Hassan Political News: ಹಾಸನ: ಹಾಸನಕ್ಕೆ ಇಂದು ಭೇಟಿ ನೀಡಿದ ಕುಮಾರಸ್ವಾಮಿ, ಜೆಡಿಎಸ್ ಶಾಸಕರ ಜೊತೆ ಸೇರಿ, ಹಾಸನಾಂಬೆಯ ದರ್ಶನ ಮಾಡಿದರು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಯಾಕೆ ಬ್ರೇಕ್ ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್, ಮಾಡ್ತಾ ಇದ್ದೀರಾ..? 136 ಸಿಟ್ ಇದ್ರುನೂ..? ಗಾಜಿನ ಮನೆಯಲ್ಲಿ ಕುತಿರೋರು ನೀವು. ಹೆಗಣ ಬಿದ್ದಿರೋದು ನಿಮ್ಮ ತಟ್ಟೇಲಿ. ನೀವು ದಿನ ಮಾಧ್ಯಮದಲ್ಲಿ ನಮ್ಮ ಶಾಸಕರ ಮೇಲೆ ಅನುಮಾನ ಬರೋ ರೀತಿ ಯಾಕೆ ಮಾಡ್ತೀರಾ..? ಇನ್ನು ಪ್ರಿಯಾಂಕ್ ಖರ್ಗೆ ಹೇಳ್ತಾರೆ, ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಅಂತಾ. ಈ ರಾಜ್ಯದಲ್ಲಿ ನೀವು 14 ಬಾರಿ ಬಜೆಟ್ ಮಂಡನೆ ಮಾಡಿರೋರು. ನೀವು ದೇಶದಲ್ಲಿ ಹೆಚ್ಚು ಬಜೆಟ್ ಮಂಡಿಸಿರೋರು. ದೊಡ್ಡ ಆರ್ಥಿಕ ತಜ್ಞ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟೋದು ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪಾರ್ಲಿಮೆಂಟ್ ಚುನಾವಣೆಗೆ ಇನ್ನೊಂದು ಡ್ರಾಮಾ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ. ಮುಂದೆ ಡಿಕೆಶಿ ಸಿಎಂ, ಜಾರಕಿಹೊಳಿ ಸಿಎಂ, ಇದೆಲ್ಲ ಲೋಕಸಭಾ ಚುನಾವಣೆ ಸೃಷ್ಟಿ. ಪಾರ್ಲಿಮೆಂಟ್ ಚುನಾವಣೆಗೆ ವೋಟ್ ಮಾಡೋಕೆ ಜಾತಿ ಟ್ರಂಪ್ ಕಾರ್ಡ್ ರಾಜಕೀಯ ಬಿಡಿ. ಖರ್ಗೆ ಅವರೇ ನಮ್ಮದು ಪೀಪಲ್ ಲೆಸ ಅಂತೀರಾ. ನೋಡೋಣ ಪಾರ್ಲಿಮೆಂಟ್ ಚುನಾವಣೆ ಮುಗಿದ ಮೇಲೆ ಎಂದು ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
ಇನ್ನು ಕಾಂಗ್ರೆಸ್ ಯಾಕೆ ನಿಮ್ಮ ಟಾರ್ಗೆಟ್ ಮಾಡ್ತಾರೆ ಸರ್ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಅವರಿಗೆ ಭಯ ಇರೋದು ನಮ್ಮ ಮೇಲೆ ಬ್ರದರ್. ನಾವು ಹೊಂದಾಣಿಕೆ ಆದ್ಮೇಲೆ ವಿಲ ವಿಲ ಅಂತ ಒದ್ದಾಡ್ತಾ ಇದ್ದಾರೆ. ನಮ್ಮ ಮುಂದಿನ ಕೆಲ್ಸ ಶುರು ಮಾಡಿದ್ರೆ ನಿದ್ದೇನೆ ಮಾಡಲ್ಲ. ಹೊಂದಾಣಿಕೆ, ಮುಂದಿನ ಪ್ರಕ್ರಿಯೆ, ಹೊರ ರಾಜ್ಯದ ಚುನಾವಣೆ ಮಾಡಿದ ಮೇಲೆ ಹೇಳ್ತೀವಿ ಎಂದು ಹೇಳುವ ಮೂಲಕ, ಕಾಂಗ್ರೆಸ್ಗೆ ಟಾಂಗ್ ಕೊಟ್ಟಿದ್ದಾರೆ.
ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಹೇಳ್ತಾರೆ, ಕೇಂದ್ರ ತಂಡ ಮಾಹಿತಿ ಪಡೆದು, ಅದನ್ನು ಕೊಡುತ್ತೋ, ಇಲ್ವೋ ಅಂತಾರೆ. ನಿನ್ನೆ ಇಲ್ಲಿ ಚರ್ಚೆ ಮಾಡ್ತಾ ಇದ್ದೀರಿ ಅಲ್ಲ . ನೀವು ಮುಖ್ಯಮಂತ್ರಿಯಾಗಿ ನೀವು ಮಾಹಿತಿ ಪಡೆದಿಲ್ಲ ಅಂದ್ರೆ. ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ರಾಜ್ಯ ನಡಿಸ್ತಾ ಇದ್ದೀರಾ..? ಕುಮಾರಸ್ವಾಮಿ ಹೇಳೋದೆಲ್ಲ ಸುಳ್ಳು ಅಂತಾರೆ, ನಾನೇನು ಸತ್ಯ ಹೇಳ್ತಿನಿ ಅಂತ ಬೋರ್ಡ್ ಹಾಕೊಂಡು ಇದ್ನಾ..? ಸತ್ಯ ಹರಿಶ್ಚಂದ್ರ, ಇವ್ರ ಸಿದ್ದರಾಮನ ಹುಂಡಿ ಮೇಲೆ ಹೋಗಿದ್ನಾ..? ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಸಭೆ ಮಾಡಿದ್ರಲ್ಲ, ಅವರ ಪಕ್ಷದ ಒಬ್ಬರು ತೆಂಗಿನ ಮರದ ಕೆಳಗೆ ಕೂತಿದ್ರಲ್ಲ. ಅವರಿಗೆ ಮಜ್ಜಿಗೆ ಕೊಟ್ಟಿದ್ದು ದೇವೇಗೌಡರು. ಸಿದ್ದರಾಮಯ್ಯ ಅವರೇ ಯಾರು ಯಾರಿಗೆ ಸುಳ್ಳು ಹೇಳ್ತಾ ಇದ್ದಾರೆ ಜನಗಳಿಗೆ ಹೇಳಿ. ನಿನ್ನೆ ಅಧಿಕಾರಿಗೆ ಎಚ್ಚರಿಕೆ ನೀಡಿದ್ರು. ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರಿಗಳ ಮೇಲೆ ಆಕ್ಷನ್ ತೆಗೆದುಕೊಳ್ಳುತ್ತೀರಿ..? AC ಹುದ್ದೆಗೆ ಒಂದು ಕೋಟಿ ಇಸ್ಕೊಂಡು, ಈವಾಗ ಅವನಿಗೆ ಆಕ್ಷನ್ ಅಂದ್ರೆ ಅವನು ಕೇಳ್ತಾನಾ..? ಎಂದು ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೋದಿ ಪರ ನಿಂತ ಅಹಿಂಸಾ ಚೇತನ್! ಸಂತೋಷ್ ಲಾಡ್ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ
ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮುಲ್ಲಾ ಬಂಧನ
ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್ ಕ್ಷಮೆಯಾಚನೆಗೆ ಪಟ್ಟು