Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ, ಪ್ರಿಯಾಂಕ ಖರ್ಗೆ, ಬಿಜೆಪಿ ನಾಯಕರನ್ನು ಕುರಿತು ಚೋರ್ ಗುರು ಚಾಂಡಾಳ್ ಶಿಷ್ಯ ಎಂದು ಪೋಸ್ಟ್ ಹಾಕಿದ್ದಾರೆ. ಇದ್ಕಕೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಇಂಥ ಹೇಳಿಕೆಯನ್ನು ಖಂಡಿಸಿದ್ದಾರೆ.
ಮಾಜಿ ಶಾಸಕ ಪ್ರೀತಂಗೌಡ ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ತಂದೆಯವರು ಎಐಸಿಸಿ ಅಧ್ಯಕ್ಷರು ಎಂಬ ಕಾರಣಕ್ಕೆ ಶಾಸಕರಾಗಿ, ಮಂತ್ರಿಗಿರಿ ‘ತೆಗೆದುಕೊಂಡಿರುವ’ ಶ್ರೀಯುತ ಪ್ರಿಯಾಂಕ್ ಖರ್ಗೆ ಅವರೇ, ನಿಮಗೆ ಸ್ವಂತ ಗುರುತಾದರೂ ಇದೆಯೇ? ಒಂದು ದಲಿತ ಸಮುದಾಯವನ್ನೇ ‘ಚೋರ್’ ಎಂದು ನಿಂದಿಸಿ ಕಳ್ಳರಿಗೆ ಹೋಲಿಸಿರುವ ನೀವು ಯಾವ ಮುಖ ಇಟ್ಟುಕೊಂಡು ನಾನೊಬ್ಬ ದಲಿತೋದ್ಧಾರಕ ಎನ್ನುತ್ತೀರಿ? ಆತ್ಮಸಾಕ್ಷಿ ಎನ್ನುವುದೇನಾದರೂ ಇದ್ದರೆ ಕೂಡಲೇ ಸಮುದಾಯದವರ ಕ್ಷಮೆ ಕೇಳಿ, ಮಂತ್ರಿಗಿರಿಯಿಂದ ಹೊರನಡೆಯಿರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದಲಿತೋದ್ಧಾರಕ ಎಂದು ನಿಮ್ಮ ಚೇಲಾಗಳಿಂದ ಪರಾಕ್ ಹಾಕಿಸಿಕೊಂಡು ಫೋಟೋಗಳಿಗೆ ಪೋಸ್ ನೀಡಿ ನೀವು ಬೆಳೆದರಷ್ಟೇ ಸಾಲದು, ಇಡೀ ದಲಿತ ಸಮುದಾಯವನ್ನು ಮೇಲೆತ್ತುವ ಕಾರ್ಯ ಮಾಡಿ. ಕಲಬುರಗಿ ಕೈ ತಪ್ಪಿದ ಹತಾಶೆ ನಿಮ್ಮ ನಾಲಗೆಯಿಂದ ಹೊರಬಾರದಿರಲಿ. ಸಿಎಂ ಸಿದ್ದರಾಮಯ್ಯ ಅವರೇ ಇನ್ನೂ ಯಾವ ನೈತಿಕತೆಯಿಂದ ಇವರನ್ನು ಸಂಪುಟದಲ್ಲಿ ಇಟ್ಟುಕೊಂಡಿದ್ದೀರಿ? ಈ ಕೂಡಲೇ ವಜಾಗೊಳಿಸಿ ನಿಮ್ಮ ನೈತಿಕತೆ ಪ್ರದರ್ಶಿಸಿ ಎಂದು ಪ್ರೀತಂಗೌಡ ಆಗ್ರಹಿಸಿದ್ದಾರೆ.
ತಂದೆಯವರು ಎಐಸಿಸಿ ಅಧ್ಯಕ್ಷರು ಎಂಬ ಕಾರಣಕ್ಕೆ ಶಾಸಕರಾಗಿ, ಮಂತ್ರಿಗಿರಿ 'ತೆಗೆದುಕೊಂಡಿರುವ' ಶ್ರೀಯುತ @PriyankKharge ಅವರೇ, ನಿಮಗೆ ಸ್ವಂತ ಗುರುತಾದರೂ ಇದೆಯೇ?
ಒಂದು ದಲಿತ ಸಮುದಾಯವನ್ನೇ 'ಚೋರ್' ಎಂದು ನಿಂದಿಸಿ ಕಳ್ಳರಿಗೆ ಹೋಲಿಸಿರುವ ನೀವು ಯಾವ ಮುಖ ಇಟ್ಟುಕೊಂಡು ನಾನೊಬ್ಬ ದಲಿತೋದ್ಧಾರಕ ಎನ್ನುತ್ತೀರಿ? ಆತ್ಮಸಾಕ್ಷಿ ಎನ್ನುವುದೇನಾದರೂ… pic.twitter.com/ElqrItvq1b— Preetham J Gowda (ಮೋದಿ ಪರಿವಾರ) (@preethamgowda_j) March 22, 2024
ಕಾಂಗ್ರೆಸ್’ನ್ನು ನಾವು ಶಕ್ತಿ ಹೀನಗೊಳಿಸುವ ಅಗತ್ಯವಿಲ್ಲ, ಜನರೇ ಶಕ್ತಿಹೀನಗೊಳಿಸಿದ್ದಾರೆ: ಪ್ರಹ್ಲಾದ್ ಜೋಶಿ
ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ: ಬಸವರಾಜ ಬೊಮ್ಮಾಯಿ