- Advertisement -
Vijayanagara News: ವಿಜಯನಗರ: ಜಿಲ್ಲಾ ಪಂಚಾಯ್ತ ವಿಜಯನಗರ ವತಿಯಿಂದ ನಗರದ ಡಿ.ಸಿ ಕಚೇರಿಯಲ್ಲಿ ದಿಶಾ ಸಭೆ ನಡೆಯಿತು. ಸಭೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್, ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು, ಬಳ್ಳಾರಿ ಸಂಸದ ದೇವೆಂದ್ರಪ್ಪ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ಉಪಸ್ಥಿತರಿದ್ದರು.
ಜಿಲ್ಲಾ ಹಂತದ ಅಧಿಕಾರಿಗಳ ಜೊತೆ ವಿವಿಧ ಅಭಿವೃಧಿ ಕಾಮಾಗರಿಗಳ ಬಗ್ಗೆ ಸಂಸದ ದೇವೆಂದ್ರಪ್ಪ ಚರ್ಚಿಸಿದ್ದು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಟ್ಟಡಗಳ ಕಾಮಗಾರಿಯ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಅನುದಾನ ಬಿಡುಗಡೆಯಾದ್ರು ವಿವಿಧ ಇಲಾಖೆಯ ಕಟ್ಟಡಗಳ ಕಾಮಗಾರಿ ಮುಗಿಸಲು ವಿಳಂಬವಾಗುತ್ತಿದೆ ಎಂಬ ಬಗ್ಗೆ ಸಂಸದ ವೈ.ದೇವೇಂದ್ರಪ್ಪ ನಿರ್ಮಿತಿ ಕೇಂದ್ರದ ಅಧಿಕಾರಿ ವಿರುದ್ಧ ಗರಂ ಆಗಿದ್ದಾರೆ.
- Advertisement -