Friday, June 20, 2025

Latest Posts

ಜೆಡಿಎಸ್ ಅಭ್ಯರ್ಥಿಗಳ ಕೈಯಲ್ಲಿ ಪ್ರಮಾಣ ಮಾಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ.. ಯಾಕೆ ಗೊತ್ತಾ..?

- Advertisement -

ಕೋಲಾರ: 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಐತಿಹಾಸಿಕ ಪಂಚರತ್ನ ರಥಯಾತ್ರೆಗೆ ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದಾರೆ.

ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾಡಿನ ಜನರಿಗೆ ಒಳಿತಾಗಬೇಕು, ಪ್ರತಿ ಕುಟುಂಬಕ್ಕೆ ವಿದ್ಯೆ, ಆರೋಗ್ಯ, ರೈತ ಚೈತನ್ಯ, ಯುವಕರು ಮತ್ತು ಮಹಿಳೆ ಸಬಲೀಕರವಾಗಬೇಕು. ರಾಜ್ಯದಲ್ಲಿರುವ ಎಲ್ಲರಿಗೂ ಉಚಿತವಾಗಿ ಆರೋಗ್ಯ, ಶಿಕ್ಷಣ, ಸಿಗಬೇಕು. ಪ್ರತಿ ಕುಟುಂಬಕ್ಕೆ ನಿವೇಶನ, ಮನೆ ಕೊಡಬೇಕು. ಇದು ನಮ್ಮ ಸಂಕಲ್ಪ, ಈ ಬಾರಿ ನಮ್ಮ ಕಾರ್ಯಕ್ರಮದ ಆಧಾರದ ಮೇಲೆ ನಮಗೆ ಪೂರ್ಣ ಬೆಂಬಲ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಶಕ್ತಿ ದೇವತೆಗೆ ಇಷ್ಟವಾದ ದೀಪಾರಾಧನೆ ಮಾಡಿ…!

ಈಗಾಗಲೆ ಪಟ್ಟಿ ಸಿದ್ಧವಾಗಿದೆ. ಆದರೆ ಇಂದು ಕನ್ನಡ ರಾಜ್ಯೋತ್ಸವ ಇರುವ ಕಾರಣ ಎಲ್ಲಾ ಶಾಸಕರಿಗೆ ಅವರ ಭಾಗದಲ್ಲಿಯೇ ಆಚರಣೆ ಮಾಡುವಂತೆ ಹೇಳಿದ್ದೇನೆ. ಹಾಗಾಗಿ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡುವುದಾ ಅಥವಾ ಎರಡು ಮೂರು ದಿನದಲ್ಲಿ ಬೆಂಗಳೂರಿನಲ್ಲಿ ಸಭೆ ಮಾಡಿ ಬಿಡುಗಡೆ ಮಾಡುವುದಾ ಎಂಬುದನ್ನು ದೇವೇಗೌಡರ ಬಳಿ ಸಲಹೆ ಪಡೆದು ತೀರ್ಮಾನ ಮಾಡುತ್ತೇನೆ. ನಮ್ಮ ಅಭ್ಯರ್ಥಿಗಳಿಗೆ ಈಗಾಗಲೇ ತಮ್ಮ ಕ್ಷೇತ್ರಗಳಲ್ಲಿ ಕೆಲಸಗಳನ್ನು ಆರಂಭ ಮಾಡಿದ್ದಾರೆ.

ಇತ್ತೀಚಿಗೆ ದೇಶದಲ್ಲಿ ಬಿಜೆಪಿ ಮಾಡುತ್ತಿರುವ ಆಪರೇಷನ್ ಗಳಿಗೆ ನಾವು ಅಭ್ಯರ್ಥಿಗಳ ಕೈಯಲ್ಲಿ ಪ್ರಮಾಣ ಮಾಡಬೇಕಾಗಿತ್ತು, ಅದಕ್ಕಾಗಿ ಇಂದು ನಮ್ಮ‌ ಎಲ್ಲಾ ನಾಯಕರಿಗೆ ಪ್ರಮಾಣ ಮಾಡಿಸಬೇಕಾಗಿತ್ತು. ಹಾಗಾಗಿ ಇಂದು ಎಲ್ಲರ ಹೆಸರು ಘೋಷಣೆ ಮಾಡಿ ಅವರಿಗೆ ಪಮಾಣ ಮಾಡಿಸುವ ಉದ್ದೇಶವಿತ್ತು.‌ ಆದ್ರೆ ಅದು‌ ಪರಿಪೂರ್ಣವಾಗಿಲ್ಲ,‌ ಮುಂದೆ‌ ದೇವೇಗೌಡರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ‌ ಪಟ್ಟಿಯನ್ನು ಬಿಡುಗಡೆ ಮಾಡಲಾಗವುದು ಎಂದರು.

ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!

ಇನ್ನು ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮ್ಮ ಮುಖಂಡರು ಕೋಲಾರದಲ್ಲಿ ನಿಲ್ಲಬೇಕೆಂದು ಮನವಿ ಮಾಡಿದ್ದಾರೆ. ಅಂತಹ ಸಮಯ ಸಂದರ್ಭ ಬಂದಾಗ ಅದಕ್ಕೆ ಉತ್ತರ ನೀಡುತ್ತೇನೆ. ಸಿದ್ದರಾಮಯ್ಯಗೆ ಸಮರ್ಥ ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿ ಕೋಲಾರ ಕ್ಷೇತ್ರದಲ್ಲೂ ಇದ್ದಾರೆ ಎಂದರು.

ಬಿಜೆಪಿ ಅವರು ಮಾಡಿದ ರಥ ಯಾತ್ರೆಗಳೆಲ್ಲ ಏನು? ಅವರನ್ನೆಲ್ಲಾ ಮನೆಗೆ ಕಳುಹಿಸಿ ಇವರು ಮಜಾ ಮಾಡಿಕೊಡು ಕುಳಿತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ತಿರುಗೇಟು ನೀಡಿದರು. ರಾಮನಗರದಲ್ಲಿ ಯಾವ ಅರೋಗ್ಯ ಯಾರಿಗೆ ಶಿಕ್ಷಣ ಕೊಟ್ಟಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣಗೆ ಕುಮಾರಸ್ವಾಮಿ  ಟಾಂಗ್ ನೀಡಿದರು.

ಮುಳಭಾಗಿಲು ನಗರದ ಹೊರಹೊಲಯದ ರಾಷ್ಟೀಯ ಹೆದ್ದಾರಿ ಸಮೀಪ ಬೃಹತ್ ಸಮಾವೇಶಕ್ಕೆ ಮಳೆರಾಯ ಅಡ್ಡಿಯಾಗಿದ್ದು ಬೆಳಗ್ಗೆ ಇಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜೆಡಿಎಸ್ ಕಾರ್ಯಕರ್ತರು ಹೈರಾಣಾಗಿದ್ದಾರೆ .

- Advertisement -

Latest Posts

Don't Miss