕರಣದಿಂದ ಹೊರಬರುವ ಬಗ್ಗೆ ದೇವರ ಮೇಲೆ ಭರವಸೆ ಇದೆ, ಸತ್ಯಕ್ಕೆ ಜಯ ಸಿಗಲು ತಡ ಆಗುತ್ತೆ ಎಂದು ವಿನಯ ಕುಲಕರ್ಣಿ ಹೇಳಿದ್ದಾರೆ.

ಬೆಂಗಳೂರಲ್ಲಿ ನಾನು ಕೋರ್ಟ್ ಗೆ ಹಾಜರಾಗ್ತೇನೆ . ಕೇಸ್ ಕೋರ್ಟ್ ನಲ್ಲಿದೆ ಅದರ ಬಗ್ಗೆ ನಾನು ಮಾತನಾಡಲ್ಲ. ನಾನು ಯಾರಿಗಾದ್ರೂ ಕಾಲ್ ಮಾಡಿದ್ರೆ ತೋರಿಸಲು ಹೇಳಿ. ನಾಲ್ಕು ದಿನ ನನ್ನ ಜೊತೆ ಕೋರ್ಟ್ ಗೆ ಬಂದು ನೋಡಿ ನನ್ನ ಪರಿಸ್ಥಿತಿ ಗೊತ್ತಾಗುತ್ತೆ. ನಮ್ಮ ವರಿಷ್ಟರಿಗೆ ಅಭಿವೃದ್ಧಿ ಬಗ್ಗೆ ಹೋಗಿ ಭೇಟಿ ಆಗಿ ಬಂದಿದ್ದೇನೆ. ನಮ್ಮ ಪಕ್ಷ ಯಾವಾಗಲೂ ನನ್ನ ಬೆಂಬಲಕ್ಕಿದೆ. ನಾಳೆ ನಾನು ಸಿಎಂ ಸಿದ್ದರಾಮಯ್ಯ ಅವರನ್ನ ಸಹ ಭೇಟಿ ಆಗ್ತೇನೆ. ವಿನಯ್ ಕುಲಕರ್ಣಿ ಬೆಳಿತಾ ಇದ್ದಾನೆ ಅಂತ ತುಳಿಯೋ ಹುನ್ನಾರ ಅಷ್ಟೇ. ನಾನು ಕ್ಷೇತ್ರಕ್ಕೆ ಬಾರದೆ 5 ವರ್ಷ ಆಯ್ತು, ಜನ ನನಗಾಗಿ ಕಣ್ಣೀರು ಹಾಕ್ತಾರೆ ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ.

- Advertisement -

Latest Posts

Don't Miss