Friday, June 20, 2025

Latest Posts

‘ನಮ್ಮಂಥವರ ಸಲಹೆ ಇಂದಿನ ಸಚಿವರು, ಅಧಿಕಾರಿಗಳು ಕೇಳಬೇಕು. ನಮ್ಮಂಥರಿಗೆ ಸಾಕಷ್ಟು ಜ್ಞಾನ ಇದೆ.’

- Advertisement -

Hubballi News: ಹುಬ್ಬಳ್ಳಿ: ಪಠ್ಯ ಪುಸ್ತಕದಿಂದ ಸಾವರ್ಕರ್, ಹೆಡ್ಗೇವಾರ್ ಸೇರಿದಂತೆ ಕೆಲವರ ಪಾಠ ಕೈಬಿಟ್ಟಿರುವ ಕುರಿತು, ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.

ಪಠ್ಯದಲ್ಲಿ ಯಾವುದೇ ರೀತಿಯ ರಾಜಕಾರಣ ತರಬಾರದು. ಯಾವುದೇ ಪಕ್ಷದಲ್ಲಿ ಇರಲಿ. ಅಜೇಂಡಾ ಬಗ್ಗೆ ತಮ್ಮ ತಮ್ಮ ಪಕ್ಷದವರ ಬಗ್ಗೆ ಹಾಕಬಾರದು. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು. ನೈತಿಕ ಶಿಕ್ಷಣವೇ ಇಂದಿನ ಪಠ್ಯದಲ್ಲಿ ಇಲ್ಲ. ಇಂದಿನ ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯವಾಗಿದೆ. ಕಿತ್ತೂರು ರಾಣಿ, ಜಾನ್ಸಿ ಲಕ್ಷ್ಮೀ ಬಾಯಿ, ಬೆಳವಾಡಿ ಮಲ್ಲಮ್ಮ ಅವರ ಹೆಸರೇ ಎಲ್ಲಿಯೂ ಇಲ್ಲ. ಎಷ್ಟೋ ಮಕ್ಕಳಿಗೆ ಶ್ರವಣಕುಮಾರ ಅಂದ್ರೆ ಯಾರು ಗೊತಿಲ್ಲ ಎಂದು ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮಂತವರ ಸಲಹೆ ಇಂದಿನ ಸಚಿವರು ಅಧಿಕಾರಿಗಳು ಕೇಳಬೇಕು. ನಮ್ಮಂಥರಿಗೆ ಸಾಕಷ್ಟು  ಜ್ಞಾನ ಇದೆ. ಸಚಿವರು, ಅಧಿಕಾರಿಗಳು ತಮ್ಮ ಸಲಹೆ ಕೇಳಿದರೆ ಹೇಳುವೆ. ಆದರೆ ನಾನಾಗಿಯೇ ಹೇಳುವುದಿಲ್ಲ. ಮಕ್ಕಳಿಗೆ ಯಾವುದೇ ಪಠ್ಯ ಸರಿ ಇಲ್ಲ ಅಂದ್ರೆ ತೆಗೆಯಬಹುದು. ಯಾವುದೇ ರಾಜಕಾರಣಿ ಹೆಸರು ಹಾಕಿದರೆ ತೆಗೆಯಲಿ ಎಂದು ಹೊರಟ್ಟಿ ಹೇಳಿದ್ದಾರೆ.

ಕಿತ್ತೂರು ಚೆನ್ನಮ್ಮ, ಡಾ.ಅಂಬೇಡ್ಕರ್, ಶ್ರೀ ಬಸವೇಶ್ವರ, ಅಂಬೇಡ್ಕರ್ ಅವರ ತಾಯಿ ಬಗ್ಗೆ ಪಠ್ಯದಲ್ಲಿ ಸೇರಸಲಿ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಾಧನೆ ಮಾಡಲಿಕ್ಕೆ ಅವರ ತಾಯಿ ಪಾತ್ರ ದೊಡ್ಡದು. ಅಂತವರ ಬಗ್ಗೆ ಮಕ್ಕಳಿಗೆ ಗೊತ್ತಾಗಬೇಕು. ನಾನು ಸಹ ಇಷ್ಟು ಬೆಳೆಯಬೇಕಾದರೆ ನನ್ನ ತಾಯಿಯೇ ಕಾರಣ. ನನ್ನ ತಾಯಿ ಮಾಡಿದ ಶ್ರಮ ತ್ಯಾಗ ಬಹಳ ದೊಡ್ಡದು. ಅಂಬೇಡ್ಕರ್ ದೊಡ್ಡವರು ಆಗಬೇಕಾದರೆ ತಾಯಿ ತ್ಯಾಗ ಎಂತಹ ದೊಡ್ಡದು ಅಂತಾ ಗೊತ್ತಾಬೇಕು. ಅಂಬೇಡ್ಕರ್ ತಾಯಿ ರಾತ್ರಿ ಹಗಲು ಶ್ರಮ ಪಟ್ಟವರು. ಯಾರು ಇಂದು ಪ್ರಮುಖರಾಗಿ ಬಂದವರು ಅವರ ಹೆಸರು ಇದೆ. ಆದರೆ ಸಾಧಕರ ಹಿಂದಿನವರ ಹೆಸರು ಬರತಾ ಇಲ್ಲಾ . ಆದ್ದರಿಂದ ಇಂದು ನಿಜವಾದ ಶ್ರಮವಹಿಸಿದವರ ಬಗ್ಗೆ ಪಠ್ಯದಲ್ಲಿ ವಿಷಯ ಸೇರ್ಪಡೆಯಾಗಬೇಕು. ಸಾಧಕರಿಗೆ ಜನ್ಮ ಕೊಟ್ಟವರು, ಬೆಳಸಿದವರು ಬಗ್ಗೆ ಪಾಠ ಅಗತ್ಯವಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

‘ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದ್ರೆ ಸರಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ’

ಹಟ್ಟಿಗೆ ನುಗ್ಗಿ 15 ಕುರಿಗಳನ್ನು ಬಲಿ ಪಡೆದ ತೋಳಗಳು..

ಕೆರೆಯಲ್ಲಿ ಮುಳುಗಿದ ವ್ಯಕ್ತಿ ಕುಟುಂಬಕ್ಕೆ ಸಾಂತ್ವನ ,ಪರಿಹಾರ ಭರವಸೆ ನೀಡಿದ ಶಾಸಕ ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss