Thursday, June 19, 2025

Latest Posts

ಬಂಟ ಆಂಜನೇಯನಿಗೆ ಬಂದ ಗತಿ ನಿಮಗೂ ಬರುತ್ತದೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಎಸ್.ಈಶ್ವರಪ್ಪ ಆಕ್ರೋಶ

- Advertisement -

Political News: ಮಾಜಿ ಸಿಎಂ ಕೆ.ಎಸ್.ಈಶ್ವರಪ್ಪ ಬಿಜೆಪಿ ಬಿಟ್ಟು ರಾಷ್ಟ್ರ ಭಕ್ತರ ಪಕ್ಷ ಸ್ಥಾಪಿಸಿದ್ದು, ಇಂದು ನೂರಾರು ಕಾರ್ಯಕರ್ತರು ಈ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. Shivamoggaದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಕೆ.ಎಸ್.ಈಶ್ವರಪ್ಪ ಸೇರಿ ಹಲವು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗ“ಂಡರು.

ಇನ್ನು ಈ ವೇಳೆ ಮಾತನಾಡಿರುವ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆಯುತ್ತಿದ್ದು, ಜಾತಿ ಜನಗಣತಿ ಜಾರಿ ಮಾಡಿ, ಇಲ್ಲಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ನೀವು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಕೂಡ, ಹಿಂದುಳಿದವರನ್ನು, ದಲಿತರನ್ನು ಬೆದುರುಬೋಂಬೆ ಮಾಡಿಕ“ಂಡು, ನೀವು ಸಿಎಂ ಸ್ಥಾನ ಪಡೆದುಕ“ಂಡ್ರಿ. ಏನೇ ಆದರೂ ಜಾತಿ ಜನಗಣತಿ ಜಾರಿಗೆ ತಂದೇ ತರ್ತೀನಿ ಎಂದಿದ್ದ ಸಿಎಂ ಈಗ ಎಲ್ಲಿ ಹೋದ್ರು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಅಲ್ಲದೇ ಹಿಂದುಳಿದವರು, ದಲಿತರು ಓಟ್ ಮಾಡದಿದ್ದರೆ, ಸಿದ್ದರಾಮಯ್ಯ ಜೀರೋ ಆಗಿರ್ತಿದ್ದರು. ಹಾಗಾಗಿ ಜಾತಿಜನಗಣತಿ ವರದಿ ಜಾರಿಗೆ ತನ್ನಿ. ಸಿದ್ಧವಾಗಿರುವ ಕಾಸ್ಟ್ ಸೆನ್ಸಸ್ ವರದಿಯನ್ನು ಜಾರಿ ಮಾಡಲು ನಿಮ್ಮ ವರಿಷ್ಟರಿೂ ಫೋರ್ಸ್ ಮಾಡಿ. ಅಸೆಂಬ್ಲಿಯಲ್ಲಿ ಇದನ್ನು ಚರ್ಚೆ ಮಾಡಿ. ಏನಾದರೂ ಸಮಸ್ಯೆ ಇದ್ದರೆ, ಚರ್ಚೆಯಲ್ಲಿ ಬಹಿರಂಗವಾಗಲಿ. ಆದರೆ ನೀವು ಚರ್ಚೆ ಮಾಡಲು ತಯಾರಿಲ್ಲ, ಬಿಡುಗಡೆ ಮಾಡಲು ತಯಾರಿಲ್ಲ ಎಂದು ಈಶ್ವರಪ್ಪ ಹರಿಹಾಯ್ದಿದ್ದಾರೆ.

ಇನ್ನು ಆಂಜನೇಯನಿಗೆ ಬಂದ ಸ್ಥಿತಿಯೇ ಸಿದ್ದರಾಮಯ್ಯನಿಗೆ ಬರುತ್ತದೆ ಎಂದು ಹೇಳಿರುವ ಈಶ್ವರಪ್ಪ, ಮಾಜಿ ಸಚಿವ ಆಂಜನೇಯ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಆಂಜನೇಯ ಅವರು ಸಚಿವರಾಗಿದ್ದಾಗ, ನಾನು ಜಾತಿ ಗಣತಿ ವರದಿ ಜಾರಿಗೆ ತಂದೇ ತರುತ್ತೇನೆ ಎಂದಿದ್ದರು. ಆದರೆ ಅವರು ಜಾರಿಗೆ ತರಲಿಲ್ಲ. ಮುಂದಿನ ಚುನಾವಣೆಯಲ್ಲಿ ಅವರ ಸೋಲಾಯಿತು. ಅದೇ ಗತಿ ಈಗ ಸಿದ್ದರಾಮಯ್ಯ ಅವರಿಗೂ ಬರಲಿದೆ ಎಂದು ಈಶ್ವರಪ್ಪ ಸಿಎಂ ಬಗ್ಗೆ ಭವಿಷ್ಯ ನುಡಿದಿದ್ದಾರೆ.

- Advertisement -

Latest Posts

Don't Miss