Saturday, June 21, 2025

Latest Posts

Health Tips : ಮಳೆಗಾಲದಲ್ಲಿ ಸಾಮಾನ್ಯ ಚರ್ಮದ ಸಮಸ್ಯೆಗಳು ಯಾವುವು..?! ಅದಕ್ಕೆ ಇಲ್ಲಿವೆ ಪರಿಹಾರಕ್ರಮ..!

- Advertisement -

Health News : ಮಳೆಗಾಲ ಅಂದ್ರೆ ಅಲ್ಲಿ ಮೋಜು ಮಸ್ತಿ ಮನೋರಂಜನೆ ಇದ್ರೆ ಅದರ ಜೊತೆಗೆ ನಮ್ಮನ್ನು ಅರಸಿ  ಬರುವುದೇ ಆರೋಗ್ಯದ ಸಮಸ್ಯೆ ಅದರಲ್ಲೂ ಅನೇಕ ಚರ್ಮದ ಸೋಂಕುಗಳಂತೂ ಬಿಟ್ಟೂ  ಬಿಡದೆ ಕಾಡತ್ತೆ ಹಾಗಿದ್ರೆ ಮಳೆ ಜೊತೆ ಬರುವ ಸೋಂಕು ಯಾವುದು ಇದಕ್ಕೆ ಪರಿಹಾರ ಏನು  ಹೇಳ್ತೀವಿ ಈ ಸ್ಟೋರಿಯಲ್ಲಿ.

ಮಳೆಗಾಲ  ಎಲ್ಲರಿಗೂ ಅಚ್ಚುಮೆಚ್ಚಿನ ವಾತಾವರಣವಾದ್ರೂ  ಮಳೆಗಾಲದ  ಜೊತೆ  ಹೇಗೆ ಅನೇಕ ಜಲಚರಗಳು  ಮನೆ  ಬಾಗಿಲಿಗೆ ಬರುತ್ತವೆಯೋ ಅದೇ ರೀತಿ ಸೋಂಕು ಕೂಡಾ  ನಮ್ಮನ್ನು ಅರಸಿ ಬರುತ್ತದೆ. ಹಾಗಂತ ಚಿಂತೆ ಮಪಡೋ ಅವಶ್ಯಕತೆ ಇಲ್ಲ.  ಅದಕ್ಕೆ ಪರಿಹಾರ ಕೂಡಾ ನಾವು ಹೇಳ್ತೇವೆ. ಮೊದಲನೆಯದಾಗಿ ನಮಗೆ  ಕಾಡೋ ಸಮಸ್ಯೆಯೇ ಮೊಡವೆ, ಗುಳ್ಳೆಗಳು, ಬ್ಲ್ಯಾಕ್ ಹೆಡ್ಸ್: ವಾತಾವರಣದಲ್ಲಿನ ತೇವಾಂಶದಿಂದಾಗಿ ಅತಿಯಾದ ಬೆವರುವಿಕೆ ಮತ್ತು ಚರ್ಮವನ್ನು ಅತಿಯಾಗಿ ಉಜ್ಜುವುದು ಹಾಗೂ ಸ್ವಚ್ಛಗೊಳಿಸುವುದರಿಂದ ಮೊಡವೆ, ಗುಳ್ಳೆಗಳು ಮತ್ತು ಬಿರುಕುಗಳಿಗೆ ಕಾರಣವಅಗುತ್ತದೆ. ಬೆವರು ಮತ್ತು ತೇವಾಂಶವು ಚರ್ಮವನ್ನು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಸ್ಥಳವನ್ನಾಗಿ ಮಾಡುತ್ತದೆ. ಹಾಗಾಗಿ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಉತ್ತಮ ಸ್ಯಾಲಿಸಿಲಿಕ್ ಆಮ್ಲ ಆಧಾರಿತ ಕ್ಲೆನ್ಸರ್ ಬಳಸುವುದು ಉತ್ತಮ. ಇನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ.

  • ಇಸುಬು [ಎಸ್ಜಿಮಾ]: ಖಾಜ್ ಎಂದೂ ಕರೆಯಲ್ಪಡುವ ಈ ಸ್ಥಿತಿಯು ಶುಷ್ಕ ಮತ್ತು ಚರ್ಮದ ಮೇಲೆ ಕೆಂಪು ಗುಳ್ಳೆ ಯಾಗಲು ಕರಣವಾಗುತ್ತದೆ, ಅದು ನಿರಂತರವಾಗಿ ತುರಿಕೆಯನ್ನು ಉಂಟುಮಾಡುವುದರಿಂದ ಕಿರಿಕಿರಿ ಉಂಟಾಗುತ್ತದೆ.ಇದರ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ಚರ್ಮವನ್ನು ತೇವವಾಗಿಡುವುದು.
  • ಪಾದಗಳಲ್ಲಿ ಸೋಂಕು: ಇದು ಸಾಮಾನ್ಯ ಮಾನ್ಸೂನ್ ಸೋಂಕಾಗಿದ್ದು, ಗುಳ್ಳೆಗಳು, ಕಾಲ್ಬೆರಳ ಉಗುರುಗಳ ಮೇಲೆ ದಪ್ಪದಾದ ಹಳದಿ ತೇಪೆಗಳನ್ನು ಉಂಟುಮಾಡುತ್ತದೆ. ಜೊತೆಗೆ ಪಾದಗಳಲ್ಲಿ ಬಿರುಕುಗಳು ಉಂಟಾಗುತ್ತವೆ ಮತ್ತು ಸಾಕಷ್ಟು ತುರಿಕೆಗೆ ಕಾರಣವಾಗುತ್ತವೆ. ಇದು ಇನ್ನಷ್ಟು ಹದಗೆಡಬಹುದು ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು. ಹಾಗಾಗಿ ಇದನ್ನು ತಡೆಗಟ್ಟುವ ಸುಲಭ ಮಾರ್ಗವೆಂದರೆ ಪಾದಗಳನ್ನು ಶುಷ್ಕವಾಗಿಡುವುದು ಮತ್ತುಇದಕ್ಕೆ ಸಿಗುವ ಔಷಧ ವನ್ನು ಸರಿಯಾಗಿ ಬಳಸುವುದು. ಅದ್ಕಕಿಂತ ಮೊದಲು ವೈದ್ಯರ ಸಲಹೆಯನ್ನು ಅನುಸರಿಸುವುದನ್ನು ಮರೆಯಬಾರದು.
  • ಹೈಪರ್ಪಿಗ್ಮೆಂಟೇಶನ್: ಮಾನ್ಸೂನ್ ಋತುವಿಗೆ ಸನ್ಸ್ಕ್ರೀನ್ ಅಗತ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಇದು ತಪ್ಪು ಕಲ್ಪನೆ. ಪ್ರತೀ ಋತುವಿನಲ್ಲಿಯೂ ನಿಮಗೆ ಸನ್ ಸ್ಕ್ರೀನ್ ಅಗತ್ಯವಿರುತ್ತದೆ. ಹಾಗಾಗಿ ಒಂದೊಳ್ಳೆ ಬ್ರಾಂಡ್ ನ ಸನ್ಸ್ಕ್ರೀನ್ ಖರೀದಿಸಿ, ಪ್ರತಿದಿನ ಸರಿಯಾಗಿ ಬಳಸಿ.
  • ಫೋಲಿಕ್ಯುಲಿಟಿಸ್ ಇದು ಕೂದಲಿನ ಬುಡದ ಮೇಲೆ ಪರಿಣಾಮ ಬೀರುವ ಒಂದು ಸೋಂಕು:

ಮಳೆಗಾಲದಲ್ಲಿ ಕೂದಲು ಹುಟ್ಟುವ ಜಾಗ ಅಥವಾ ರಂಧ್ರ ಮುಚ್ಚಿ, ಅದು ಉರಿಯೂತಕ್ಕೆ ಒಳಗಾಗಿ ಚರ್ಮದ ಮೇಲ್ಮೈಯಲ್ಲಿ ಸಣ್ಣ ಉಬ್ಬುಗಳಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿದ್ದರರೂ ನಿರ್ಲಕ್ಷಿಸಬಾರದು. ಏಕೆಂದರೆ ಬಳಿಕ ಅವು ಕೀವು ತುಂಬಿದ ಗುಳ್ಳೆಗಳಾಗಬಹುದು. ಈ ಸ್ಥಿತಿಯನ್ನು ತಪ್ಪಿಸಲು ಸುಲಭ ಮಾರ್ಗವೆಂದರೆ ಚರ್ಮದ ರಂಧ್ರಗಳನ್ನು ಸ್ವಚ್ಛವಾಗಿಡುವುದು.

  • ಮಳೆಗಾಲದಲ್ಲಿ ಈ ಸಾಮಾನ್ಯ ಚರ್ಮದ ಸಮಸ್ಯೆಯನ್ನು ತಡೆಯುವುದು ಹೇಗೆ? ಈ ಸಲಹೆಗಳನ್ನು ಅನುಸರಿಸಿ.

1.ಒದ್ದೆಯಾದ ನೆತ್ತಿ ಮತ್ತು ಚರ್ಮವು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿವೆ ಹಾಗೂ ಚರ್ಮದ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಆದ್ದರಿಂದ ನೆತ್ತಿಯನ್ನು ಒದ್ದೆ ಮಾಡದೇ ಆದಷ್ಟು ಒಣಗಿರುವಂತೆ ನೋಡಿಕೊಳ್ಳಿ.

2.ಇದು ಪಾದಗಳಿಗೂ ಸಹ ಅನ್ವಯಿಸುತ್ತದೆ. ಒದ್ದೆಯಾಗಿರುವ ಪಾದಗಳನ್ನು ಚೆನ್ನಾಗಿ ಒರೆಸಿಕೊಳ್ಳಿ. ಜೊತೆಗೆ ಒದ್ದೆಯಾದ ಬೂಟುಗಳು ಅಥವಾ ಸಾಕ್ಸ್ ಗಳೊಂದಿಗೆ ಎಲ್ಲೆಂದರಲ್ಲಿ ತಿರುಗಾಡಬೇಡಿ ಏಕೆಂದರೆ ಇದು ಬಹುಬೇಗ ಸೋಂಕುಗಳಿಗೆ ಕಾರಣವಾಗಬಹುದು.

3.ಸೋಪ್ ಮುಕ್ತ ಕ್ಲೆನ್ಸರ್ ಬಳಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಮುಖವನ್ನು ತೊಳೆಯಬೇಕು.

  1. ಮುಖ ತೊಳೆದ ನಂತರ ಟೋನರ್ ಬಳಸಬೇಕು.
  2. ಸೌತೆಕಾಯಿ, ಅಲೋವೆರಾ ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುವ ಉತ್ತಮ ಜೆಲ್ ಆಧಾರಿತ ಮಾಯಿಶ್ಚರೈಸರ್ ಬಳಸಿ.
  3. ನಿಯಮಿತವಾಗಿ ನೀರು ಕುಡಿಯುವ ಮೂಲಕ ಹೈಡ್ರೇಟ್ ಆಗಿರಬೇಕು.ಒಳಗಿನಿಂದ ಹೈಡ್ರೇಟ್ ಆಗಿರುವ ಚರ್ಮವು ಹೊರಗಿನಿಂದ ಶೈನ್ ಆಗುತ್ತದೆ.
  4. ಮಲಗುವ ಮೊದಲು ಮೇಕಪ್ ತೆಗೆಯುವುದನ್ನು ಮರೆಯಬೇಡಿ. ಚರ್ಮ ಅಂದವಾಗಿರಲು ಪುಡಿ ಆಧಾರಿತ ಮೇಕಪ್ ಉತ್ಪನ್ನಗಳನ್ನು ಬಳಸುವುದು ಉತ್ತಮ.
  5. ಸ್ನಾನ ಮಾಡುವಾಗ ಅಥವಾ ಬೇರೆ ಸಮಯದಲ್ಲಿಯೂ ಚರ್ಮವನ್ನು ಬಿಸಿ ನೀರಿನಿಂದ ತೊಳೆಯುವುದನ್ನು ತಪ್ಪಿಸಿ.
  6. ಇನ್ನು ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಕೃತಕ ಆಭರಣಗಳನ್ನು ಧರಿಸುವುದನ್ನು ತಪ್ಪಿಸುವುದು ಒಳ್ಳೆಯದು.

ಮಳೆಗಾಲದಲ್ಲಿ ಈ ಸಾಮಾನ್ಯ ಚರ್ಮದ ಸಮಸ್ಯೆಗಳಿಗೆ ವಿದಾಯ ಹೇಳಲು ಚರ್ಮರೋಗ ತಜ್ಞರನ್ನು ಭೇಟಿ ಮಾಡುವುದನ್ನು ಮರೆಯದಿರಿ.

ಹಲಸಿನ ಹಣ್ಣಿನ ಬೀಜದ ಸೇವನೆಯ ಲಾಭವನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ..

ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..

ಫ್ರೆಂಚ್ ಟೋಸ್ಟ್ ಮನೆಯಲ್ಲೇ ತಯಾರಿಸುವುದು ಹೇಗೆ..?

- Advertisement -

Latest Posts

Don't Miss