Friday, June 20, 2025

Latest Posts

ಮೋದಿ ಕರೆಗೆ ಓಗೊಟ್ಟು ದೇವಸ್ಥಾನ ಕ್ಲೀನ್ ಮಾಡಿದ ನಟ ಜಗ್ಗೇಶ್..

- Advertisement -

Bengaluru News: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಪ್ರಯುಕ್ತ ನಮ್ಮ ಮನೆ ಬಳಿ ಇರುವ ದೇವಸ್ಥಾನವನ್ನು ಕ್ಲೀನ್ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದರಂತೆ, ಬಿಜೆಪಿ ನಾಯಕರು ಸೇರಿ ಹಲವರು ತಮ್ಮ ಮನೆಯ ಬಳಿ ಇರುವ ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ನಟ ಬಿಜೆಪಿಯವರಾದ ಜಗ್ಗೇಶ್ ಕೂಡ, ತಮ್ಮ ಮನೆಯ ಬಳಿ ಇರುವ ದೇವಸ್ಥಾನವನ್ನು ಕ್ಲೀನ್ ಮಾಡಿದ್ದಾರೆ.

ಜಗ್ಗೇಶ್ ತಮ್ಮ ಗ್ರಾಮದಲ್ಲಿರುವ ಕಾಲಭೈರವೇಶ್ವರ ದೇವಸ್ಥಾನದ ಅಂಗಳವನ್ನು ಕ್ಲೀನ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜಗ್ಗೇಶ್, ನನ್ನ ಗ್ರಾಮದ ಶ್ರೀಕಾಲಭೈರವ ದೇವಸ್ಥಾನದ ಅಂಗಳವನ್ನು ಸ್ವಚ್ಛ ಮಾಡುವ ಕೆಲಸವನ್ನು ಅತ್ಯಂತ ಭಕ್ತಿಯಿಂದ ಮಾಡಿದೆ. 560 ವರ್ಷಗಳ ಹೋರಾಟದ ಫಲಶೃತಿಯಿಂದ ಶ್ರೀರಾಮ ದೇವಸ್ಥಾನ ಸ್ಥಾಪನೆಯಾಗುತ್ತಿದೆ. ಇನ್ನಾದರೂ ದೇಶದ ಪ್ರಜೆಗಳ ಹೃದಯದಲ್ಲಿ ಶ್ರೀರಾಮ ಸ್ಥಾಪಿತವಾಗಲಿ, ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.

ಎಲ್ಲರಿಗೂ ದೇವಸ್ಥಾನ ಸ್ವಚ್ಛಗೊಳಿಸುವಂತೆ ಕರೆ ನೀಡಿರುವ ಪ್ರಧಾನಿ ಮೋದಿ, ನಾಸಿಕ್‌ನಲ್ಲಿರುವ ಕಾಲಾರಾಮ್ ಮಂದಿರದಲ್ಲಿ ಕಸ ಗುಡಿಸಿ, ದೇವಾಲಯದ ಅಂಗಳವನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೇ, ಅಯೋಧ್ಯಾ ರಾಮಮಂದಿರದ ಉದ್ಘಾಟನೆಗಾಗಿ 11 ದಿನದ ವೃತವನ್ನು ಮೋದಿ ಕೈಗೊಂಡಿದ್ದಾರೆ.

ಲೋಕಸಭೆ ಎಲೆಕ್ಷನ್‌ಗಾಗಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

55 ವರ್ಷದ ಕಾಂಗ್ರೆಸ್ ನಂಟು ತೊರೆದು ಶಿವಸೇನೆ ಸೇರಿದ ಮಿಲಿಂದ್ ದಿಯೋರಾ

ಪಂಚೆ-ಶಲ್ಯ ಧರಿಸಿ ಪೊಂಗಲ್‌ ಸೆಲೆಬ್ರೇಟ್ ಮಾಡಿದ ಪಿಎಂ ಮೋದಿ: ಹಾಡು ಹಾಡಿದ ಬಾಲಕಿಗೆ ಶಾಲು ಗಿಫ್ಟ್

- Advertisement -

Latest Posts

Don't Miss