Hubballi News: ಹುಬ್ಬಳ್ಳಿ: ಮತ್ತೆ ತನ್ನ ನಡೆಯನ್ನು ಸಮರ್ಥಿಸಿಕೊಂಡ ಹುಬ್ಬಳ್ಳಿ ಶಹರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಯಾವುದೇ ಕಾರಣಕ್ಕೂ ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡಬಾರದೆಂದು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಶ್ರೀಕಾಂತ ಪೂಜಾರಿ ಇಲ್ಲಿಯವರೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಒಂದು ವೇಳೆ ಈಗ ಜಾಮೀನು ನೀಡಿದ್ರೆ ಮುಂದೆ ಅದೇ ರೀತಿ ಮಾಡಬಹುದು. ಈಗಾಗಲೇ ಆರೋಪಿ ಮೇಲೆ 13 ಪ್ರಕರಣ 3 ಮುನ್ನೆಚ್ಚರಿಕೆ ಪ್ರಕರಣಗಳಿವೆ. ಈಗ ಜಾಮೀನು ನೀಡಿದ್ರೆ ಮುಂದೆ ನ್ಯಾಯಾಲಯಕ್ಕೆ ಗೈರಾಗಬಹುದದು ಎಂದು ಸಬ್ ಇನ್ಸ್ಪೆಕ್ಟರ್ ಕಾರಣ ನೀಡಿದ್ದಾರೆ. ಈ ಕಾರಣದಿಂದ ಆರೋಪಿಗೆ ಜಾಮೀನು ನೀಡಬಾರದೆಂದು, 5 ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಶಹರ ಠಾಣೆ ಸಬ್ ಇನ್ಸ್ಪೆಕ್ಟರ್ ಅರ್ಜಿ ಸಲ್ಲಿಸಿದ್ದಾರೆ.
ಇರಾನ್ನಲ್ಲಿ ಅವಳಿ ಬಾಂಬ್ ಸ್ಪೋಟ: 103 ಸಾವು, 141ಕ್ಕೂ ಹೆಚ್ಚು ಜನರಿಗೆ ಗಾಯ
ಶ್ರೀರಾಮ ಮಾಂಸಾಹಾರಿಯಾಗಿದ್ದ ಎಂದವರಿಗೆ ತಿರುಗೇಟು ನೀಡಿದ ಆಚಾರ್ಯ ಸತ್ಯೇಂದ್ರ ದಾಸ್