Hubballi News: ಹುಬ್ಬಳ್ಳಿ: ಪತಿಯನ್ನ ಹತ್ಯೆ ಮಾಡಿ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿ ಹೊರಗೆ ಬಂದಿದ್ದ ರೌಡಿಯೋರ್ವ ತಲ್ವಾರ ಹಿಡಿದುಕೊಂಡು ಬೆದರಿಸುತ್ತಿದ್ದ ಸಮಯದಲ್ಲಿ ಆತನಿಗೆ ಗುಂಡು ಹಾರಿಸಿದ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ಶಹರ ಠಾಣೆಯ ದಕ್ಷ ಪೊಲೀಸ್ ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ್ ಎಂಬುವವರೇ ರೌಡಿ ಸತೀಶ ಗೊನ್ನ ಎಂಬಾತನಿಗೆ ಗುಂಡು ಹಾಕಿದ್ದು, ಆತನನ್ನ ಚಿಕಿತ್ಸೆಗೆ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಘಟನೆಯಲ್ಲಿ ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ ಅವರಿಗೂ ಕೂಡಾ ಗಾಯಗಳಾಗಿದ್ದು, ಅವರನ್ನೂ ಚಿಕಿತ್ಸೆಗೆ ಕಿಮ್ಸ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಮಧ್ಯಾಹ್ನದ ವೇಳೆಯಿಂದ ತಲ್ವಾರ ಹಿಡಿದುಕೊಂಡು ಜನರನ್ನ ಬೆದರಿಸುತ್ತಿದ್ದನೆಂದು ಹೇಳಲಾಗಿದೆ. ಪುಡಿ ರೌಡಿಗಳ ಹಾವಳಿ ತಪ್ಪಿಸಲು ಪೊಲೀಸರು ಗಟ್ಟಿಯಾಗಿದ್ದು, ಇನ್ನೂ ಮುಂದೆ ರೌಡಿಗಳು ಬಾಲಾ ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ.
‘ನಾವು ಐದಾರು ಜನ ಸೇರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಬೇಕೆಂದಿದ್ದೇವೆ’
ಕರ್ನಾಟಕ ಟಿವಿ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ