Film News:
ದುನಿಯಾ ವಿಜಿಯವರು ತೆಲುಗಿನ ವೀರಸಿಂಹರೆಡ್ಡಿ ಸಿನಿಮಾದಲ್ಲಿ ಕಳನಾಯಕನ ಪಾತ್ರದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಜನವರಿ 12 ರಂದು ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ . ಈ ಸಿನಿಮಾದ ಕುರಿತು ಮಾಧ್ಯಮಗೋಷ್ಠಿಯನ್ನು ಇಂದು ದುನಿಯಾ ವಿಜಯ್ ಅವರು ಅವರ ಹುಟ್ಟುರಾದ ಆನೇಕಲ್ ನ ಕುಂಬಾರನಹಳ್ಳಿಯ ಅವರ ಜಮೀನಿನಲ್ಲಿ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು . ಇನ್ನು ಈ ಸಿನಿಮಾದಲ್ಲಿ ಅವರಿಗೆ ಸಲಗ ಸಿನಿಮಾ ಸಕ್ಸಸ್ ನಂತರ ತೆಲುಗು ಸಿನಿಮಾದಲ್ಲಿ ಕಳನಾಯಕನಾಗಿ ನಟಿಸಲು ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳನ್ನು ತಿಳಿಸಿದರು .
ಅದೇರೀತಿ ವೀರಸಿಂಹರೆಡ್ಡಿಯಲ್ಲಿ ನಾಯಕನಾಗಿ ನಟಿಸಿದ ನಂದಮೂರಿ ಬಾಲಕೃಷ್ಣ ಅವರ ವ್ಯಕ್ತಿತ್ವ ಮತ್ತು ಸಿನಿಮಾ ಚಿತ್ರೀಕರಣ ಸಮಯದಲ್ಲಿ ಇವರಿಬ್ಬರ ಮಧ್ಯೆ ಇದ್ದಂತಹ ಭಾಂದವ್ಯವನ್ನು ಮತ್ತು ಬಾಲಣ್ಣನವರು ದುನಿಯಾ ವಿಜಿಯವರನ್ನ ಕರೆಯುವ ರೀತಿಯನ್ನು ಮಾಧ್ಯಮದವರ ಮುಂದೆ ಹಂಚಿಕೊಂಡರು.
ಇನ್ನು ವೀರಸಿಂಹರೆಡ್ಡಿ ಸಿನಿಮಾ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ್ದಲ್ಲಿ ಭಾಗಿಯಾದ ದುನಿಯಾ ವಿಜಿ ಅವರು ವೇದಿಕೆಯ ಮೇಲೆ ಮಾತನಾಡುವ ಸಂದರ್ಭದಲ್ಲಿ ತೆಲುಗು ನೆಲದಲ್ಲಿ ತೆಲುಗು ನಟ ಬಾಲಣ್ಣನರ ಮುಂದೆ ತಾಯಿ ಭುವನೇಶ್ವರಿಯನ್ನು ನೆನೆದು ‘ಜೈ ಕರ್ನಾಟಕ’ ಎಂದು ಹೇಳುವ ಮೂಲಕ ಕನ್ನಡದ ಘೋಷಣೆಯ ಕಹಳೆಯನ್ನು ತೆಲುಗು ನೆಲದಲ್ಲಿ ಮೊಳಗಿಸಿದರು .
ಜೊತೆಗೆ ದುನಿಯಾ ವಿಜಿಯವರನ್ನ ಬೇಟಿಯಾದಂತಹ ಅಭಿಮಾನಿಗಳು ವೀರಸಿಂಹರೆಡ್ಡಿ ಪೋಸ್ಟರ್ ಇರುವ ಕ್ಯಾಲೆಂಡರ್ ಅನ್ನು ವಿಜಿಯವರ ಕೈಯಾರೆ ಬಿಡುಗಡೆ ಮಾಡಿಸಿದರು.
ಹಾಗೂ ದುನಿಯಾವಿಜಿಯವರಿಗೆ ಸನ್ಮಾನ ಮಾಡಲು ಅಭಿಮಾನಿಗಳು ತಂದ್ದಿದ್ದಂತಹ ಹಾರ ಮತ್ತು ಶಾಲುಗಳನ್ನು ಹಾಕಿಸಿಕೊಳ್ಳದೆ ಅಭಿಮಾನಿಗಳಿಗೆ ಹಾಕಿ ಗೌರವ ಸಲ್ಲಿಸಿದರು.ಇನ್ನು ಅವರನ್ನಯ ಭೇಟಿ ಮಾಡಲು ಬಂದಂತಹ ಅಭಿಮಾನಿಗಳಿಗೆ ಬಿರಿಯಾನಿ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಬಿಗ್ಬಾಸ್ನಲ್ಲಿ ಸಿಕ್ಕ ದುಡ್ಡನ್ನ ಏನ್ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ರೂಪಿ ಏನಂದ್ರು ಗೊತ್ತಾ..?