Saturday, June 21, 2025

Latest Posts

ಗೂಗಲ್ ಪೇ, ಫೋನ್‌ ಪೇ ಮೇಲೂ ಚುನಾವಣಾ ಆಯೋಗ ಕಣ್ಗಾವಲು ಇರಿಸಲಿದೆ: ರಾಜೀವ್ ಕುಮಾರ್

- Advertisement -

Political News: ದೆಹಲಿಯಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ರಾಜೀವ್ ಕುಮಾರ್, ಲೋಕಸಭೆ ಎಲೆಕ್ಷನ್ ಡೇಟ್ ಅನೌನ್ಸ್ ಮಾಡಿದ್ದಾರೆ. ಏಪ್ರಿಲ್ 26ಕ್ಕೆ ಮತ್ತು ಮೇ 7ಕ್ಕೆ ಕರ್ನಾಟಕದಲ್ಲಿ ಎರಡು ಹಂತದ ಲೋಕಸಭೆ ಎಲೆಕ್ಷನ್ ನಡೆಯಲಿದೆ. ಇಷ್ಟೇ ಅಲ್ಲದೇ, ಎಲೆಕ್ಷನ್‌ಗೆ ಸಂಬಂಧಪಟ್ಟಂತೆ ಇನ್ನೂ ಹಲವು ವಿಷಯಗಳ ಬಗ್ಗೆ ರಾಜೀವ್ ಕುಮಾರ್ ಮಾತನಾಡಿದ್ದಾರೆ.

ಇನ್ನು ಈ ಬಾರಿ ಲೋಕಸಭಾ ಚುನಾವಣೆಗೆ 4 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. 55 ಲಕ್ಷ ಇವಿಎಂ ಬಳಕೆ ಮಾಡಲಾಗಿದೆ. ಎಲ್ಲ ಬೂತ್‌ಗಳಲ್ಲೂ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಲಾಗಿದೆ.

ಅಲ್ಲದೇ, ನಿಮಗೆ ಗೊತ್ತಿರುವ ಕ್ರಿಮಿನಲ್ ಬ್ಯಾಗ್ರೌಂಡ್ ಇರುವ ವ್ಯಕ್ತಿ ಚುನಾವಣೆಗೆ ನಿಲ್ಲುತ್ತಿದ್ದಾರೆ ಎಂದರೆ, ಆ ಬಗ್ಗೆ ನೀವು ಜಾಹೀರಾತು ನೀಡಿ, ಜನಕ್ಕೆ ಈ ಬಗ್ಗೆ ತಿಳಿಸಬಹುದು. ಏಕೆಂದರೆ, ಚುನಾವಣೆಯಲ್ಲಿ ಹಿಂಸಾಚಾರ ಆಗುವುದನ್ನು ಯಾರೂ ಕೂಡ ಸಹಿಸುವುದಿಲ್ಲ. ಶಾಂತಿಯುತ ಮತದಾನಕ್ಕಾಗಿ, ಬೇಕಾದ ವ್ಯವಸ್ಥೆ ಮಾಡಲಾಗುತ್ತದೆ. ಹಾಗಾಗಿ ಕ್ರಿಮಿನಲ್ ಬ್ಯಾಗ್ರೌಂಡ್ ಇರುವ ವ್ಯಕ್ತಿ ಚುನಾವಣೆಗೆ ನಿಲ್ಲುವ ಮುನ್ನ ನೀವು ಈ ವಿಷಯವನ್ನು ಜಾಹೀರಾತಿನ ಮೂಲಕ ಹೇಳಬಹುದು.

ಅಲ್ಲದೇ, ನಿಮಗೆ ಯಾವುದಾದರೂ ವ್ಯಕ್ತಿ ಚುನಾವಣೆಗಾಗಿ ದುಡ್ಡಿನ ದುರುಪಯೋಗ ಮಾಡುತ್ತಿದ್ದಾನೆಂದು ಗೊತ್ತಾದರೆ, ಪ್ರೂಫ್ ಇದ್ದರೆ, ಆ ಬಗ್ಗೆ ನೀವು ದೂರು ನೀಡಬಹುದು. ಉದಾಹರಣೆಗೆ ಟಿವಿ, ಕುಕ್ಕರ್, ದುಡ್ಡು ಸೇರಿ ಹಲವು ವಸ್ತುಗಳನ್ನು ಮತದಾರರಿಗೆ  ಹಂಚುವ ಕೆಲಸವನ್ನು ಆದಷ್ಟು ತಪ್ಪಿಸುವ ಕೆಲಸ ಮಾಡಲಾಗುತ್ತದೆ. ಇದಕ್ಕಾಗಿ ಕಂಟ್ರೋಲ್ ರೂಮ್ ವ್ಯವಸ್ಥೆ ಕೂಡ ಮಾಡಲಾಗಿದೆ. ಸಿಕ್ಕಿಬಿದ್ದವರ ವಿರುದ್ಧ ಕಠಿಣ ಕ್ರಮ ವಹಿಸಲಾಗುತ್ತದೆ. ಇನ್ನು ಡ್ರೋಣ್ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಕಣ್ಗಾವಲು ಇರಿಸಲಾಗುತ್ತದೆ. ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

ಇನ್ನು ಅಹಿಂಸಾತ್ಮಕ, ಆರೋಗ್ಯಕರ ಚುನಾವಣೆ ನಡೆಸಲು ಸಾಮಾಜಿಕ ಜಾಲತಾಣಗಳು ಸಹ ನಮ್ಮ ಸಹಾಯಕ್ಕೆ ಬರುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಸಹಾಯಕವಾಗುವಂಥ ಕೆಲಸ ಮಾಡಬೇಕೆ ಹೊರತು, ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ರಾಜೀವ್‌ ಕುಮಾರ್ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಫೋನ್ ಪೇ, ಗೂಗಲ್ ಪೇ ಮೂಲಕ, ರಾಶಿ ರಾಶಿ ದುಡ್ಡು ಕಳಿಸುವವರ ಮೇಲೂ ಕಣ್ಗಾವಲು ಇರಿಸಲಾಗುತ್ತದೆ. ಹಣ ಸಾಗಿಸುವ ಬ್ಯಾಂಕ್ ವಾಹನಗಳಿಗೆ ಸಂಜೆ ಬಳಿಕ ನಿರ್ಬಂಧ ಹೇರಲಾಗುತ್ತದೆ. ಇಷ್ಟೇ ಅಲ್ಲದೇ, ಸ್ಟಾರ್‌ ಪ್ರಚಾರಕರಿಗೂ ಚುನಾವಣೆ ಬಗ್ಗೆ ಗೈಡ್‌ಲೈನ್ಸ್ ನೀಡಲಾಗುತ್ತದೆ. ಅಭ್ಯರ್ಥಿಗಳು ದ್ವೇಷ ಭಾಷಣಗಳನ್ನು ಮಾಡುವಂತಿಲ್ಲ. ಹಾಗೆ ಮಾಡಿದ್ದಲ್ಲಿ, ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರಾಜೀವ್‌ ಕುಮಾರ್ ಹೇಳಿದ್ದಾರೆ.

ಈಶ್ವರಪ್ಪ ಅವರು ಪಕ್ಷದ ಹಿತ ಬಿಟ್ಟು ಬೇರೆ ಯೋಚನೆ ಮಾಡಿದವರೇ ಅಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಳಗಾವಿಯಲ್ಲಿ ವಿರೋಧದ ಅಲೆಯಿಲ್ಲ. ಕೋರೆಯವರು ನಮ್ಮ ಪರವಾಗಿದ್ದಾರೆ: ಮಾಜಿ ಸಿಎಂ ಶೆಟ್ಟರ್..!

ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ?: ಸಿಎಂ

- Advertisement -

Latest Posts

Don't Miss