ಯುಎಇನಲ್ಲಿ ಸೆಪ್ಟೆಂಬರ್ 13ರಂದು ಆರಂಭವಾಗಲಿರುವ ಐಪಿಎಲ್ 13ನೇ ಸೀಸನ್ ಬಿಸಿಸಿಐಗೆ ಹೊಸ ಆತಂಕವನ್ನ ತಂದೊಡ್ಡಿದೆ. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಯುಎಇನಲ್ಲಿ ಅನೇಕ ನಿಯಮಾವಳಿಗಳನ್ನ ಜಾರಿ ಮಾಡಲಾಗ್ತಾ ಇದ್ದು ಇದು ಬಿಸಿಸಿಐ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸುತ್ತಿದೆ.

13ನೇ ಆವೃತ್ತಿಯ ಐಪಿಎಲ್ ಚುಟುಕು ಕದನ ಯುಎಇನ ಮೂರು ಪ್ರಮುಖ ನಗರಗಳಾದ ದುಬೈ, ಅಬುದಾಬಿ ಹಾಗೂ ಶಾರ್ಜಾಹ್ದಲ್ಲಿ ಹಮ್ಮಿಕೊಳ್ಳಲಾಗಿದೆ. ಆದರೆ ಅಬುದಾಬಿಯಲ್ಲಿ ಕರೊನಾ ಸಂಖ್ಯೆ ಮೀತಿಮೀರುತ್ತಿರುವ ಕಾರಣ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಹೀಗಾಗಿ ಸದ್ಯ ಯುಎಇನಲ್ಲೇ ವಾಸ್ತವ್ಯ ಹೂಡಿರುವ ಐಪಿಎಲ್ ಕೌನ್ಸಿಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹಾಗೂ ಸಿಇಓ ಹೇಮಂಗ್ ಅಮಿನ್ ಕೋವಿಡ್ ನಿಯಮಾವಳಿಗಳಿಂದ ಕೊಂಚ ವಿನಾಯಿತಿ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡುತ್ತಿದ್ದಾರೆ.
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ 13 ಆಟಗಾರರಿಗೆ ಕರೊನಾ ಸೋಂಕು ತಗುಲಿದೆ. ಅಲ್ಲದೇ ಯುಎಇನಲ್ಲಿ ಕಠಿಣ ನಿಯಮಾವಳಿಗಳು ಜಾರಿಯಾಗ್ತಿವೆ. ಇದೇ ರೀತಿ ಸಂಕಷ್ಟ ಮುಂದುವರಿದ್ರೆ ಐಪಿಎಲ್ ಮ್ಯಾಚ್ ಆರಂಭಕ್ಕೆ ಇನ್ನಷ್ಟು ವಿಘ್ನಗಳು ಎದುರಾಗೋ ಸಾಧ್ಯತೆಗಳಿವೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.