Hassan News: ಹಾಸನ : ಇಂದು ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಹಿನ್ನೆಲೆ, ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಮಾಜಿ ಸಚಿವ ರೇವಣ್ಣನವರು ಕುಟುಂಬ ಸಮೇತರಾಗಿ ಬಂದಿದ್ದರು.
ಸಂಸದ ಪ್ರಜ್ವಲ್ರೇವಣ್ಣ, ಎಂಎಲ್ಸಿ ಸೂರಜ್ರೇವಣ್ಣ, ಜಿ.ಪಂ. ಮಾಜಿಸದಸ್ಯೆ ಭವಾನಿರೇವಣ್ಣ ಮತ್ತು ಹೆಚ್.ಡಿ.ರೇವಣ್ಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಪ್ರತೀ ವರ್ಷ ಲಕ್ಷ್ಮೀನರಸಿಂಹ ರಥೋತ್ಸವ ಹಿನ್ನೆಲೆ, ರೇವಣ್ಣನವರ ಕುಟುಂಬಸ್ಥರೇ ತೇರು ಎಳೆದು, ಭಕ್ತಾದಿಗಳಿಗೆ ಪ್ರಸಾದ ಹಂಚುತ್ತಿದ್ದರು. ಆದರೆ ಈ ವರ್ಷ ಲೋಕಸಭಾ ಎಲೆಕ್ಷನ್ ಹಿನ್ನೆಲೆ, ಮಾಜಿಸಚಿವ ಎಚ್.ಡಿ.ರೇವಣ್ಣ ಕುಟುಂಬದವರು ಪ್ರಸಾದ ವಿತರಣೆ ಮಾಡಲು ಅವಕಾಶ ನೀಡಬಾರದು ಹಾಗೂ ತೇರು ಎಳೆಯಲು ಅವಕಾಶ ನೀಡಬಾರದೆಂದು ತಾಲ್ಲೂಕು ಆಡಳಿತಕ್ಕೆ ಕಾಂಗ್ರೆಸ್ ಮನವಿ ಸಲ್ಲಿಸಿದೆ.
ಲೋಕಸಭಾ ಚುನಾವಣೆ ಹಾಗೂ ಕಾಂಗ್ರೆಸ್ನಿಂದ ದೂರು ಬಂದ ಹಿನ್ನಲೆ, ತಾಲ್ಲೂಕು ಆಡಳಿತದಿಂದಲೇ ಭಕ್ತಾಧಿಳಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ರಥೋತ್ಸವದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.
ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..
ಮಾಸ್ಕೋ ಮಾಲ್ನಲ್ಲಿ ದಾಳಿ ಬಗ್ಗೆ ಆಕ್ರೋಶ ಹೊರಹಾಕಿದ ರಷ್ಯಾ ಅಧ್ಯಕ್ಷ ಪುಟಿನ್