Sunday, September 6, 2026

HD Kumarasswamy

ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ ? ಉತ್ತರ ಕೊಡ್ತಾರ HDK?

ರಾಜ್ಯ ರಾಜಕೀಯದಲ್ಲಿ ಇಂದು ಭಾರೀ ಚರ್ಚೆಗೆ ಕಾರಣವಾದ ತೀವ್ರ ಹೇಳಿಕೆ—ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿಯವರ ವಿರುದ್ಧ ಖಡಕ್ ಪ್ರಶ್ನೆ ಎತ್ತಿದ್ದಾರೆ. ಬಿಜೆಪಿಗೆ ಕೈಜೋಡಿಸಿದ ನಂತರ, ಕುಮಾರಸ್ವಾಮಿ ಅವರ ನಿಲುವು ಸಂಪೂರ್ಣವಾಗಿ ಬದಲಾಗಿದೆ… ಮತ್ತು ‘ಕುಮಾರಸ್ವಾಮಿ ಮನುವಾದಿ ಆಗಿಬಿಟ್ಟಿದ್ದಾರೆ’ ಎಂಬ ತೀವ್ರ ಟೀಕೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಈ ಆರೋಪ ರಾಜ್ಯ ರಾಜಕೀಯ ವಲಯದಲ್ಲಿ...

ಕುಮಾರಸ್ವಾಮಿ ಅಭಿಮಾನಿ ಆತ್ಮಹತ್ಯೆ : ಮೃತನ ಕುಟುಂಬಕ್ಕೆ ನಿಖಿಲ್ ಸಾಂತ್ವನ

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇವೇಗೌಡನದೊಡ್ಡಿಯಲ್ಲಿ ದಾರುಣ ಘಟನೆ ನಡೆದಿದೆ. ಕುಟುಂಬದಲ್ಲಿನ ವೈಯಕ್ತಿಕ ಸಮಸ್ಯೆಯಿಂದ ಖಿನ್ನಗೊಂಡಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ 31ವರ್ಷದ ಮಹದೇವು ಎಂಬ ಯುವಕ ಮೂರು ದಿನಗಳ ಹಿಂದೆ ಮರಕ್ಕೆ ನೇಣು ಬಿಗಿದು ಜೀವ ತ್ಯಜಿಸಿದ್ದಾನೆ. ಭಾನುವಾರ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು. ಮಹದೇವು ಕುಮಾರಸ್ವಾಮಿ ಅವರ...

ನನ್ನ ಬಗ್ಗೆ ಚರ್ಚೆ ಮಾಡಲು ನಿನಗೆ ಯೋಗ್ಯತೆಯೇ ಇಲ್ಲ..

ಕುಮಾರಸ್ವಾಮಿ ಎಲ್ಲಿ ಕೈಗಾರಿಕೆ ತರುತ್ತಾರೆ ಎಂದು ಹೇಳಲಿ. ಅಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡೋಣ ಅಂತಾ ಡಿಕೆಶಿ ಪ್ರಶ್ನೆಗೆ, ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೆಚ್‌ಡಿಕೆ ಖಡಕ್‌ ಕೌಂಟರ್‌ ಕೊಟ್ಟಿದ್ದಾರೆ. ಇಲ್ಲಿ ಕೈಗಾರಿಕೆ ನಿರ್ಮಾಣ ಮಾಡೋದು ರಾಜ್ಯ ಸರ್ಕಾರದ ಕೆಲಸ. ರಾಜ್ಯದಲ್ಲಿ ಅಂತಹ ವಾತಾವರಣ ನಿರ್ಮಿಸಬೇಕಿದೆ. ನನಗೆ ಕೇಂದ್ರದಲ್ಲಿ ಕೊಟ್ಟಿರುವ ಇಲಾಖೆ ಕಾರ್ಖಾನೆ ತರೋದಲ್ಲ. ಕರ್ನಾಟಕಕ್ಕೆ ನಾಲ್ಕೂವರೆ ಸಾವಿರ ಬಸ್‌...

HDK vs DK ಟಾಕ್‌ ವಾರ್‌ : HDKಗೆ ನನ್ನನ್ನು ಕಂಡರೆ ’ಲವ್’ ಜಾಸ್ತಿ – ಡಿಕೆಶಿ

ಕೆಲವು ತಿಂಗಳಿನಿಂದ ರಾಜ್ಯ ರಾಜಕೀಯದ ಬಗ್ಗೆ ಮೌನವಾಗಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇದ್ದಕ್ಕಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕಾ ಪ್ರಹಾರವನ್ನೇ ಡಿಸಿಎಂ ವಿರುದ್ದ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ಅವರಿಗೆ ನನ್ನನ್ನು ಕಂಡರೆ ಲವ್‌ ಜಾಸ್ತಿ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಅವರು ನನ್ನ ವಿಚಾರದಲ್ಲಿ ಕೇವಲ ಹಿಟ್...

ಬಿಜೆಪಿ ಜೊತೆ ಜೆಡಿಎಸ್‌ ವಿಲೀನಗೊಳ್ಳುತ್ತಾ?

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌, ಭವಿಷ್ಯದಲ್ಲಿ ಬಿಜೆಪಿ ಪಕ್ಷದೊಳಗೆ ವಿಲೀನಗೊಳ್ಳುತ್ತಾ? ಇಂತಹ ಎಲ್ಲಾ ಲಕ್ಷಣ ಕಾಣುತ್ತಿವೆ ಎಂದು ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿರುವ ಮಾತು ಹೊಸ ಚರ್ಚೆಗೆ ಕಾರಣವಾಗಿದೆ. ಸುಳ್ಳಿನ ಪಕ್ಷವೆಂದೇ ಬಿಜೆಪಿಗರು ಹೆಸರುವಾಸಿ. ಇಂಥಾ ಪಕ್ಷದೊಳಗೆ ಜೆಡಿಎಸ್‌ ವಿಲೀನಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇತಿಹಾಸದ ವಿವರಣೆಯಲ್ಲಿ, ಅತ್ಯಂತ ಅವಸರದಿಂದ ಪ್ರತಿಕ್ರಿಯೆ ನೀಡ್ತಿದ್ದಾರೆ. ಇದನ್ನ...

ಗಣಿಗ ರವಿಕುಮಾರ್ ಮುಖ್ಯಮಂತ್ರಿಯಾದರೆ ನನಗೆ ಸಂತೋಷ : ಕೈ ಶಾಸಕನ ಪರ ಬ್ಯಾಟ್ ಬೀಸಿದ ಹೆಚ್.ಡಿ. ರೇವಣ್ಣ

ಮೈಸೂರು : ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅದು ನಮ್ಮ ಪಕ್ಷವೂ ಅಲ್ಲ, ಅವರ ಹೈಕಮಾಂಡ್ ನಾಯಕರು ಇದ್ದಾರೆ. ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೋ, ಇಲ್ಲವೋ ನಾನು ಹೇಗೆ ಹೇಳಲಿ. ಆದರೆ ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗಿದ್ದಾರೆ. ಗಣಿಗ ರವಿಕುಮಾರ್‌ ಮುಂದೆ ಮುಖ್ಯ ಮಂತ್ರಿಯಾದರೂ ಸಂತೋಷ. ಅವರಿಗೆ ಅವಕಾಶ...

‘ಕೈ’ ಬೆಂಕಿಗೆ ತುಪ್ಪ ಸುರಿದ MLA ಬಾಲಕೃಷ್ಣ!

ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುದಾನ ಸಿಗ್ತಿಲ್ಲ. ಇದು ಬಿಜೆಪಿ, ಜೆಡಿಎಸ್ ಶಾಸಕರ ಮಾತಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳಿಂದ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ, ಎನ್.ವೈ. ಗೋಪಾಲಸ್ವಾಮಿ, ಅನುದಾನ ಸಿಕ್ತಿಲ್ಲ. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಶಾಸಕರಾಗಿದ್ದುಕೊಂಡು ಚರಂಡಿಯನ್ನೂ ಮಾಡಿಸೋಕೆ ಆಗ್ತಿಲ್ಲ ಅಂತಾ,...

Pralhad Joshi ; ಕಾಂಗ್ರೆಸ್ ಸರ್ಕಾರ ಬ್ಯಾಕ್ ಮೇಲ್ ತಂತ್ರ – ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಳೇ ಪ್ರಕರಣವನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೇಸ್ ಬಗ್ಗೆ ಮಾತನಾಡಿದರೆ, ನಿಮ್ಮ ಕೇಸ್ ಹೊರಗೆ ತರುತ್ತೇವೆ ಎಂಬ ಥೆಯರಿ ಕಾಂಗ್ರೆಸ್ ನದ್ದಾಗಿದೆ ಎಂದರು. https://youtu.be/kOobBFbULZU?si=pFZ9ZZ6OPJgfffkC   ಕುಮಾರಸ್ವಾಮಿ...

ವಿಧಾನಸಭೆಯಲ್ಲಿ ಬಿಜೆಪಿಗೆ ವಾಗ್ಮಿಗಳ ಕೊರತೆ?

ಕರ್ನಾಟಕ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಧೈರ್ಯದಿಂದ ತರಾಟೆಗೆ ತೆಗೆದುಕೊಳ್ಳಲು ಬಿಜೆಪಿಗೆ ಉತ್ತಮ ವಾಗ್ಮಿಗಳ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಹಲವರು ನಾಯಕರ ಅನುಪಸ್ಥಿತಿ ಕಾಡೋದು ಸತ್ಯವಾಗಿದೆ. ಯಾಕಂದ್ರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಮಾಜಿ...

ತಮಿಳುನಾಡಿನಲ್ಲಿ ಜಯಮ್ಮ..?! ಹಾಸನದಲ್ಲಿ ಭವಾನಿ ಅಮ್ಮ…!

Hassan News: ಹಾಸನದಲ್ಲಿ ಟಿಕೆಟ್ ಜಟಾಪಟಿ  ಜೋರಾಗಿದೆ.ಹೆಚ್ ಡಿ ಕುಮಾರಸ್ವಾಮಿ ಭವಾನಿ  ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಋಣಾತ್ಮಕವಾಗಿ  ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರೇವಣ್ಣ ಕುಟುಂಬದ ಅಭಿಮಾನಿಗಳು ಪ್ರತಿಭಟನೆಯನ್ನೂ ಮಾಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಬಿಯಾನವೊಂದನ್ನು ಶುರು ಮಾಡಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮಿಳುನಾಡಿನ ಜಯಲಲಿತ ಮಾದರಿಯಾಗಿ ಭವಾನಿ ರೇವಣ್ಣರವರನ್ನು ಪ್ರತಿಬಿಂಬಿಸಿ ...
- Advertisement -spot_img

Latest News

ಯಾವ ಪುರುಷಾರ್ಥಕ್ಕೆ ಈ ‘ಸಾಧನಾ ಸಮಾವೇಶ’, ಸಿಎಂ ಅವರೇ?: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್...
- Advertisement -spot_img