Friday, June 20, 2025

Latest Posts

ಸುಳ್ಯ : ಅನ್ಯಕೋಮಿನ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ ವಿದ್ಯಾರ್ಥಿಗೆ ಥಳಿತ

- Advertisement -

Manglore  News:

ಸುಳ್ಯದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಹಿಂದೂ ಸಮುದಾಯದ ಹುಡುಗಿಯ ಜೊತೆ ಸ್ನೇಹ ಸಂಬಂಧ ಹೊಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅನ್ಯ ಸಮುದಾಯದ ವಿದ್ಯಾರ್ಥಿಗಳು ಆತನನ್ನು ಥಳಿಸಿರುವ ಘಟನೆ ನಡೆದಿದೆ.

ಜಾಲ್ಸೂರು ಗ್ರಾಮದ ಪೈಚಾರ್ ನಿವಾಸಿ ಮಹಮ್ಮದ್ ಸನೀಫ್ (19) ಎಂಬ ವಿದ್ಯಾರ್ಥಿಗೆ ದೀಕ್ಷಿತ್ ಧನುಷ್ ,ಪ್ರಜ್ವಲ್. ತನುಜ್ , ಅಕ್ಷಯ್ , ಮೋಕ್ಷಿತ್ ,ಗೌತಮ್ , ಮತ್ತು ಇತರರು ಥಳಿಸಿರುವುದಾಗಿ ಸನೀಫ್ ದೂರು ನೀಡಿದ್ದಾನೆ. ಅದೇ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿಯೊಂದಿಗೆ ಸನೀಫ್ ಸ್ನೇಹ ಬೆಳೆಸಿದ್ದು, ಇದನ್ನು ವಿರೋಧಿಸಿದ ಅನ್ಯ ಸಮುದಾಯದ ವಿದ್ಯಾರ್ಥಿಗಳು ಸನೀಫ್ ನನ್ನು ಥಳಿಸಿದ್ದಾರೆ.

ಆಗಸ್ಟ್ 30 ರಂದು ಬೆಳಿಗ್ಗೆ ಅದೇ ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದದೀಕ್ಷಿತ್ ಮತ್ತು ಧನುಷ್ ಅವರು ಸನಿಫ್‌ಗೆ ಕರೆ ಮಾಡಿ ಮಾತನಾಡಬೇಕು ಎಂದು ಹೇಳಿ ಕಾಲೇಜು ಮೈದಾನಕ್ಕೆ ಕರೆದೊಯ್ದರು. ಕಾಲೇಜಿನ ಆಟದ ಮೈದಾನಕ್ಕೆ ಬಂದ ತಕ್ಷಣ ಎನ್‌ಎಂಸಿ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಮತ್ತು ಇತರರು ಪಲ್ಲವಿಯೊಂದಿಗೆ ಏಕೆ ಮಾತನಾಡಿದ್ದೀರಿ ಎಂದು ಸನೀಫ್ ಅವರ ಶರ್ಟ್‌ನ ಕಾಲರ್ ಅನ್ನು ಎಳೆದು ಮರದ ತುಂಡುಗಳಿಂದ ಥಳಿಸಿದ್ದಾರೆ ಎಂದು ತಿಳಿದು  ಬಂದಿದೆ.

ಸನಿಫ್ ಕುಟುಂಬದವರಿಗೆ ವಿಷಯ ತಿಳಿಸಿದ್ದು, ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪೋಲೀಸ್ ಠಾಣೆಯಲ್ಲೇ ಪೇದೆ ಆತ್ಮಹತ್ಯೆ…!

ರೈಲ್ವೇ ಸಿಬ್ಬಂದಿ ಎದುರೇ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ..!

ಪತ್ನಿ,ಅತ್ತೆ ಜೊತೆ ಅಪ್ರಾಪ್ತ ಮಗಳಿಗೂ ಚಾಕುವಿನಿಂದ ಇರಿದ ಪಾಪಿ…!

- Advertisement -

Latest Posts

Don't Miss