ಇತ್ತೀಚೆಗೆ ನಾದಬ್ರಹ್ಮ ಡಾ.ಹಂಸಲೇಕ ರವರು ಪೇಜಾವರ ಶ್ರೀಗಳ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಹಗುರವಾಗಿ ಮಾತನಾಡಿದ್ದರು, ಇದರಿಂದ ಈ ವಿಷಯ ವ್ಯಾಪಕವಾಗಿ ಚರ್ಚೆಗೀಡಾಗಿತ್ತು. ಎಲ್ಲರೂ ಹಂಸಲೇಕರ ವಿರುದ್ದ ವಿರೋಧಿಸಲು ಶುರುಮಾಡಿದರು. ಇದೀಗ ಚಲನಚಿತ್ರದ ನಟ ಜಗ್ಗೇಶ್ ರವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಜಗ್ಗೇಶ್, ಮಾತು ಬಲ್ಲವನಿಗೆ ಚಪ್ಪಾಳೆ ಮೃಷ್ಟಾನ್ನದಂತೆ ಆದರು ಆ ಮಾತು ಹೊಟ್ಟೆತುಂಬಿಸದು. ಮಾತು ಕೆಟ್ಟರೆ ಆ ಮೃಷ್ಟಾನ್ನವೇ ವಿಷವಾಗಿ ಅಜೀರ್ಣ ಆಗುವುದು, ಸಾಮಾಜಿಕ ಕ್ಷೇತ್ರ ಹಗ್ಗದ ಮೇಲಿನ ನಡಿಗೆ ! ಪಡೆವುದು ಸುಲಭ ಕಳೆದುಕೊಳ್ಳಲು ಕ್ಷಣ ಸಾಕು ಎಂದು ಬರೆದುಕೊಳ್ಳುವ ಮೂಲಕ ಮಾರ್ಮಿಕವಾಗಿ ಹಂಸಲೇಖರಿಗೆ ತಿವಿದಿದ್ದಾರೆ .
ಜೊತೆಗೆ ಬಸವಣ್ಣನವರ ವಚನದ ಮೂಲಕ ಹಂಸಲೇಕರಿಗೆ ಕಿವಿಮಾತು ಹೇಳಿರುವ ಜಗ್ಗೇಶ್ ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಖಃ ಕ್ಕೆ ಅಳುವವರ ಮೆಚ್ಚ ! ಕೂಡಲ ಸಂಗಮದೇವ ಎಂಬ ವಚನ ಪೋಸ್ಟ್ ಮಾಡಿದ್ದಾರೆ .
ಪೇಜಾವರ ಶ್ರೀ ಕುರಿತಾದ ಹಂಸಲೇಕ ಹೇಳಿಕೆಗೆ ಜಗ್ಗೇಶ್ರಿಂದ ಪ್ರತಿಕ್ರಿಯೆ..!
- Advertisement -
- Advertisement -