Hassan News:
ಹಾಸನದಲ್ಲಿ ಟಿಕೆಟ್ ಜಟಾಪಟಿ ಜೋರಾಗಿದೆ.ಹೆಚ್ ಡಿ ಕುಮಾರಸ್ವಾಮಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಋಣಾತ್ಮಕವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರೇವಣ್ಣ ಕುಟುಂಬದ ಅಭಿಮಾನಿಗಳು ಪ್ರತಿಭಟನೆಯನ್ನೂ ಮಾಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಬಿಯಾನವೊಂದನ್ನು ಶುರು ಮಾಡಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮಿಳುನಾಡಿನ ಜಯಲಲಿತ ಮಾದರಿಯಾಗಿ ಭವಾನಿ ರೇವಣ್ಣರವರನ್ನು ಪ್ರತಿಬಿಂಬಿಸಿ ಪೋಸ್ಟರ್ ವೈರಲ್ ಮಾಡಿದ್ದಾರೆ.
ತಮಿಳುನಾಡಿನ ಹೆಸರಾಂತ ರಾಜಕಾರಣಿ ಜಯಲಲಿತ ಜನಪರ ಕಾರ್ಯಗಳನ್ನು ಮಾಡಿ ಹೆಸರುವಾಸಿಯಾದವರು.ಇದೀಗ ಭವಾನಿ ರೇವಣ್ಣ ಅಭಿಮಾನಿಗಳು ತಮಿಳುನಾಡಿಗೆ ಜಯಮ್ಮ ಹೇಗೋ ಹಾಸನಕ್ಕೆ ಭವಾನಿ ರೇವಣ್ಣ ಎಂಬುವುದಾಗಿ ಜಯಲಲಿತ ಮತ್ತು ಭವಾನಿ ರೇವಣ್ಣ ಅವರ ಫೋಟೋ ಭಿತ್ತಿಸಿ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಜೊತೆಗೆ ಕರ್ನಾಟಕದ ಮಹಿಳಾ ಶಕ್ತಿ ಮತ್ತೊಂದು ಭರವಸೆ ಭವಾನಿ ಅಮ್ಮ ಎಂಬುವುದಾಗಿ ಬರೆದುಕೊಂಡು ಭವಾನಿ ರೇವಣ್ಣ ಗೆ ಟಿಕೆಟ್ ನೀಡಲು ಪಟ್ಟು ಹಿಡಿದು ಕುಳಿತಿದ್ದಾರೆ.
ಹಾಸನದಲ್ಲಿ ಟಿಕೇಟ್ ಪೈಪೋಟಿ: ಹೆಚ್.ಡಿ.ಕೆಗೆ ಟಾಂಗ್ ಕೊಟ್ಟ ಸೂರಜ್ ರೇವಣ್ಣ