‘ಮೇಡಂ ನಾನು ನಿಮಗೆ ಜಗದೀಪ್, ಉಪರಾಷ್ಟ್ರಪತಿಯಲ್ಲ’

ಕೇರಳ: ಇಂದು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇರಳಕ್ಕೆ ಭೇಟಿ ನೀಡಿದ್ದು, ಇಂಡಿಯನ್ ನವಲ್ ಅಕಾಡೆಮಿಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಿದರು.

ಅಲ್ಲದೇ, ಕೇರಳದಲ್ಲಿ ತಮ್ಮ 83 ವರ್ಷದ ಶಿಕ್ಷಕಿ ರತ್ನಾ ನಾಯರ್ ಅವರನ್ನು ಭೇಟಿಯಾದ ಉಪರಾಷ್ಟ್ರಪತಿಗಳು, ಅವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. ಈ ವೇಳೆ ಮೇಡಂ ನಾನು ನಿಮಗೆ ಜಗದೀಪ್, ಉಪರಾಷ್ಟ್ರಪತಿಯಲ್ಲ ಎಂದು ಹೇಳಿದ್ದಾರೆ.

ಗುರುವಿನ ಮಾರ್ಗದರ್ಶನ ಮತ್ತು ಸಹಾನುಭೂತಿಯು ಒಬ್ಬರ ಜೀವನದ ಪಥವನ್ನು ನಿರ್ದೇಶಿಸುವ ದಿಕ್ಸೂಚಿಯಾಗಿದೆ. ಚಿತ್ತೋರ್‌ಗಢದ ಸೈನಿಕ ಶಾಲೆಯಲ್ಲಿ ನನ್ನ ದಿನಗಳಿಂದ ನನ್ನ ಶಿಕ್ಷಕಿ ಶ್ರೀಮತಿ ರತ್ನಾ ನಾಯರ್ ಅವರನ್ನು ಇಂದು ಕೇರಳದ ಅವರ ನಿವಾಸದಲ್ಲಿ ಭೇಟಿಯಾಗಿದ್ದಕ್ಕೆ ಅಪಾರ ಕೃತಜ್ಞತೆಗಳು. ಅವಳ ವಾತ್ಸಲ್ಯ ಮತ್ತು ಆಶೀರ್ವಾದದಿಂದ ವಿನೀತನಾದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಟ್ವೀಟ್ ಮಾಡಿದ್ದಾರೆ.

ಬಟ್ಟೆ ಸರಿ ಹಾಕಿಕೊಳ್ಳದಿದ್ದರೂ, ಮಾನವೀಯತೆ ಮೆರೆದ ನಟಿಗೆ ಎಲ್ಲರಿಂದ ಶ್ಲಾಘನೆ..

ಇನ್ನೂ ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟ್ ಇದೆಯಾ..? ಹಾಗಾದ್ರೆ ಈ ಸ್ಟೋರಿ ನೋಡಿ..

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುಂದೆ ತನ್ನ ಮಗುವನ್ನ ಎಸೆದ ತಂದೆ, ಯಾಕೆ ಗೊತ್ತಾ..?

About The Author