ಜ್ಯೋತಿಷ್ಯ ಶಾಸ್ತ್ರದಲ್ಲಿ ಹರಳುಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ರಾಶಿ ನಕ್ಷತ್ರಗಳ ಪ್ರಕಾರ ಒಬ್ಬೊಬ್ಬರು ಒಂದೊಂದು ರೀತಿಯ ಹರಳನ್ನ ಧರಿಸುತ್ತಾರೆ. ಕೆಲವರು ನೀಲಿ ಧರಿಸಿದರೆ, ಕೆಲವರು ಹಸಿರು ಧರಿಸುತ್ತಾರೆ, ಇನ್ನು ಕೆಲವರು ಮುತ್ತು, ಹವಳ ಹೀಗೆ ತರಹ ತರಹದ ಹರಳು ಧರಿಸುತ್ತಾರೆ. ಆದ್ರೆ ಇದೆಲ್ಲಕ್ಕಿಂತ ಮುಖ್ಯವಾದ ಹರಳಿನ ಉಂಗುರ ಅಂದ್ರೆ, ನವರತ್ನದ ಹರಳಿನ ಉಂಗುರ. ಹಾಗಾದ್ರೆ ಬನ್ನಿ ನವರತ್ನ ಹರಳಿನ ಉಂಗುರದ ಮಹತ್ವವೇನು ಅನ್ನೋದನ್ನ ತಿಳಿಯೋಣ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ವಜ್ರ, ವೈಢೂರ್ಯ, ನೀಲಿ ಹರಳು, ಮುತ್ತು, ಮಾಣಿಕ್ಯ, ಪಚ್ಚೆ ಹರಳು, ಹವಳ, ಪುಷ್ಯರಾಗ, ಗೋಮೇಧ.. ಇವುಗಳು ನವರತ್ನಗಳು. ಈ ಎಲ್ಲ ಹರಳುಗಳು ಒಂದೇ ಉಂಗುರದಲ್ಲಿದ್ದರೆ, ಅದು ನವರತ್ನದುಂಗುರ ಎನ್ನಿಸಿಕೊಳ್ಳುತ್ತದೆ.
ಇನ್ನು ನಿಮ್ಮ ಜಾತಕಕ್ಕೆ ನವರತ್ನದ ಉಂಗುರ ಉತ್ತಮವಾದಲ್ಲಿ, ಅದನ್ನ ನೀವು ಧರಿಸಬಹುದು. ಆದ್ರೆ ನವರತ್ನದ ಉಂಗುರ ಧರಿಸಬೇಕಾದ್ರೆ ಕೆಲವೊಂದು ವಿಚಾರವನ್ನ ನೀವು ಗಮನದಲ್ಲಿಡಬೇಕಾಗುತ್ತದೆ. ಅದೇನೆಂದರೆ ಯಾವ ಅಕ್ಕಸಾಲಿಗನ ಬಳಿ ನೀವು ಉಂಗುರ ಮಾಡಿಸುತ್ತೀರೋ ಅವರ ಬಳಿ, ಆಯಾ ಹರಳುಗಳನ್ನ ಕರಗಿಸುವ ಮತ್ತು ಉಂಗುರಕ್ಕೆ ಹರಳನ್ನು ಜೋಡಿಸುವ ಮುಹೂರ್ತವನ್ನ ಹೇಳಬೇಕು.
ಟೈಮ್ ಸಿಕ್ಕಾಗ, ಅಥವಾ ಹೇಗೆ ಬೇಕೋ ಹಾಗೆ ನಾವು ಹರಳುಗಳನ್ನ ಕರಗಿಸುವಂತಿಲ್ಲ ಮತ್ತು ಉಂಗುರಕ್ಕೆ ಜೋಡಿಸುವಂತಿಲ್ಲ. ಯಾಕಂದ್ರೆ ಆಯಾ ಹರಳುಗಳು ಬೇರೆ ಬೇರೆ ಗ್ರಹಗಳನ್ನ ಸೂಚಿಸುವುದರಿಂದ, ಅದಕ್ಕೇ ಆದ ಶುಭ ಮುಹೂರ್ತಗಳಿರುತ್ತದೆ. ಹಾಗಾಗಿ ಆ ಮುಹೂರ್ತಕ್ಕೆ ತಕ್ಕಂತೆ ಹರಳುಗಳನ್ನ ಜೋಡಿಸಬೇಕು.
ನಂತರ, ಉತ್ತಮ ಮುಹೂರ್ತ ನೋಡಿ ಪುರೋಹಿತರ ಬಳಿ ಉಂಗುರಕ್ಕೆ ಪೂಜೆ ಮಾಡಿ, ಮತ್ತೊಂದು ಉತ್ತಮ ಮುಹೂರ್ತದಲ್ಲಿ ನವರತ್ನ ಉಂಗುರ ಧಾರಣೆ ಮಾಡಿದ್ರೆ, ಅಭಿವೃದ್ಧಿ, ಸುಖ ಶಾಂತಿ ನೆಮ್ಮದಿ, ಆರೋಗ್ಯ ಆಯುಷ್ಯ ನಿಮ್ಮದಾಗುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.