Political News:
ಕರ್ನಾಟಕ ವಿಧಾನ ಸಭೆ ಚುನಾವಣೆ ಸದ್ಯ ಸಮೀಪಿಸುತ್ತಿದ್ದಂತೆ ಇದೀಗ ರಾಜಕೀಯ ನಾಯಕರ ಹೈಡ್ರಾಮಾ ಶುರುವಾಗಿದೆ. ಸರಕಾರಕ್ಕೆ ಇದೀಗ ಸಿದ್ದರಾಮಯ್ಯರೇ ಟಾರ್ಗೆಟ್ ಎನ್ನುವಂತಿದೆ. ಈ ಕಾರಣದಿಂದಲೇ ಸರಕಾರ ಟಿಪ್ಪು ನಿಜ ಕನಸುಗಳು ಎನ್ನುವಂತಹ ಪುಸ್ತಕವನ್ನೇ ಇದೀಗ ಸಿದ್ದರಾಮಯ್ಯ ನಿಜ ಕನಸುಗಳು ಎಂಬಂತಹ ಪುಸ್ತಕವನ್ನಾಗಿ ಮಾಡಿ ಬಿಡುಗಡೆಗೆ ಸಜ್ಜಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.http://ಕರ್ನಾಟಕದ ಸಂಸ್ಕೃತಿಯನ್ನು ನಿರ್ಲಕ್ಷಿಸಿತಾ ಸರಕಾರ..?
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದೆ. ಇಂದು ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ. ಖಡ್ಗ ಹಿಡಿದುಕೊಂಡು ಡ್ರೆಸ್ ಹಾಕಿದ್ದವರು ಯಾರು? ನನ್ನ ತೇಜೋವಧೆ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿಯವರಿಗೆ ಎಚ್ಚರಿಕೆ ನೀಡಿದ್ದಾರೆ.ಜೊತೆಗೆ ಇದೀಗ ಕಾಂಗ್ರೆಸ್ ಪ್ರತಿಭಟನೆಗೂ ಮುಂದಾಗಿದ್ದಾರೆ. http://ತಾಯಿ ಮೇಲೆ ಆಣೆ ಮಾಡಿ ಕೊಟ್ಟ ಮಾತು ತಪ್ಪಿದ್ದಾರೆ ಸಿಎಂ..!? ಸರಕಾರಕ್ಕೆ ಮತ್ತೆ ಎಚ್ಚರಿಕೆ ನೀಡಿದ ಸ್ವಾಮೀಜಿ..!
ಆದರೆ ಇವೆಲ್ಲದರ ನಡುವೆ ಜನಸಾಮಾನ್ಯರು ಇದೀಗ ನಮ್ಮ ಕನಸುಗಳನ್ನು ವ್ಯಕ್ತಪಡಿಸಿದರೂ ಸರಕಾರ ಸುಮ್ಮನಾಗಿದೆ. ನಮ್ಮ ಕನಸುಗಳನ್ನು ನನಸು ಮಾಡೋರು ಯಾರು ಬಡ ಬಗ್ಗಲಿಗರ ಕನಸಲ್ಲ ಕನಿಷ್ಟ ಅವರ ದೈನಂದಿನ ಜೀವನವಾದರೂ ಹಸಿವಿಲ್ಲದೆ ನಿರಾಳವಾಗಿಸುವಂತೆ ಮಾಡಿ ಎಂದು ಅಂಗಲಾಚುತ್ತಿದ್ದಾರೆ.
HDK ಹೊಸ ಬಾಂಬ್..! ಸಂಕ್ರಾಂತಿಗೆ ಕಾದಿದ್ಯಾ ನಾಯಕರಿಗೆ ಬಿಗ್ ಶಾಕ್…!?
ರಾಜ್ಯ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಸ್ಯಾಂಟ್ರೋ ರವಿ ವಿಚಾರ. ಇದೀಗ ಹೆಚ್ ಡಿ ಕುಮಾರಸ್ವಾಮಿ ಕೂಡಾ ಈ ಬಗ್ಗೆ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಯಾಂಟ್ರೋ ರವಿ ಜತೆ ಲಿಂಕ್ ಇರುವ ನಾಯಕರ ರಹಸ್ಯ ಸಿಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಳಿಯಿದ್ದು, ಸಂಕ್ರಾಂತಿಗೆ ರಿಲೀಸ್ ಆಗಬಹುದೆಂದು ವರದಿಯಾಗಿದೆ. ಹೆಚ್.ಡಿ ಕುಮಾರಸ್ವಾಮಿ, ‘ಸ್ಯಾಂಟ್ರೋ ರವಿ ಯಾರವ? ಸಿಎಂ ಅವನನ್ನ ಸಾರ್ ಎನ್ನುತ್ತಾರೆ. ನನ್ನ ಕೆಣಕಿದರೆ ಇವನ ಜತೆ ಇರುವ ವ್ಯಕ್ತಿಗಳ ಹೊರಬಿಡುವ ಬಹಳ ವಿಷಯ ನನ್ನಲ್ಲಿವೆ. ಹುಷಾರ್..’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಹೆಚ್ ಡಿ ಕುಮಾರ ಸ್ವಾಮಿ.