Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಸಚಿವ ಸಂತೋಷ್ ಲಾಡ್, ಫುಡ್ ಕಾಪೋರೇಷನ್ ಆಫೀಸ್ ಇಂಡಿಯಾದವರು ನಮಗೆ ಅಕ್ಕಿ ಕೊಡ್ತೇನೆ ಅಂದಿದ್ರು. 7.50 ಲಕ್ಷ ಟನ್ ಅಕ್ಕಿ ಸ್ಟಾಕ್ ಇದ್ರೂ ಸಹ ನಮಗೆ ಲಿಖಿತ ರೂಪದಲ್ಲಿ ಕೊಡ್ತೀವಿ ಅಂತ ಹೇಳಿ ವಾಪಸ್ ಪಡೆದಿದ್ದಾರೆ. ಅಷ್ಟು ದೊಡ್ಡ ಮೊತ್ತದ ಅಕ್ಕಿ ಖರೀದಿಗೆ ಸ್ವಲ್ಪ ಮಟ್ಟಿಗೆ ಅನಾನುಕೂಲ ಆಗಿದೆ. ಅಲ್ಲಿಯವರೆಗೆ ಮುಖ್ಯಮಂತ್ರಿಗಳು ನೇರವಾಗಿ ದುಡ್ಡು ಕೊಡೋದಾಗಿ ತಿಳಿಸಿದ್ದಾರೆ ಎಂದು ಲಾಡ್ ಹೇಳಿದರು.
ಬಿಜೆಪಿ ಅವರಿಗೆ ಯಾಕೆ ಅಷ್ಟು ಅವಸರ? ನಾವು ಈಗ ದುಡ್ಡು ಕೊಡ್ತಾ ಇದ್ದೇವೆ. ಆ ದುಡ್ಡಲ್ಲಿ ತಮಗೆ ಬೇಕಾದ ದಿನಸಿ ಖರೀದಿ ಮಾಡಬಹುದು. ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡಬಹುದು. 700 ರಿಂದ 800 ರೂಪಾಯಿ ಸಿಗುತ್ತೆ. 2.30 ಲಕ್ಷ ಅಕ್ಕಿ ಒಮ್ಮೆಲೇ ಸಂಗ್ರಹ ಮಾಡೋದು ಕಷ್ಟ ಇದೆ. ಮುಂದೆ ಖಂಡಿತವಾಗಿಯೂ ಅಕ್ಕಿ ಕೊಡ್ತೀವಿ. ಕೇಂದ್ರದಿಂದ ಅಕ್ಕಿ ಕೊಡ್ತಿಲ್ಲ ಮುಖ್ಯಮಂತ್ರಿಗಳೇ ಲೆಟರ್ ತೋರಿಸಿದ್ದಾರಲ್ಲ? ಮೋದಿಯವರು ಹೇಳಿದಂತೆ ಎಲ್ಲಾ ಕೊಟ್ಟಿದ್ದಾರಾ? ಅವರನ್ನು ಕೇಳಿ ಎಂದು ಪ್ರಶ್ನೆ ಮಾಡಿದರು.
ರೈತರ ಸಾಲ ಮನ್ನಾ, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ. 15 ಲಕ್ಷ ಕೊಡ್ತೀವಿ ಅಂತ ಯಾರು ಹೇಳಿದ್ದು. ಕಾರ್ಯಕ್ರಮ ಯಾರು ಮಾಡಿದ್ದಾರೆ ಅಂತ ಅವರಿಗೆ ಅರ್ಥ ಆಗ್ತಿಲ್ಲ. ಹೊಸ ಸರ್ಕಾರ ಬಂದಿದೆಯಲ್ಲ ಹೀಗಾಗಿ ಬಿಜೆಪಿ ಆರೋಪ ಮಾಡ್ತಾ ಇದ್ದಾರೆ. ಎಂದು ಲಾಡ್ ಹೇಳಿದ್ದಾರೆ.
ಕಾಂಗ್ರೆಸ್ ಪಂಚೆ ಟ್ವಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಅದರ ಬಗ್ಗೆ ನನಗೇನು ಗೊತ್ತಿಲ್ಲ, ನಾನು ಟ್ವಿಟ್ ನೋಡಿಲ್ಲ ಎಂದಿದ್ದಾರೆ. ಇನ್ನು ಸ್ಮಾರ್ಟ್ ಸಿಟಿ ಯೋಜನೆ ಹಸ್ತಾಂತರ ಆಗದ ವಿಚಾರಕ್ಕೆ ಮಾತನಾಡಿದ ಸಚಿವರು, ನರೇಂದ್ರ ಮೋದಿಯವರು 100 ಸ್ಮಾರ್ಟ್ ಸಿಟಿ ಮಾಡ್ತೀನಿ ಅಂದಿದ್ರು. ನಾವು ಬುಲೆಟ್ ಟ್ರೇನ್ ಟಿಕೆಟ್ ತಗೊಂಡಿದ್ದೇವಲ್ಲ. ಬುಲೆಟ್ ಟ್ರೇನ್ ಎಲ್ಲಿದೆ?. ಈ ರೀತಿ ನೂರಾರು ಹೇಳಿದ್ದಾರೆ. ನಾವು ಹೇಳಿದ ಕಾರ್ಯಕ್ರಮ ಅನುಷ್ಠಾನ ಮಾಡ್ತೇವೆ. ಅಕ್ಕಿ ತೊಂದರೆ ಆಗಿದೆ. ಮುಂದಿನ ದಿನಗಳಲ್ಲಿ ಸಿಕ್ಕಾಗ ಕೊಡ್ತೀವಿ. ಅಲ್ಲಿಯವರೆಗೆ ದುಡ್ಡು ಕೊಡ್ತೀವಿ. ದುಡ್ಡು ಕೊಡೋದ್ರಿಂದ ಬಿಜೆಪಿ ಅವರಿಗೆ ಏನು ತೊಂದ್ರೆ ಇದೆ? ಎಂದು ಲಾಡ್ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹೊರತು ಬೇರೆ ಬೇರೆ ರಾಜ್ಯಗಳಲ್ಲಿ ಡಿಮ್ಯಾಂಡ್ ಇದೆ. ಅದರಿಂದ ಅವರಿಗೆ ತಡ್ಕೊಳೋಕೆ ಆಗ್ತಿಲ್ಲ. ರಾಹುಲ್ ಗಾಂಧಿ, ಡಿಸಿಎಂ ಅವರನ್ನು ಸಹಿಸಿಕೊಳ್ಳೋಕೆ ಬಿಜೆಪಿ ಅವರಿಗೆ ಆಗ್ತಿಲ್ಲ. ನಮ್ಮನ್ನು ಕೇಳದೆ ಸ್ಮಾರ್ಟ್ ಸಿಟಿ ಬಗ್ಗೆ ಅವರನ್ನು ಕೇಳಿ. ಸ್ಮಾರ್ಟ್ ಸಿಟಿಗೆ 10 ಸಾವಿರ ಕೋಟಿ ಬರುತ್ತೆ ಅನ್ಕೊಂಡಿದ್ರು. ಈಗ ಬರುವ ದುಡ್ಡೇ ಕುಂಟುತ್ತಾ ಬರ್ತಿದೆ. ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿಗೆ ಬಹಳ ದುಡ್ಡು ಬೇಕಾಗಿದೆ ಅದು ಬಂದಿಲ್ಲ ಎಂದು ಲಾಡ್ ಹೇಳಿದ್ದಾರೆ.
ನಮ್ಮ ರಾಜ್ಯ ಸರ್ಕಾರದಿಂದಲೂ ನಾವು ಜಾಸ್ತಿ ದುಡ್ಡು ತಗೊಂಡು ಮಾಡ್ತೇವೆ. ಬಿಜೆಪಿ ಇರೋದೇ ಸ್ಮಾರ್ಟ್ ಪಾರ್ಟಿ. ಅವರ ಬಿಜೆಪಿ ಪಕ್ಷದಲ್ಲಿ 30 ಸಾವಿರ ಕೋಟಿ ಇದೆ. ಪ್ರಪಂಚದ ರಿಚೆಸ್ಟ್ ಪಾರ್ಟಿ ಬಿಜೆಪಿ. ಭ್ರಷ್ಟಾಚಾರ ಆರೋಪ ಇದ್ರೂ ಯಾವುದನ್ನು ಅವರು ಒಪ್ಪೋದೆ ಇಲ್ಲಾ. ಮೊನ್ನೆ ಅಧಿಕಾರದಿಂದ ಯಾವ ರೀತಿ ಹೊರಗಾಕಿದ್ದಾರೆ. ಮುಂದೆ ಬರುವ ಪಾರ್ಲಿಮೆಂಟ್ ಚುನಾವಣೆಯಲ್ಲೂ ಇದೆ ರಿಸಲ್ಟ್ ಬರುತ್ತೆ ಎಂದು ಲಾಡ್ ಹೇಳಿದ್ದಾರೆ.
ಗೋ ಹತ್ಯೆ ನಿಷೇದ ವಿರೋಧಿಸುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಸ್ವಾಮೀಜಿಗಳು ಆಗ್ರಹ ಮಾಡ್ತಾ ಇರೋದು ಅವರ ಅಭಿಪ್ರಾಯ. ಸರ್ಕಾರದ ನಿಲುವು ತಗೊಳುತ್ತೆ ಎಂದಿದ್ದಾರೆ. ಇನ್ನು ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಲಾಡ್ ಮಾತನಾಡಿದ್ದು, ನನಗೆ ಗೊತ್ತಿಲ್ಲ ಬಂದ್ರೆ ಸ್ವಾಗತ ಮಾಡ್ತೇನೆ. ನಾವು ಎಲ್ಲಾ ಗೆಲ್ಲಬೇಕು ಅನ್ಕೊಂಡಿದ್ದೇವೆ ಎಂದು ಲಾಡ್ ಹೇಳಿದ್ದಾರೆ.
ವಿದ್ಯುತ್ ಬಿಲ್ ದರ ಏರಿಕೆ ಹಿಂಪಡೆಯುವ ವಿಚಾರದ ಬಗ್ಗೆ ಲಾಡ್ ಮಾತನಾಡಿದ್ದು, ಲೀಗರೇಟರಿ ಅಥೋರಿಟಿ ಇದೆ. ಇದ್ರಲ್ಲಿ ಬಿಜೆಪಿ ಕಾಂಗ್ರೆಸ್ ಏನು ಮಾಡಕ್ಕೆ ಆಗಲ್ಲ. ಬಿಜೆಪಿ ಅವರು ಅದನ್ನ ನಮ್ಮ ಮೇಲೆ ಹಾಕಲು ಹೋಗ್ತಾ ಇದ್ದಾರೆ. ಇದರ ಬಗ್ಗೆ ನಾವು ಚರ್ಚೆ ಮಾಡಿ ಮುಖ್ಯಮಂತ್ರಿಗೆ ಒತ್ತಡ ತಂದು ಕಮ್ಮಿ ಮಾಡಲು ಪ್ರಯತ್ನ ಮಾಡ್ತೇವೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೀಬೇಡಿ: ಕಾಂಗ್ರೆಸ್ ಪಂಚೆ ಟ್ವೀಟ್ಗೆ ಸಚಿವ ಪ್ರಲ್ಹಾದ ಜೋಶಿ ತಿರುಗೇಟು
ಕೇಳಿದಷ್ಟು ಹಣ ನೀಡದ್ದಕ್ಕೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರು ಅರೆಸ್ಟ್