ಪುರಾಣ ಕಥೆಗಳ ಪ್ರಕಾರ ಲೋಕ ಕಲ್ಯಾಣಕ್ಕಾಗಿ ವಿಷ್ಣು ಹಲವು ರೂಪಗಳನ್ನು ಎತ್ತಿದನು. ಅದರಲ್ಲಿ ಹಯಗ್ರೀವ ರೂಪ ಕೂಡ ಒಂದು. ಹಾಗಾದ್ರೆ ವಿಷ್ಣು ಏಕೆ ಹಯಗ್ರೀವ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಹಯಗ್ರೀವ ಎಂದರೆ ಕುದುರೆ ರೂಪ ಎಂದರ್ಥ. ಕುದುರೆ ರೂಪ ತಾಳಿದ ಶ್ರೀವಿಷ್ಣು, ಹಯಗ್ರೀವನೆನ್ನುವ ಅಸುರನ ಸಂಹಾರ ಮಾಡುತ್ತಾನೆ. ಆ ಬಗ್ಗೆ ಒಂದು ಕಥೆಯೇ ಇದೆ. ಶ್ರೀ ಹರಿ ಒಮ್ಮೆ ಆದಿಶೇಷನ ಮೇಲೆ ಮಲಗಿ ವಿಶ್ರಮಿಸುತ್ತಿದ್ದಾಗ, ಹಯಗ್ರೀಯ ಎಂಬ ಅಸುರ, ತನ್ನ ಸೈನ್ಯದೊಂದಿಗೆ ದೇವಲೋಕದ ಮೇಲೆ ದಾಳಿ ಮಾಡುತ್ತಾನೆ. ದೇವತೆಗಳು ತಮ್ಮ ಬಳಿ ಆದಷ್ಟು ಹೋರಾಡಿ, ಹಯಗ್ರೀವನಲ್ಲಿ ಯುದ್ಧ ನಿಲ್ಲಿಸುವಂತೆ ಕೋರುತ್ತಾರೆ. ಆದ್ರೆ ಹಯಗ್ರೀವ ಹಠ ಸಾಧಿಸುತ್ತಾನೆ.
ನಂತರ ದೇವತೆಗಳು ತಮ್ಮನ್ನು ಕಾಪಾಡುವಂತೆ ಬ್ರಹ್ಮನ ಬಳಿ ಬರುತ್ತಾರೆ. ಬ್ರಹ್ಮನು ಕೂಡ ಹಯಗ್ರೀವನ ಬಳಿ ಹೋರಾಡಿ, ಸೋತು, ನೀವು ವಿಷ್ಣುವಿನ ಬಳಿ ಸಹಾಯ ಕೇಳಿ ಎಂದು ದೇವತೆಗಳಿಗೆ ಹೇಳುತ್ತಾನೆ. ಆಗ ದೇವತೆಗಳು ವಿಷ್ಣುವಿನ ಬಳಿ ಹೋಗುತ್ತಾರೆ. ಆದ್ರೆ ವಿಷ್ಣು ಗಾಢ ನಿದ್ರೆಯಲ್ಲಿರುತ್ತಾರೆ. ದೇವತೆಗಳು ಎಷ್ಟೇ ಎಬ್ಬಿಸಿದರೂ ಏಳುವುದಿಲ್ಲ.
ದೇವತೆಗಳು ಮತ್ತೆ ಬ್ರಹ್ಮನ ಬಳಿ ಹೋಗುತ್ತಾರೆ. ಬ್ರಹ್ಮ ಮವ್ರಿ ಎಂಬ ಹುಳುವನ್ನು ಬಿಡುತ್ತಾನೆ. ಆ ಹುಳು, ವಿಷ್ಣುವಿನ ತಲೆಯ ಬಳಿ ಇದ್ದ ಬಿಲ್ಲನ್ನು ಕತ್ತರಿಸುತ್ತದೆ. ಬಿಲ್ಲು ಕತ್ತರಿಸಿದ ರಭಸಕ್ಕೆ ವಿಷ್ಣುವಿನ ಶಿರವೇ ತುಂಡಾಗುತ್ತದೆ. ಆಗ ದೇವತೆಗಳು ಬೇಸರಗೊಂಡು ಬ್ರಹ್ಮನ ಬಳಿ ಇದಕ್ಕೆ ಪರಿಹಾರ ಕೇಳುತ್ತಾರೆ. ಆಗ ಬ್ರಹ್ಮ ದೇವಿ ಭಗವತಿಯನ್ನು ಪ್ರಾರ್ಥಿಸಲು ಹೇಳುತ್ತಾಳೆ.
ಈ ವೇಳೆ ಪ್ರತ್ಯಕ್ಷಳಾದ ದೇವಿ, ಈ ಘಟನೆಗೆ ಕಾರಣ ಕೇಳುತ್ತಾಳೆ. ದೇವತೆಗಳು ಎಲ್ಲವನ್ನೂ ವಿವರಿಸುತ್ತಾರೆ. ಆಗ ಭಗವತಿ, ವಿಷ್ಣುವಿಗೆ ಕುದುರೆಯ ಮುಖವಾಡ ತಂದು ಹಾಕಲು ಹೇಳುತ್ತಾಳೆ. ದೇವಿಯ ಮಾತಿನಂತೆ ದೇವತೆಗಳು ವಿಷ್ಣುವಿಗೆ ಕುದುರೆಯ ಮುಖವನ್ನು ತಂದು ಸೇರಿಸುತ್ತಾರೆ. ನಂತರ ಸಹಾಯ ಕೋರುತ್ತಾರೆ. ಆಗ ವಿಷ್ಣು ತನ್ನ ಹಯಗ್ರೀವ ಅವತಾರದಲ್ಲಿ ಹಯಗ್ರೀವನೆಂಬ ರಾಕ್ಷಸನ ಸಂಹಾರ ಮಾಡುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




