Thursday, June 19, 2025

Latest Posts

ಸತ್ತಸುದ್ದಿ ಬಂದು 6 ತಿಂಗಳ ಬಳಿಕ ಪ್ರತ್ಯಕ್ಷವಾದ ವ್ಯಕ್ತಿ..!

- Advertisement -

ಬಿಹಾರ: ಯಾವುದಾದರೂ ವ್ಯಕ್ತಿ ಸತ್ತನೆಂದು ಸುದ್ದಿ ತಿಳಿದ ಬಳಿಕ, ಅವನು ಮತ್ತೆ ಮರಳಿ ಬಂದರೆ, ಹೇಗಿರಬೇಡ. ಹಿಗೊಂದು ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರ್‌ ಪೊಲೀಸ್ ಠಾಣೆಗೆ ಈ ವ್ಯಕ್ತಿ ಪತ್ರ ಬರೆದಿದ್ದು, ಈತನನ್ನು ಸೋನುಕುಮಾರ್ ಶ್ರೀವಾತ್ಸವ್ ಎಂದು ಹೇಳಲಾಗಿದೆ. ಸೋನು ಪತ್ರ ಬರೆದಿದ್ದು, ನಾನು ಜೀವಂತವಾಗಿದ್ದೇನೆ. ಮತ್ತು ಪತ್ನಿಯೊಂದಿಗೆ ಗಾಜಿಯಾಬಾದ್‌ನಲ್ಲಿ ವಾಸವಾಗಿದ್ದೇನೆ ಎಂದು ಬರೆದಿದ್ದಾನೆ.

ಕೆಲ ತಿಂಗಳ ಹಿಂದೆ ಸೋನು ಬಿಹಾರದಲ್ಲಿರುವ ತನ್ನ ಮನೆಯಿಂದ ಗಾಜಿಯಾಬಾದ್‌ಗೆ ತೆರಳಿದ್ದಾನೆ. ಹಾಗೆ ತೆರಳುವಾಗ ಕೆಲ ಸಾಮಾನುಗಳನ್ನು ಖರೀದಿಸಲು 50 ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದಾನೆ. ನಂತರ ಪಕ್ಕದ ಹಳ್ಳಿಯ ನೀಲಂಕುಮಾರಿಯೊಂದಿಗೆ ಗಾಜಿಯಾಬಾದ್ ತಲುಪಿದ್ದಾನೆ.

ಆಗ ಸೋನು ಮನೆಯವರು ತಮ್ಮ ಮಗ ಕಾಣುತ್ತಿಲ್ಲವೆಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಕತ್ತು ಸೀಳಿರುವ ಸ್ಥಿತಿಯಲ್ಲಿ ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇದು ತಮ್ಮದೇ ಮಗ ಎಂದು ಸೋನು ತಂದೆ ತಾಯಿ ಹೇಳಿದ್ದಾರೆ. ಆಗ ಪೊಲೀಸರು ಅಪಹರಿಸಿ, ಕೊಲೆ ಮಾಡಿದ ಕೇಸನ್ನ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದರು.

ಹಾಗಾಗಿ ಸೋನು ಈಗ ಪತ್ರ ಬರೆದಿದ್ದು, ತಾನು ಬದುಕಿದ್ದೇನೆ. ಮತ್ತು ತಾನು ಪ್ರೀತಿಸಿದ ಹುಡುಗಿಯಾದ ನೀಲಂಕುಮಾರಿಯೊಂದಿಗೆ ಮದುವೆಯಾಗಿ, ಸಂಸಾರ ನಡೆಸುತ್ತಿದ್ದೇನೆ ಎಂದಿದ್ದಾನೆ. ಪೊಲೀಸರು ಸೋನು ಮನೆಯವರಿಗೆ ಈ ವಿಷಯ ತಿಳಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಪೊಲೀಸರ ಎಂಟ್ರಿ, ಅರ್ಧಕ್ಕೆ ನಿಂತ ಕಾರ್ಯಕ್ರಮ..

ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..

ವಿಚ್ಛೇದನಕ್ಕಾಗಿ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್..

- Advertisement -

Latest Posts

Don't Miss