Friday, June 20, 2025

Latest Posts

ಲೋಕಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ದಾವಣಗೆರೆ ಅಬಕಾರಿ ಡಿಎಸ್‌ಪಿ ಪರಾರಿ

- Advertisement -

Hubballi News: ಹುಬ್ಬಳ್ಳಿ : ಲೋಕಾಯುಕ್ತ ಪೊಲೀಸರು ದಾವಣಗೆರೆಯಲ್ಲಿ ದಾಳಿ ನಡೆಸಿದ ಸಮಯದಲ್ಲಿ ನಾಪತ್ತೆಯಾದ ಡಿವೈಎಸ್‌ಪಿ ಕೇಡರ್ ಅಧಿಕಾರಿಯೊಬ್ಬರು ತಮ್ಮ ಸ್ವಗ್ರಾಮ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯಲ್ಲಿದ್ದಾರೆಂಬ ಜಾಡು ಹಿಡಿದು ಬಂದ ಲೋಕಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಡಿವೈಎಸ್ಪಿ ಆಗಿರುವ ತಾಲೂಕಿನ ಇಂಗಳಹಳ್ಳಿ ಮೂಲದ ರವಿ ಮರಿಗೌಡರ ಎಂಬ ಅಧಿಕಾರಿಯೇ ಪರಾರಿಯಾದ ಅಧಿಕಾರಿಯಾಗಿದ್ದಾರೆ.

ದಾವಣಗೆರೆಯಲ್ಲಿ ಸಿಎಲ್-7ಗೆ ಪರವಾನಿಗೆ ಕೊಡಲು ಹಣ ಕೇಳಿದ್ದರಿಂದ ಅಲ್ಲಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಅಬಕಾರಿ ಇಲಾಖೆಯ ರವಿ ಮರಿಗೌಡರ ತಾವು ತಂದಿದ್ದ ಕಾರನ್ನು ಗ್ರಾಮದ ಮನೆಯ ಬಳಿಯೇ ಬಿಟ್ಟು, ಬೈಕಿನಲ್ಲಿ ಕಾಲ್ಕಿತ್ತು ಇವರನ್ನ ಹಿಡಿಯಲು ಬಂದಿದ್ದ ಲೋಕಾಯುಕ್ತ ಪೊಲೀಸರು ಬರಿಗೈಯಲ್ಲಿ ಮರಳಿದ್ದಾರೆ.

ಬಾಕಿ ಹಣ ಪಾವತಿ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ; ಡಿ.ಕೆಂಪಣ್ಣ

KC Raghu : ಖ್ಯಾತ ಆಹಾರ ತಜ್ಞ ಕೆ.ಸಿ ರಘು ವಿಧಿವಶ

World Cup:ಗೆದ್ದು ಬಾ ಭಾರತ ಎಂದು ನೃತ್ಯದ ಮೂಲಕ ಶುಭ ಹಾರೈಸಿದ ಡ್ಯಾನ್ಸ್ ತಂಡ..!

- Advertisement -

Latest Posts

Don't Miss