Friday, June 20, 2025

Latest Posts

ಸಕಲ ಪಾಪ ನಿವಾರಣೆಯಾಗಿ, ಉನ್ನತಿ ಕಾಣಬೇಕು ಅಂದ್ರೆ ಹಸುವಿಗೆ ಇದನ್ನು ತಿನ್ನಿಸಿ..

- Advertisement -

ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತನ್ನದೇ ಆದ ಮಹತ್ವವಿದೆ. ಹಾಲು ನೀಡೋ ಗೋವಿಗೆ ತಾಯಿಯ ಸ್ಥಾನದಲ್ಲಿರಿಸಿದ್ದೇವೆ. ಆದ್ದರಿಂದಲೇ ಆಕೆಗೆ ಗೋಮಾತೆ ಎಂದು ಕರಿಯೋದು. ಮುಕ್ಕೋಟಿ ದೇವತೆಗಳನ್ನ ಒಳಗೊಂಡ ದೇವತೆಯಾದ ಗೋಮಾತೆಗೆ ಕೆಲ ಆಹಾರವನ್ನ ತಿನ್ನಿಸಿದ್ರೆ ಸಕಲ ಪಾಪ ನಿವಾರಣೆಯಾಗಿ, ಉನ್ನತಿ ಕಾಣುತ್ತಾರೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾವ ಆಹಾರವನ್ನ ಗೋಮಾತೆಗೆ ತಿನ್ನಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಗೋವು ಅಂದ್ರೆ ಲಕ್ಷ್ಮೀ ಸ್ವರೂಪ ಎನ್ನಲಾಗುತ್ತದೆ. ಗೃಹಪ್ರವೇಶವಾಗುವ ವೇಳೆ ಮೊದಲು ಗೋವನ್ನು ಮನೆಯೊಳಗೆ ಪ್ರವೇಶ ಮಾಡಿಸಿ, ಆಮೇಲೆ ನಾವು ಮನೆಗೆ ಪ್ರವೇಶ ಮಾಡಿದರೆ ಅತೀ ಉತ್ತಮ ಎಂದು ಹೇಳಲಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋವಿಗೆ ಸ್ನಾನ ಮಾಡಿಸಿ, ಪೂಜೆ ಮಾಡಿ, ಸೌತೇಕಾಯಿ, ಬೆಲ್ಲ, ಕಡುಬು ತಿನ್ನಿಸಲಾಗುತ್ತದೆ. ಹೀಗೆ ಹಿಂದೂ ಪದ್ಧತಿಯಲ್ಲಿ ಗೋವಿಗೆ ಅತ್ಯುನ್ನತ ಸ್ಥಾನವನ್ನೇ ನೀಡಲಾಗಿದೆ.

ಮನೆಮುಂದೆ ಬಂದ ಹಸುವನ್ನ ಹಾಗೆ ಕಳುಹಿಸಬಾರದಂತೆ. ಏನಾದರೂ ತಿನ್ನೋಕ್ಕೆ ಕೊಟ್ಟು ಕಳುಹಿಸಬೇಕಂತೆ. ಮನೆ ಎದುರಿಗೆ ಬಂದ ಗೋವನ್ನ ಹಾಗೆ ಕಳುಹಿಸಿದರೆ, ಮನೆ ಬಾಗಿಲಿಗೆ ಬಂದ ಲಕ್ಷ್ಮೀಯನ್ನ ಬರಮಾಡಿಕೊಳ್ಳದೇ ಕಳುಹಿಸಿದಂತೆ ಎಂಬ ಮಾತಿದೆ. ಆದ್ದರಿಂದ ಏನಾದರೂ ಒಳ್ಳೆಯ ಆಹಾರವನ್ನ ಗೋವಿಗೆ ತಿನ್ನಲು ನೀಡಬೇಕು.

ಲಕ್ಷ್ಮೀ ದೇವಿಗೆ ಬೆಲ್ಲ, ಬೆಲ್ಲದ ಅನ್ನ, ಬೆಲ್ಲದಿಂದ ಮಾಡಿದ ಅವಲಕ್ಕಿ ಅಂದ್ರೆ ಬಲು ಇಷ್ಟ. ಆದ್ದರಿಂದ ಗೋಮಾತೆಗೆ ಏನಾದರೂ ಆಹಾರ ನೀಡುವಾಗ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಕೊಡಿ. ಹೀಗೆ ಆಹಾರದ ಜೊತೆ ಬೆಲ್ಲ ಸೇರಿಸಿ ಕೊಡುವುದರಿಂದ ಸಕಲ ಪಾಪ ನಾಶವಾಗಿ, ಗೋಮಾತೆಯ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ.

ಇನ್ನು ಎಲ್ಲಕ್ಕಿಂತ ಮುಖ್ಯವಾದ ವಿಷಯ ಅಂದ್ರೆ ಯಾವುದೇ ಕಾರಣಕ್ಕೂ ಹಸುವಿಗೆ ನೀವು ತಿಂದ ಎಂಜಿಲನ್ನು ತಿನ್ನಲು ನೀಡಬೇಡಿ. ಇದು ಮನೆಗೆ ಒಳ್ಳೆಯದಲ್ಲ. ಗೋಮಾತೆಗೆ ಎಂದಿಗೂ ನಾವು ಎಂಜಿಲು ಮಾಡದ, ಉತ್ತಮ ಆಹಾರವನ್ನೇ ನೀಡಬೇಕು.

- Advertisement -

Latest Posts

Don't Miss