ಮುಷ್ಕರ ಮುಂದೂಡಿದ ಸರ್ಕಾರಿ ಆ್ಯಂಬುಲೆನ್ಸ್ ಸಿಬ್ಬಂದಿಗಳು

Political News: ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ, ಸರ್ಕಾರಿ ಆಂಬುಲೆನ್ಸ್ ಸಿಬ್ಬಂದಿ ಕೈಗೊಂಡಿದ್ದ ಮುಷ್ಕರವನ್ನು ಕೈಬಿಟ್ಟಿದ್ದಾರೆ. 3 ತಿಂಗಳಿನಿಂದ ಸಂಬಳ ನೀಡುತ್ತಿಲ್ಲವೆಂದು ಆಗ್ರಹಿಸಿ ಸರ್ಕಾರಿ ಆ್ಯಂಬುಲೆನ್ಸ್ ನೌಕರರು ಮುಷ್ಕರ ಮಾಡಬೇಕೆಂದು ನಿರ್ಧರಿಸಿದ್ದರು. ಆದರೆ ಮಂಗಳವಾರದವರೆಗೆ ಗಡುವು ನೀಡಿರುವ ಆ್ಯಂಬುಲೆನ್ಸ್ ಸಿಬ್ಬಂದಿಗಳು, ಅಷ್ಟರಲ್ಲಿ ಸಂಬಳ ಬರದಿದ್ದರೆ, ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ.

ಇನ್ನು ಬಿಜೆಪಿ ಈ ಬಗ್ಗೆ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ಆ್ಯಂಬುಲೆನ್ಸ್ ಸಿಬ್ಬಂದಿಗಳನ್ನು ಬೀದಿಗೆ ತಂದಿದೆ. ಖಜಾನೆ ಖಾಲಿ ಮಾಡಿ ಕೂತಿರುವ ಸರ್ಕಾರ, ಕೂಡಲೇ ಅವರಿಗೆ ಸಂಬಳ ನೀಡಬೇಕು ಎಂದು ಆಗ್ರಹಿಸಿತ್ತು.

ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣದ ಗಂಭೀರ ಆರೋಪ

ಅಧಿಕಾರಕ್ಕೆ ಬಂದರೆ, ರಾಮಮಂದಿರ ತೀರ್ಪು ಬದಲಿಸುತ್ತೇನೆ ಅಂತಾ ಅಂದಿದ್ದಾರಂತೆ ರಾಹುಲ್ ಗಾಂಧಿ..

About The Author