Saturday, June 21, 2025

Latest Posts

ರಾಜಸ್ಥಾನದ ಮುಂದಿನ ಸಿಎಂ ಬಾಬಾ ಮಹಂತ್ ಬಾಲಕ್‌ನಾಥ್..?

- Advertisement -

Political News: ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.

ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆ ಉದ್ಭವವಾಗಿದೆ. ರಾಜಸ್ಥಾನದಲ್ಲಿ 199 ಸ್ಥಾನದಲ್ಲಿ 100ಕ್ಕೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲುವ ಮೂಲಕ, ಅಧಿಕಾರಕ್ಕೆ ಬಂದಿದೆ. ಸದ್ಯ ಮಹಂತ್ ಬಾಲಕ್‌ನಾಥ್ ಮತ್ತು ವಸುಂಧರಾ ರಾಜೆ ಮಧ್ಯೆ ಸಿಎಂ ರೇಸ್ ನಡೆದಿದ್ದು, ಇವರಿಬ್ಬರಲ್ಲಿ ಒಬ್ಬರು ರಾಜಸ್ಥಾನದ ಸಿಎಂ ಆಗ್ತಾರೆ ಅನ್ನೋ ಸುದ್ದಿ ಇದೆ.

ಇವರಿಬ್ಬರ ಜೊತೆ, ರಾಜಸಮಂದ್ ಕ್ಷೇತ್ರದ ಸಂಸದೆ ದಿಯಾ ಕುಮಾರಿ, ಕೇಂದ್ರ ಸಚಿವರಾದ ಭೂಪೇಂದರ್ ಯಾದವ್, ಅಶ್ವಿನಿ ವೈಷ್ಣವ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೆಸರು ಕೂಡ ಸಿಎಂ ರೇಸ್‌ನಲ್ಲಿದೆ. ಆದರೆ ಹೆಚ್ಚಿನಂಶ ಮಹಂತ್ ಬಾಲಕ್‌ನಾಥ್ ಅವರನ್ನೇ ಸಿಎಂ ಮಾಡುವ ಎಲ್ಲ ಸಾಧ್ಯತೆ ಇದೆ. ಏಕೆಂದರೆ, ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಮಾಡಿ, ಬಿಜೆಪಿ ಸಕ್ಸಸ್ ಆಗಿದೆ. ಹಾಗಾಗಿ ರಾಜಸ್ಥಾನದಲ್ಲಿಯೂ ಮಹಂತ್ ಅವರನ್ನು ಸಿಎಂ ಮಾಡಿದರೆ, ಇಲ್ಲು ಕೂಡ, ರಾಜ್ಯದ ಅಭಿವೃದ್ಧಿ ಉತ್ತಮವಾಗುತ್ತದೆ ಎನ್ನುವ ಆಲೋಚನೆ ಬಿಜೆಪಿಗರದ್ದಾಗಿದೆ. ಹಾಗಾಗಿ ಮಹಂತ್ ರಾಜಸ್ಥಾನ ಸಿಎಂ ಆಗುವ ಎಲ್ಲ ಸಾಧ್ಯತೆಯೂ ಇದೆ.

‘ತೆಲಂಗಾಣದಲ್ಲಿ ಕಾಂಗ್ರೆಸ್ ಮೈನಾರಿಟಿ ವೋಟ್‌ಗಳನ್ನ ಖರೀದಿ ಮಾಡಿದೆ’

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ವಿಜಯೇಂದ್ರ

‘ಕಾಂಗ್ರೆಸ್ ನಲ್ಲಿ ಪೊಲ್ಯೂಷನ್ ಜಾಸ್ತಿಯಾಗಿದೆ. ಪಾರಿವಾಳಗಳು ಹಾರಿ ಹೋಗುವ ಕಾಲ ಬರ್ತಿದೆ’

- Advertisement -

Latest Posts

Don't Miss