Thursday, October 17, 2024

Latest Posts

ಅಂಬಾ ಭವಾನಿ ದೇವಿಯ ಅದ್ಧೂರಿ ವಿಸರ್ಜನೆ..!

- Advertisement -

www.karnatakatv.net : ರಾಯಚೂರು: ನವರಾತ್ರಿಯ 11ನೇ ದಿನವಾದ ಇಂದು ಅಂಬಾ ಭವಾನಿ ವಿಷೇಶ ಅಲಂಕಾರ ಮಾಡಿ ರಾಯಚೂರು ನಗರದ 33ನೇ ವಾರ್ಡ್ ನ ಯರಮರಸ್ ಬಡಾವಣೆಯಲ್ಲಿ ಅಂಬಾ ಭವನಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ದಿನ ನಿತ್ಯ ಅಂಬಾ ಭವನಿಗೆ ಬೇಡಿಕೊಂಡ ಭಕ್ತರು ಅಮ್ಮನವರಿಗೆ ಸೀರೆ ಉಡಿಸಿ , ಉಡಿ ತುಂಬುವುದು , ಕಂಚಿನ ಮೂರ್ತಿ ಗೆ ಅಭಿಷೇಕ ಮಾಡಿಸುತ್ತಾರೆ . ಹೀಗೆ ದಿನ ನಿತ್ಯ ಮುಂಜಾನೆ, ಸಂಜೆ ದಿನಕ್ಕೆ 2 ಬಾರಿ ಅಮ್ಮನವರಿಗೆ ವಿಶೇಷ ಪೂಜೆ ಮಾಡುತ್ತಾರೆ .ಸಂಜೆ ವೇಳೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ವಿಶೇಷ ಮಂಗಳಾರತಿ ಮಾಡುತ್ತಾರೆ. ಇದೇ ಸಮಯದಲ್ಲಿ ಕೆಲವರಿಗೆ ದೇವರು ಮೇಮೆಲೆ ಬರುವ ಪ್ರತೀತಿ ಇದೆ. 9 ದಿನಗಳ ಕಾಲ ಅಂಬಾ ಭವಾನಿ ಪೂಜೆ ಮಾಡುತ್ತರೆ . ಇಂದು ನೂರಾರು ಭಕ್ತರು ದಾಂಡಿಯಾ ಆಡಿ ರಸ್ತೆಯಲ್ಲಿ ಮೇರವಣಿಗೆ ಮೂಲಕ ಅಂಬಾ ಭವಾನಿ ದೇವಿಯ ವಿಸರ್ಜನೆ ಮಾಡುತ್ತಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss