Nayakana Hatti: ಬಯಲು ಸೀಮೆಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಮೀಸಲಿಟ್ಟು ತ್ವರಿತವಾಗಿ ಕಾಮಗಾರಿ ಮಾಡಿ ಮುಗಿಸಿ ಬಯಲು ಸೀಮೆಯ ಕೆರೆಗಳಿಗೆ ನೀರು ಹರಿಸುವಂತೆ ಆಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಹರಿಸುವುದಕ್ಕಾಗಿ, ನಾಯಕನಹಟ್ಟಿ ಹೋಬಳಿ ಕೇಂದ್ರದಲ್ಲಿ ಇಂದು ನೀರಾವರಿ ಹೋರಾಟ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಒಂದು ದಿನದ ಸಂಪೂರ್ಣ ಬಂದ್ ಕೈಗೊಂಡಿತ್ತು.
ಕೈ ಗೊಂಡಿರುವ ಒಂದು ದಿನದ ಸಂಪೂರ್ಣ ಬಂದ್ ಗೆ ನಾಯಕನಹಟ್ಟಿಯ ಎಲ್ಲಾ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಎಲ್ಲಾ ಜಾತಿ ಸಮುದಾಯಗಳ ಮುಖ್ಯಸ್ಥರು, ಎಲ್ಲಾ ವ್ಯಾಪಾರ ವ್ಯವಹಾರಗಳ ಒಕ್ಕೂಟಗಳು , ಕಾರ್ಮಿಕ ಸಂಘಟನೆಗಳು ರೈತ ಸಂಘಟನೆಗಳು, ಆಟೋ ಚಾಲಕ ಸಂಘ, ರಾಷ್ಟ್ರೀಯ ಕಿಸಾನ್ ಸಂಘದ ಬೆಂಬಲವನ್ನು ಸುಚಿಸಿವೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6:00 ತನಕ ಸಂಪೂರ್ಣ ಬಂದ್ ಆಚರಿಸಲಾಗಿದ್ದು ಎಲ್ಲಾ ನಾಗರೀಕರು ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ಸೂಚಿಸಿವೆ …
ವರದಿ :- ಆಂಜನೇಯ ನಾಯಕನಹಟ್ಟಿ
ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?
ಬಾಲಕರಾಮನ ದರ್ಶನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್