Friday, October 18, 2024

Latest Posts

ಚಿಕ್ಕಣ್ಣ ಮತ್ತೆ ಹೀರೋ: ಎ..ಪಿ.ಅರ್ಜುನ್ ನಿರ್ಮಾಣ

- Advertisement -

Movie News: ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಆಗಾಗ ಬೀಸುತ್ತಲೇ ಇರತ್ತೆ. ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರಾಗಲು ಬಂದವರು ಹೀರೋ ಮತ್ತು ನಿರ್ದೇಶಕರಾದ ಉದಾಹರಣೆಗಳಿಗೇನೂ ಲೆಕ್ಕವಿಲ್ಲ.ಇಲ್ಲೀಗ ಮತ್ತೊಂದು ಬದಲಾವಣೆಯ ಸುದ್ದಿ.ಅದೇನಪ್ಪ ಅಂದರೆ, ಚಿಕ್ಕಣ್ಣ ಮತ್ತೊಂದು ಹೊಸ ಸಿನಿಮಾಗೆ ಹೀರೋ ಆಗುತ್ತಿದ್ದಾರೆ. ಹೌದು, ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿದ್ದ ಚಿಕ್ಕಣ್ಣನಿಗೆ ಜನಮೆಚ್ಚುಗೆ ಸಿಕ್ಕಿತ್ತು. ಇದೀಗ ಮತ್ತೊಂದ ಹೊಸ ಇನ್ನಿಂಗ್ಸ್ ಗೆ ರೆಡಿಯಾಗಿದ್ದಾರೆ ಚಿಕ್ಕಣ್ಣ.

ಅಂದಹಾಗೆ,ಚಿಕ್ಕಣ್ಣ ಅವರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ರಾಜಗುರು ಕೆರೆಬೇಟೆ ಮೂಲಕ ನಿರ್ದೇಶಕರಾದ ರಾಜಗುರು ಇದೀಗ ಚಿಕ್ಕಣ್ಣ ಅವರ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಇನ್ನು, ಈ ಚಿತ್ರವನ್ನುಎ.ಪಿ.ಅರ್ಜುನ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ಈ ಹೊತ್ತಿನ ವಿಶೇಷ.

‘ಕೆರೆಬೇಟೆ’ಇತ್ತೀಚೆಗೆ 50 ದಿನಗಳನ್ನು ಪೂರೈಸಿದೆ. ಅದೇ ಖುಷಿಯ ಮೂಡ್ ನಲ್ಲಿರುವ ರಾಜಗುರು ಅವರು ಚಿಕ್ಕಣ್ಣ ಅಭಿನಯದ ಹೊಸ ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಅಂದಹಾಗೆ, ಉಪಾಧ್ಯಕ್ಷ ಸಿನಿಮಾ ಮೂಲಕ ಚಿಕ್ಕಣ್ಣ ಮೋಡಿ ಮಾಡಿದ್ದರು. ಅತ್ತ, ಕೆರೆಬೇಟೆ ಸಿನಿಮಾದಲ್ಲೂ ರಾಜಗುರು ಅವರು ಮೆಚ್ಚುಗೆ ಪಡೆದಿದ್ದರು. ಈಗ ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ ಸಿನಿಮಾ ಮೇಲೆ ಒಂದಷ್ಟು ನಿರೀಕ್ಷೆಗಳಿವೆ. ಇನ್ನು, ಈ ಸಿನಿಮಾದ ಶೀರ್ಷಿಕೆ ಏನು, ಕಥೆ ಏನು, ಯಾವಾಗ ಶುರುವಾಗಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ಸಸ್ ಸಿನಿಮಾಗಳನ್ನು ನಿರ್ದೇಶಿಸುತ್ತ ಬಂದಿರುವ ಎ.ಪಿ.ಅರ್ಜುನ್, ಈಗ ಚಿಕ್ಕಣ್ಣ ಅವರ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದೊಂದೇ ಅಲ್ಲ, ಅವರು ವಿರಾಟ್ ಮತ್ತು ಪ್ರಿಯಾಂಕಾ ಕುಮಾರ್ ಅಭಿನಯದ ಅದ್ಧೂರಿ ಲವರ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಚಿಕ್ಕಣ್ಣ ಹೊಸ ಸಿನಿಮಾಗೆ ಹೀರೋ ಅನ್ನೋದು ಸುದ್ದಿ. ಈ ಚಿತ್ರಕ್ಕೆ ರಾಜಗುರು ನಿರ್ದೇಶನ ಮಾಡಿದರೆ, ಎ.ಪಿ.ಅರ್ಜುನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅದೇನೆ ಇರಲಿ, ಸಿನಿಮಾ ಸದ್ಯಕ್ಕೆ ಶುರುವಾಗುವಂತೆ ಕಾಣಲ್ಲ. ಯಾಕೆಂದರೆ, ಎ.ಪಿ.ಅರ್ಜುನ್ ಅವರ ನಿರ್ದೇಶನದ ಮಾರ್ಟಿನ್ ಚಿತ್ರ ರಿಲೀಸ್ ಆಗಬೇಕು. ಅದಾದ ಬಳಿಕ ಈ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ತವರಲ್ಲೇ ಅಣ್ಣಾಸಾಹೇಬ್ ಜೊಲ್ಲೆಗೆ ಮುಖಭಂಗ: ಪ್ರಿಯಾಂಕಾ ಗೆಲುವಿಗೆ ಕಾಂಗ್ರೆಸ್ಸಿಗರ ಸಂಭ್ರಮ

ಈ ಗೆಲುವನ್ನು ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಅರ್ಪಿಸುತ್ತೇನೆ: ವಿ.ಸೋಮಣ್ಣ

ನನ್ನ ಗೆಲುವು ಮತದಾರ ಪ್ರಭುಗಳಿಗೆ ಸಲ್ಲಬೇಕು: ಪ್ರಹ್ಲಾದ ಜೋಶಿ

- Advertisement -

Latest Posts

Don't Miss