ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ, ಈಗಾಗಲೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಕರ್ನಾಟಕದ ಪ್ರಚಾರ ಆರಂಭಿಸಿದ್ದಾರೆ.
ಆದ್ರೆ ಯಾವುದೇ ಪಕ್ಷದವರು ಪ್ರಚಾರ ಮಾಡುವ ವೇಳೆ, ಯಾವುದೇ ಜಾತಿ, ಮತದ ಹೆಸರು ಹೇಳಿ, ಅವಮಾನ ಮಾಡಬಾರದು ಅನ್ನೋ ರೂಲ್ಸ್ ಇತ್ತು. ಆದರೆ ಪ್ರಿಯಾಂಕಾ ವಾದ್ರಾ, ಬಿಜೆಪಿಗರು ಲಿಂಗಾಯತರಿಗೆ ಅವಮಾನಿಸಿದ್ದಾರೆಂದು ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಇಲ್ಲಿ ಜಾತಿ ಹೆಸರು ಹೇಳಿರುವ ಪ್ರಿಯಾಂಕಾ ವಾದ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಲಾಗಿದೆ.
ಕೆ.ಆರ್.ನಗರ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಈ ಹೇಳಿಕೆಯನ್ನು ನೀಡಿದ್ದರು. ಆದರೆ ಹೀಗೆ ಹೇಳಿಕೆ ನೀಡುವುದು, ಚುನಾವಣಾ ಪ್ರಚಾರದ ನಿಯಮಕ್ಕೆ ವಿರುದ್ಧವಾಗಿದೆ. ಈ ಕಾರಣಕ್ಕೆ ಪ್ರಿಯಾಂಕಾ ವಿರುದ್ಧ ದೂರು ದಾಖಲಿಸಲಾಗಿದೆ.
ಮೋದಿ ವಿಷದ ಹಾವೆಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ..