Crime News: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತೀವ್ರಗೊಳಿಸಿದೆ. ಅಂಜಲಿ ಹಂತಕ ಗಿರೀಶ್ ಕಸ್ಟಡಿ ಅವಧಿ ನಾಳಗೆ ಕೊನೆಗೊಳ್ಳಲಿದೆ. ಹೀಗಾಗಿ ಆರೋಪಿ ಕೊಲೆಗೆ ಬಳಸಿದ ಚಾಕುವುಗಾಗಿ ತೀವ್ರ ಶೋಧ ನಡೆಸಿದ್ದು, ಕೊನೆಗೂ ಸಿಐಡಿ ಅಧಿಕಾರಿಗಳಿಗೆ ಕೊಲೆಗೆ ಬಳಸಿದ ಚಾಕು ಪತ್ತೆಯಾಗಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪದ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಪತ್ತೆಯಾಗಿದೆ. ಸಿಐಡಿ ಪೊಲೀಸ್ ತಂಡ ಹುಬ್ಬಳ್ಳಿಯಿಂದ ಆರೋಪಿಯೊಂದಿಗೆ ದಾವಣಗೆರೆಗೆ ಬಂದು ಚಾಕುಗಾಗಿ ಹುಡುಕಾಟ ನಡೆಸಿದ್ದು, ರೈಲು ಹಳಿಪಕ್ಕದಲ್ಲಿಯೇ ಚಾಕು ಪತ್ತೆಯಾಗಿದೆ ಎಂದು ರೇಲ್ವೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ
ಆರೋಪಿಯು ರೈಲಿನಲ್ಲಿ ಬರುವಾಗ ಚಿಕ್ಕಜಾಜೂರು-ಮಾಯಕೊಂಡ ಮಧ್ಯೆ ಗದಗ ಜಿಲ್ಲೆಯ ಮಹಿಳೆ ಲಕ್ಷ್ಮೀ ಎಂಬುವವರಿಗೆ ಚಾಕುವಿನಿಂದ ಇರಿದಿದ್ದ. ಬಳಿಕ ಆತ ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದ. ಆಗ ಅಲ್ಲೆ ಚಾಕು ಪತ್ತೆಯಾಗಿದೆ. ನಿನ್ನೆ ಆರೋಪಿಯನ್ನೇ ಕರೆತಂದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಹಳಿಯ ಪಕ್ಕದಲ್ಲಿ ಚಾಕು ಪತ್ತೆಯಾಗಿದೆ. ಚಾಕುವನ್ನು ಸಿಐಡಿ ತಂಡ ವಶಕ್ಕೆ ಪಡೆದುಕೊಂಡಿದೆ.
ಕಳೆದ ಏಳು ದಿನಗಳಿಂದ ಚಾಕುವಿಗಾಗಿ ಸಿಐಡಿ ಹುಡುಕಾಟ ನಡೆಸಿತ್ತು. ಅಲ್ಲದೇ ಕೊಲೆಯಾದ ದಿನದಂದಲೂ ಬೆಂಡಿಗೇರಿ ಪೊಲೀಸರು ಚಾಕುವಿಗಾಗಿ ತಲಾಷ್ ನಡೆಸಿದ್ದರು. ಆದ್ರೆ ಬೆಂಡಿಗೇರಿ ಪೊಲೀಸರಿಗೂ ಮತ್ತು ಸಿಐಡಿ ಟೀಮ್ಗೂ ಸಿಕ್ಕಿರಲಿಲ್ಲ.
ಅಲ್ಲದೇ ತನಿಖಾ ಹಾದಿಯನ್ನ ತಪ್ಪಿಸಲು ಚಾಕು ಎಲ್ಲಿ ಎಸೆದ್ದಿದ್ದೆನೆಂದು ಆರೋಪಿ ಬಾಯಿ ಬಿಟ್ಟಿರಲಿಲ್ಲ. ಇದರ ಮಧ್ಯೆ ನಿನ್ನೆ ಚಾಕು ಪತ್ತೆಯಾಗಿದ್ದು, ಅಂಜಲಿ ಅಂಬಿಗೇರ ಹತ್ಯೆ ಹಾಗೂ ರೈಲಿನಲ್ಲಿನ ಮಹಿಳೆಗೆ ಇರಿದ ಚಾಕು ಇದೆನಾ ಅಥವಾ ಇದು ಬೇರೆ ಹತ್ಯೆಗೆ ಬಳಸಿದ ಚಾಕು ಬೇರೆ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದು, ಚಾಕುವನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ.
ನಾಳೆ ಆರೋಪಿ ಕಸ್ಟಡಿ ಅವಧಿಪೂರ್ಣಗೊಳ್ಳಲಿರುವ ಕಾರಣ ಇಂದು ಆರೋಪಿ ಗಿರೀಶ್ ಕೆಲಸ ಮಾಡುತ್ತಿದ್ದ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಕೂಡ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಡಾ. ಎಂ. ಮೋಹನ ಆಳ್ವ -72: ಮೆ.31ರಂದು ಕಾರ್ಕಳ ಜ್ಞಾನಸುಧಾದಲ್ಲಿ ಸವ್ಯಸಾಚಿ ಸಂಭ್ರಮ
ಮಂಡ್ಯದಲ್ಲಿ ಡಾ.ಅಂಬರೀಷ್ ಫೌಂಡೇಷನ್ ಆರಂಭ: ವಿದ್ಯಾರ್ಥಿಗಳನ್ನು ದತ್ತು ಪಡೆದ ಸುಮಲತಾ

