‘ಹಾಸನಕ್ಕೆ ಈ ಗಿರಾಕಿ ಒಂದು ಬೈಪಾಸ್ ಮಾಡೋದಕ್ಕೆ ಆಗಿಲ್ಲ’

ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಶಾಸಕ ಪ್ರೀತಂಗೌಡ ಕೆಲಸದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಸನ ವಿಧಾನಸಭಾ ‌ಕ್ಷೇತ್ರದಲ್ಲಿ ಸ್ವರೂಪ್ ಗೆಲ್ಲಿಸಲು ಎಲ್ಲಾ ಸಮುದಾಯ ಸ್ಪಂದಿಸುತ್ತಿವೆ. ಹಾಸನ ಪೊಲೀಸ್ ವ್ಯವಸ್ಥೆಯನ್ನೇ ಹದಗೆಡಿಸಿದ್ದಾರೆ ಎಂದು ರೇವಣ್ಣ ಪರೋಕ್ಷವಾಗಿ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಸನಕ್ಕೆ ಈ ಗಿರಾಕಿ ಒಂದು ಬೈಪಾಸ್ ಮಾಡೋದಕ್ಕೆ ಆಗಿಲ್ಲ. ಕೆಲವು ಇಂಜಿನಿಯರ್ ಗಳ ಜೊತೆ ಸೇರಿ ಗಲ್ಲಿಗಳಿಗೆ ಟಾರ್ ಹಾಕೊಂಡಿದ್ದಾನೆ ಅಷ್ಟೇ. ಅದೂ ಕೂಡ ಕಳಪೆ ಕಾಮಗಾರಿ. ಇವತ್ತು ಹಾಕಿದ ಡಾಂಬಾರು ಬೆಳಿಗ್ಗೆನೆ ಕಿತ್ತು ಬರುತ್ತಿದೆ‌ ಎಂದು ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

ಪ್ರಿಯಾಂಕಾ ವಾದ್ರಾ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು

‘ಈ ಪರ್ಸಂಟೇಜ್ ಗಿರಾಕಿಗಳ ಜೊತೆ ಹೋಗಬಾರದು ಎಂದು ಹೋಗಲಿಲ್ಲ’

‘ಉತ್ತರದಲ್ಲಿ ಗ್ಯಾರೆಂಟಿ ಕೊಟ್ಟು ಜನರೇ ಮನೆಗೆ ಕಳಿಸಿದ್ದಾರೆ. ಕರ್ನಾಟಕ‌ ಮಾತ್ರ ಬಾಕಿ ಇದೆ‌’

About The Author