Vijayapura News: ವಿಜಯಪುರ : ಬೈಕ್ ಗ್ಯಾರೇಜ್ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.
ಐದು ಬೈಕ್, ನಾಲ್ಕು ಬೈಕ್ ಇಂಜಿನ್ಗಳು, ಏರ್ ಕಂಪ್ರಶನ್, ವಾಟರ್ ವಾಶ್ ಮಶಿನ್, ಸೇರಿದಂತೆ ಸುಮಾರು ಹತ್ತು ಲಕ್ಷ ಮೌಲ್ಯಕ್ಕೂ ಹೆಚ್ಚು ಅಧಿಕ ಹಾನಿಯಾಗಿದೆ.
ಕಾಂತಯ್ಯ ಮಠಮತಿ ಎಂಬುವವರಿಗೆ ಗ್ಯಾರೇಜ್ ಸೇರಿದ್ದು, ಕಾಂತಯ್ಯ ಮಠಪತಿ ಮೂಲತಃ ಮುದ್ದೇಬಿಹಾಳ ತಾಲೂಕಿನ ಅರಸನಾಳ ಗ್ರಾಮದವರು. ಕಾಂತಯ್ಯ ಮಠಪತಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
‘ಡಯಾಲಿಸಿಸ್ ಸಮಸ್ಯೆಗೆ ಹಿಂದಿನ ಸರ್ಕಾರದಲ್ಲಾದ ಎಡವಟ್ಟುಗಳು ಕಾರಣವೇ ಹೊರತು, ನಮ್ಮ ಸರ್ಕಾರದ್ದಲ್ಲ’
‘ನನ್ನ ವಯಸ್ಸು ಮಜಾ ಮಾಡುವ ವಯಸ್ಸಲ್ಲ. ಮತ್ತು ಮಜಾ ಮಾಡುವ ವ್ಯಕ್ತಿಯು ನಾನಲ್ಲ’
ಇಸ್ರೇಲ್- ಪ್ಯಾಲೇಸ್ತಿನ್ ಸಮಸ್ಯೆ ಬಗ್ಗೆ ಇಸ್ರೇಲ್ ಅಧ್ಯಕ್ಷರ ಬಳಿ ಪ್ರಧಾನಿ ಮೋದಿ ಮಾತು