Thursday, June 19, 2025

Latest Posts

‘ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು, ಅಧಿಕಾರಿಗಳ ವರ್ಗಾವಣೆಯಲ್ಲಿ ಬ್ಯೂಸಿ ಆಗಿದೆ’

- Advertisement -

Belagavi News: ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಭೀಕರ ಬರಗಾಲ ಬಂದಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಪಿ.ರಾಜೀವ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 50 – 60 ವರ್ಷಗಳಲ್ಲಿ ಬರದಂತಹ ಭೀಕರ ಬರಗಾಲ ಬಂದಿದೆ. ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಇದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಜೀವಂತ ಇದೆಯೋ ಎಂಬ ಪ್ರಶ್ನೆ ಮೂಡುತ್ತಿದೆ. ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು, ಅಧಿಕಾರಿಗಳ ವರ್ಗಾವಣೆಯಲ್ಲಿ ಬ್ಯೂಸಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಎರಡು ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತೆ. ಒಂದು ಎಕರೆಗೆ 75-80 ಟನ್ ಬೆಳೆಯುವ ಪ್ರದೇಶದಲ್ಲಿ 15-20 ಟನ್ ಕಬ್ಬು ಇಳುವರಿ. ಮೂರು ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು ಉಳಿದ ಬೆಳೆಗಳು ಸುಟ್ಟು ಹೋಗುತ್ತಿವೆ. ಸರ್ಕಾರದವರು ಕೇಂದ್ರದ ಬರ ಅಧ್ಯಯನ ತಂಡವನ್ನು ಎಲ್ಲಾ ಪ್ರದೇಶಕ್ಕೆ ಕರೆದೊಯ್ದು ವೈಜ್ಞಾನಿಕ ಪರೀಕ್ಷೆ ಮಾಡಿಸಬೇಕು. ಅದರ ಬದಲು ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಬ್ಯುಸಿ ಆಗಿದೆ. ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಪರಿಹಾರ ನೀಡಬೇಕು. ಹಿಂದೆ ಬೊಮ್ಮಾಯಿ ಸರ್ಕಾರ ಕೇಂದ್ರದ ಪರಿಹಾರ ಜೊತೆ ರಾಜ್ಯದ ಪರಿಹಾರ ಜೋಡಿಸಿ ಕೊಡುತ್ತಿತ್ತು. ಹೀಗಾಗಿ ಸರ್ಕಾರ ತಕ್ಷಣ ಬೆಳೆ ಹಾನಿ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ರಾಜೀವ್ ಹೇಳಿದ್ದಾರೆ.

ಕಲಘಟಗಿ, ಅಳ್ನಾವರ, ಅಣ್ಣಿಗೇರಿ “ಬರ ತಾಲೂಕು” ಎಂದು ಘೋಷಣೆ: ಸಚಿವ ಸಂತೋಷ್ ಲಾಡ್ ಯಶಸ್ವಿ

ಹಿಂಡಲಗಾ ಜೈಲು, ಪರಪ್ಪನ ಅಗ್ರಹಾರವನ್ನು ಸ್ಪೋಟಿಸುತ್ತೇನೆಂದು ಬೆದರಿಕೆ..

‘KMF ಅಡಾ ಇಡೋ ಕಾಲ ಬಂದಿದೆ. ಖಾಸಗಿಯವರಿಗೆ ಅದನ್ನು ಕೊಡುವ ಸನ್ನಿವೇಶ ಬರ್ತಾ ಇದೆ’

- Advertisement -

Latest Posts

Don't Miss