Movie News: ಇಂದು ತೆಲುಗು ನಟ ರಾಮ್ಚರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪತ್ನಿ ಉಪಾಸನಾ ಮತ್ತು ತಮ್ಮ ಪುಟ್ಟ ಕಂದಮ್ಮನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ರಾಮ್ಚರಣ್, ಪತ್ನಿ ಉಪಾಸನಾ ಮತ್ತು ಪುಟ್ಟ ಕಂದಮ್ಮನೊಂದಿಗೆ ತಿರುಮಲಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಮಚರಣ್ ಮತ್ತು ಉಪಾಸನಾ ದೇವರಲ್ಲಿ ನಂಬಿಕೆ ಇರುವ ಸ್ಟಾರ್ ದಂಪತಿಯಾಗಿದ್ದು, ಮೊನ್ನೆಯಷ್ಟೇ ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಮಾಡಿದ್ದಾರೆ. ಬಾಲರಾಮನ ಪ್ರಾಣಪ್ರತಿಷ್ಠಾಪನೆ ದಿನವೂ ಚಿರಂಜೀವಿ ಮತ್ತು ರಾಮಚರಣ್ ಅಯೋಧ್ಯೆಗೆ ಹೋಗಿದ್ದರು. ಉಪಾಸನಾ ತಮ್ಮ ತಾತನೊಂದಿಗೆ ಹೋಗಿ ಬಾಲರಾಮನ ದರ್ಶನ ಮಾಡಿದ್ದರು.
ಇಷ್ಟೇ ಅಲ್ಲದೇ, ಆರ್ಆರ್ಆರ್ ಸಿನಿಮಾ ಆಸ್ಕರ್ ಅವಾರ್ಡ್ಗೆ ಸೆಲೆಕ್ಟ್ ಆಗಿದ್ದ ವೇಳೆ ಕೂಡ ಉಪಾಸನಾ ಮತ್ತು ರಾಮ್ಚರಣ್ ತಾವು ವಿದೇಶಕ್ಕೆ ಕೊಂಡೊಗಿದ್ದ ರಾಮನ ಮೂರ್ತಿಯ ಪೂಜೆ ಮಾಡಿ, ಬಳಿಕವೇ, ಅವಾರ್ಡ್ ಫಂಕ್ಷನ್ ಅಟೆಂಡ್ ಮಾಡಿದ್ದರು.
ಇನ್ನು ನಟ ಶಿವರಾಜ್ಕುಮಾರ್ ಮತ್ತು ರಾಮ್ಚರಣ್ ಜೊತೆಗೂಡಿ ಸಿನಿಮಾ ಮಾಡುತ್ತಿದ್ದು, ಇದಕ್ಕೆ ಪೆದ್ದಿ ಎಂದು ಹೆಸರಿಡಲಾಗಿದೆ. ಪೆದ್ದಿ ಎಂದರೆ, ತೆಲಗಿನಲ್ಲಿ ದೊಡ್ಡದು ಎಂದರ್ಥ.
ಜೂನ್ 4ರ ನಂತರ ಡಿಕೆಶಿ- ಸಿದ್ದರಾಮಯ್ಯ ಈ ಕಾರಣಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ: ಅಗರ್ವಾಲ್
ಮಂಡ್ಯದಲ್ಲಿ NDA ಗೆಲ್ಲಬೇಕು: ಮಂಡ್ಯ ಗೆಲುವಿಗೆ ವಿಜಯೇಂದ್ರ ಕಾರ್ಯತಂತ್ರ
ಜೆಡಿಎಸ್ ಪಕ್ಷದ ಯುವ ಮುಖಂಡ ಚಂದನ್ಗೆ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಪಟ್ಟ