ಕನಕಪುರ: ಡಿಕೆಶಿಯನ್ನ ಸುಮ್ಮನೆ ಕನಕಪುರ ಬಂಡೆ ಅನ್ನೋದಿಲ್ಲಾ, ಅಲ್ಲಿ ಅವರ ತಾಕತ್ತು ಅಷ್ಟಿದೆ ಅನ್ನೋದು ಸಾಬೀತಾಗಿದೆ. ಡಿ.ಕೆ.ಶಿವಕುಮಾರ್ ಕನಕಪುರಕ್ಕೆ ಬರೀ ಒಂದೇ ಒಂದು ದಿನ, ಅದು ಕೊನೆಯ ದಿನ ಪ್ರಚಾರಕ್ಕೆ ಹೋಗಿದ್ದರು. ಆದರೂ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕನಕಪುರದ ಜನ ಎಂದಿಗೂ ಡಿಕೆಶಿಯನ್ನ ಬಿಟ್ಟು ಕೊಡುವುದಿಲ್ಲ ಎಂಬುದು ಸಾಬೀತಾಗಿದೆ.
ಕನಕಪುರದಲ್ಲಿ ಜಾತಿ ಆಧಾರದ ಮೇಲೆ ಗೆಲುವು ಸಾಧಿಸಬಹುದು ಎಂದು ಬಿಜೆಪಿ ಪ್ಲಾನ್ ಮಾಡಿ, ಒಕ್ಕಲಿಗರಾದ ಆರ್.ಅಶೋಕ್ ಅವರನ್ನು ಡಿಕೆಶಿ ವಿರುದ್ಧ ಚುನಾವಣೆಗೆ ನಿಲ್ಲಿಸಿತ್ತು. ಆದರೂ ಡಿಕೆಶಿಯೇ ಗೆಲುವು ಸಾಧಿಸಿದ್ದು, ಆರ್.ಅಶೋಕ್ಗೆ ತೀವ್ರ ಮುಭಂಗವಾಗಿದೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು, ಹಲವು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಹಲವು ವಿಷಯಗಳನ್ನು ಕಾಂಗ್ರೆಸ್ ನಾಯಕರು ಚರ್ಚಿಸಲಿದ್ದಾರೆ.