Political News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ರಾಯಚೂರಿನ ಮಂತ್ರಾಲಯಕ್ಕೆ ಭೇಟಿ ನೀಡಿ, ಗುರು ರಾಯರ ದರ್ಶನ ಮಾಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ, ಸುಬುದೇಂದ್ರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕ“ಂಡಿರುವ ಜೋಶಿ, ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ ll
ಇಂದು ಸಹಕುಟುಂಬ ಪರಿವಾರ ಸಹಿತ ಮಂತ್ರಾಲಯಕ್ಕೆ ಭೇಟಿ ನೀಡಿ ಗುರುಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಪಾಲ್ಗೊಂಡ ಕ್ಷಣಗಳು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪರಮಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಮಹಾಸ್ವಾಮಿಗಳ ದರ್ಶನ ಪಡೆದು ಆಶೀರ್ವಚನ ಪಡೆಯಲಾಯಿತು ಎಂದು ಬರೆದಿದ್ದಾರೆ.
ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ llಇಂದು ಸಹಕುಟುಂಬ ಪರಿವಾರ ಸಹಿತ ಮಂತ್ರಾಲಯಕ್ಕೆ ಭೇಟಿ ನೀಡಿ ಗುರುಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಪಾಲ್ಗೊಂಡ ಕ್ಷಣಗಳು. ಈ ಸಂದರ್ಭದಲ್ಲಿ… pic.twitter.com/6SerXVpFfA
— Pralhad Joshi (@JoshiPralhad) June 16, 2025