ವೀರಶೈವ ಧರ್ಮದ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದ ರಷ್ಯಾ ಬಾಲಕ..!

ಹುಬ್ಬಳ್ಳಿ: ರಷ್ಯಾದ ಮಾಸ್ಕೋ ನಿವಾಸಿಯಾಗಿರುವ ಪಾರ್ವತಿ ಎನ್ನುವವರ ಪುತ್ರ ಆ್ಯಂಡ್ರೆ ಎನ್ನುವ ಎಂಟು ವರ್ಷದ ಬಾಲಕನಿಗೆ ವೀರಶೈವ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶದ ಕಾಶಿ ಜಗದ್ಗುರು ಡಾ ಚಂದ್ರಶೇಖರ್ ಶಿವಾಚಾರ್ಯರಿಂದ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದರು.

ಲಿಂಗಾಯತರೇ ಸಂಸ್ಕೃತಿಯನ್ನು ಮರೆಯುತ್ತಿರುವ ಈಗಿನ ದಿನಮಾನಗಳಲ್ಲಿ ರಷ್ಯಾದ ಪುಟ್ಟ ಬಾಲಕ ಇಷ್ಟಲಿಂಗ ದೀಕ್ಷೆ ತೆಗೆದುಕೊಂಡಿರುವುದು ತುಂಬಾ ವಿಶೇಷವಾದದ್ದು ದೀಕ್ಷೆ ಸ್ವೀಕರಿಸಿದ ಬಾಲಕ ಎಲ್ಲರ ಗಮನ ಸೆಳೆದಿದ್ದಾನೆ.

ವೀರಶೈವ ಪಂಚಪೀಠಗಳಲ್ಲಿ ಒಂದಾದ ಉತ್ತರ ಪ್ರದೇಶದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಂದ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ ಬಾಲಕ ಎಲ್ಲರ ಗಮನ ಸೆಳೆದಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ವೀರಶೈವ ಧರ್ಮ ಸಿದ್ಧಾಂತ ಸ್ವೀಕರಿಸಿ ಇಷ್ಟಲಿಂಗ ದೀಕ್ಷೆ ಹೊಂದಿದ್ದ ರಷ್ಯಾದ ಪಾರ್ವತಿ ನಿತ್ಯವೂ ಮನೆಯಲ್ಲಿ ಇಷ್ಟಲಿಂಗ ಪೂಜೆಯ ಅನುಷ್ಠಾನವನ್ನು ಅವಲೋಕನ ಮಾಡುತ್ತಿದ್ದರು ಅದರಿಂದ ಪ್ರಭಾವಿತನಾದ ಬಾಲಕ ಆ್ಯಂಡ್ರೆ ಇಷ್ಟಲಿಂಗ ದೀಕ್ಷೆ ಬೇಕೆಂದು ಬಾಲಕ ಹಟ ಹಿಡಿದಿದ್ದ

ಆದ್ದರಿಂದ ಮಗುವಿನ ಪಾಲಕರು ಕಾಶಿ ಪೀಠದಲ್ಲಿ ದಿಕ್ಷೆ ಕೊಡಿಸಿದ್ದಾರೆ. ಆ್ಯಂಡ್ರೆಗೆ ಇಷ್ಟಲಿಂಗ ಕರುಣಿಸಿ ಗಣೇಶ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮರು ನಾಮಕರಣ ಮಾಡಿದ್ದಾರೆ.

Loksabha; Election ಜೋಶಿಗೆ ಸೋಲುಣಿಸಲು ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಕೈ ಪಡೆ..!

Fake Gold: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ 25 ಲಕ್ಷ ವಂಚಿನೆ; ಆರೋಪಿಗಳ ಬಂಧನ..!

Vijayanagara: ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಭಾಗಿಯಾದ ಜಗಳೂರು ಕ್ಷೇತ್ರದ ಶಾಸಕ..!

About The Author