Saturday, July 27, 2024

Latest Posts

ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..

- Advertisement -

Bollywood News: ಬಾಲಿವುಡ್ ನಿರ್ದೇಶಕರೊಬ್ಬರನ್ನು ಯಾರಾದರೂ ಭೇಟಿಯಾಗಬೇಕು ಅಂದ್ರೆ ಅವರಿಗೆ ಲಕ್ಷದಲ್ಲಿ ನೀವು ದುಡ್ಡು ಕೊಡಬೇಕು. ನಿಮಗೆ ಅಷ್ಟು ದುಡ್ಡು ಕೊಡುವ ಯೋಗ್ಯತೆ ಇದ್ದಲ್ಲಿ ಮಾತ್ರ, ಈ ನಿರ್ದೇಶಕರನ್ನು ನೀವು ಮೀಟ್ ಮಾಡಬಹುದಂತೆ. ಯಾರಪ್ಪ ಆ ನಿರ್ದೇಶಕ ಅಂತೀರಾ, ಅನುರಾಗ್ ಕಶ್ಯಪ್.

ಬಾಲಿವುಡ್‌ನಲ್ಲಿ ಹಲವು ಹಿಟ್ ಫಿಲ್ಮ್‌ಗಳನ್ನು ಕೊಟ್ಟ ಖ್ಯಾತಿ ಅನುರಾಗ್ ಕಶ್ಯಪ್‌ಗಿದೆ. ಇವರು ಬರೀ ನಿರ್ದೇಶಕರಲ್ಲ. ಬದಲಾಗಿ ಅತ್ಯುತ್ತಮ ನಟರು ಕೂಡ. ಅದರಲ್ಲೂ ಖಳನಾಯಕನ ಪಾತ್ರ ಮಾಡುವುದರಲ್ಲಿ ಅನುರಾಗ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದರೆ ಇದೀಗ ಇವರು ಸೋಶಿಯಲ್ ಮೀಡಿಯಾದಲ್ಲಿ, ತಮ್ಮನ್ನು ಭೇಟಿಯಾಗಬರುವ ಯಾರೇ ಆದರೂ ಲಕ್ಷ ಲಕ್ಷ ದುಡ್ಡು ಹಿಡಿದು ಬರಬೇಕು ಎಂದಿದ್ದಾರೆ.

ಅನುರಾಗ್‌ಗೆ ದುಡ್ಡಿನ ಕೊರತೆಯಾಗಿರಬೇಕು. ಅದಕ್ಕೆ ದುಡ್ಡು ಮಾಡೋಕ್ಕೆ ಹೀಗೆ ಮಾಡುತ್ತಿರಬೇಕು ಅಂತಾ ನೀವು ಊಹಿಸಿರಬಹುದು. ಆದರೆ ಸಂಗತಿ ಅದಲ್ಲ. ಅನುರಾಗ್ ಹೊಸ ಹೊಸ ನಟರನ್ನು ಸೇರಿಸಿಕೊಂಡು ಸಿನಿಮಾ ಮಾಡುತ್ತಾರೆ. ಬಾಲಿವುಡ್‌ಗೆ ಕೆಲಸ ಅರಸಿ ಬರುವ ಹೊಸಬರಿಗೆ ನಟನಾ ಅವಕಾಶ ಕೊಟ್ಟು ಫೆಮಸ್ ಮಾಡ್ತಾರೆ. ಇದೇ ಕಾರಣಕ್ಕೆ ಹೊಸಬರು ತಮಗೂ ನಟನೆಗೆ ಅವಕಾಶ ಕೊಡಿ ಎಂದು ಕೇಳಿಕೊಂಡು ಬರುತ್ತಿದ್ದಾರೆ.

ಕೆಲವರು ಅಡ್ಡದಾರಿ ಹಿಡಿದಾದರೂ ತಾವು ನಟರಾಗಬೇಕು ಎಂದು ಬಯಸುತ್ತಾರೆ. ಇಂಥವರಿಂದ ಅನುರಾಗ್‌ಗೆ ಹಿಂಸೆಯಾಗುತ್ತಿದೆ. ಈ ಸಮಸ್ಯೆಗೊಂದು ಪರಿಹಾರ ಹುಡುಕಬೇಕು ಎಂದು ಅನುರಾಗ್, ತಮ್ಮನ್ನು ಮೀಟ್ ಮಾಡಬೇಕು ಅಂದ್ರೆ ಚಾರ್ಜ್ ಮಾಡಬೇಕು ಎಂದು ಹೇಳಿದ್ದಾರೆ. 5ರಿಂದ 10 ನಿಮಿಷಕ್ಕೆ 1 ಲಕ್ಷ, ಅರ್ಧ ಗಂಟೆ ಮಾತನಾಡಲು 2ರಿಂದ 3 ಲಕ್ಷ ಚಾಾರ್ಜ್ ಆಗುತ್ತದೆ. ಇದನ್ನು ಕೊಡುವ ಅರ್ಹತೆ ಇದ್ದವರು ಭೇಟಿಯಾಗಲು ಬನ್ನಿ.

ಅಲ್ಲದೇ, ನಟನೆಗೆ ಅವಕಾಶ ಕೊಡಿ ಎಂದು ಮೆಸೆಜ್, ಕಾಲ್ ಮಾಡಿ ನನ್ನ ಜೀವ ಹಿಂಡಬೇಡಿ. ನಾನು ನಿರ್ದೇಶಕ, ಸೇವಾ ಸಂಘಟನೆಯವನಲ್ಲವೆಂದು ಅನುರಾಗ್ ಹೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ, ಇವರು ಅವಕಾಶ ಕೊಟ್ಟು ಬೆಳೆಸಿದ ಕೆಲ ನಟರು, ಇನ್ನೂ ಸಣ್ಣ ಪುಟ್ಟ ನಟನೆಗೆ ಸೀಮಿತವಾಗಿದ್ದಾರೆ. ಮುಂದೆ ಹೋಗಲು ಪ್ರಯತ್ನವೇ ಪಡುತ್ತಿಲ್ಲ. ಚಿಲ್ಲರೆ ಚಿತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿದ್ದಾರೆ. ಅವರ ಸಲುವಾಗಿ ನಾನು ನನ್ನ ಸಮಯ ವ್ಯರ್ಥ ಮಾಡಿದ್ದೇನೆ. ಇನ್ನು ನನಗೆ ಹಾಗೆ ಮಾಡಲು ಇಷ್ಟವಿಲ್ಲವೆಂದು ಅನುರಾಗ್ ಹೇಳಿದ್ದಾರೆ.

ಉಡುಪಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ: ವಿದ್ಯಾರ್ಥಿನಿಯರ ನೀಚತನ ಸಾಬೀತು..

ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್‌

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ‌ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Latest Posts

Don't Miss