ಬೈಕ್ ಇದೆ ಚಕ್ರಗಳೇ ಇಲ್ಲ.. ಕದ್ದ ಗಾಡಿ ಸಿಕ್ಕಾಗ ಗಾಬರಿಯಾದ ಮಾಲೀಕ: ಏನಾಯ್ತು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

Belagavi News: ಬೆಳಗಾವಿ: ಬೈಕ್ ಕಳ್ಳತನ‌ ಮಾಡಿ ವಿಲ್ ಕದ್ದು ಕಳ್ಳರು‌ ಪರಾರಿಯಾಗಿರೋ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ನಡೆದಿದೆ.

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಿದ್ದಾರೆ. ಬಳಿಕ ಸುಮಾರು ಎರಡು ಕಿಮೀ ದೂರದ ದಿಗ್ಗೇವಾಡಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಬೈಕ್‌ನ ಎರಡೂ ಚಕ್ರ ಕದ್ದು ಪರಾರಿಯಾಗಿದ್ದಾರೆ. ಈ ಬೈಕ್ ಬಾವನಸೌಂದತ್ತಿ ಗ್ರಾಮದ ರಾಜಗೌಡ ಪಾಟೀಲ್ ಎಂಬುವವರಿಗೆ ಸೇರಿದೆ.

ಹೀಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಾಣಲಿಲ್ಲ ಎಂದು ರಾಜಗೌಡ ಪಾಟೀಲ್ ಅವರು ಹುಡುಕಾಡುತ್ತ ಹೋಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ಅವರು ತಮ್ಮ ಬೈಕ್ ಅನ್ನು ನೋಡ ನೋಡುತ್ತಿದ್ದಂತೆ ಶಾಕ್ ಆಗಿದ್ದಾರೆ. ಬೈಕ್ನಲ್ಲಿ ಇದ್ದ ಪಾರ್ಟ್ಸ್ ಮಾಯಾವಾಗಿದ್ದವು. ಕೂಡಲೇ ಈ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ರಾಯಬಾಗ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

‘ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಅನ್ನೋದು ಪಾರ್ಲಿಮೆಂಟ್ ಚುನಾವಣೆಯ ಇನ್ನೊಂದು ಡ್ರಾಮಾ’

ಪತ್ನಿಗೆ ಅತ್ಯಂತ ದುಬಾರಿ ಕಾರ್ ಗಿಫ್ಟ್ ನೀಡಿದ ಅಂಬಾನಿ: ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..

‘ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತೀವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ’

About The Author