ಸಿನಿಮಾ ಸುದ್ದಿ: ಚಿರಂಜೀವಿಯವರು ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಮಾರಾಟ ಮಾಡುತ್ತಿದ್ದಾರೆ ಎಂದು 2011 ರಲ್ಲಿ ಚಿರಂಜೀವಿ ವಿರುದ್ದ ನಟ ರಾಜಶೇಖರ್ ಮತ್ತು ಪತ್ನಿ ಜೀವಿತಾ ಆರೋಪ ಮಾಡಿದ್ದರು ಆ ಪ್ರಕರಣ ಇಲ್ಲಿಯವರೆಗೂ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆ ಪ್ರಕರಣಕ್ಕೆ ಈಗ ಕೋರ್ಟ್ ತೀರ್ಪು ನೀಡಿದ್ದು ಆರೋಪ ಸುಳ್ಳು ಎಂದು ಸಾಭೀತು ಪಡಿಸಿ ರಾಜ್ ಶೇಖರ್ ಮತ್ತು ಜೀವಿತಾ ಗೆ ಒಂದು ವರ್ಷ ಜೈಲು ಹಾಗೂ 5 ಲಕ್ಷ ದಂಡ ಕಟ್ಟುವಂತೆ ಶಿಕ್ಷೆ ನೀಡಿದೆ.
ಬ್ಲಡ್ ಬ್ಯಾಂಕ್ ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪ ಮಾಡಿದ್ದ ರಾಜಶೇಖರ್ ಮತ್ತು ಜೀವಿತಾ ವಿರುದ್ದ ಚಿರಂಜೀವಿ ಭಾವ ಅಲ್ಲು ಅರವಿಂದ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇಲ್ಲಿಯವರೆಗೂ ವಿಚಾರಣೆ ನಡೆಸಿ ಜುಲೈ 18 ರಂದು ಕೋರ್ಟ್ ತೀರ್ಪು ಹೊರ ಹಾಕಿದೆ. ಸುಳ್ಳು ಆರೋಪ ಮಾಡಿದ ದಂಪತಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸಿದೆ
ಮೊದಲಿನಿಂದಲೂ ಚಿರಂಜೀವಿ ಮತ್ತು ರಾಜಶೇಖರ್ ಮದ್ಯೆ ದ್ವೇಷ ಇತ್ತು ಆಗಾಗ ಅದನ್ನು ಹೊರಹಾಕುತಿದ್ದರು ಅದೇ ರೀತಿ ಸೇಡು ತೀರಿಸಿಕೊಳ್ಳಲು ಚಿರಂಜೀವಿ ಮೇಲೆ ಸುಳ್ಳು ಆರೋಪ ಮಾಡಿ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ.