Health Tips: ಬೇರು ಹಲವು ಅಥವಾ ಜೀಗುಜ್ಜೆ ಎಂದರೆ, ಉತ್ತರಕನ್ನಡ, ದಕ್ಷಿಣ ಕನ್ನಡದ ಜನರಿಗೆ ಅಚ್ಚುಮೆಚ್ಚಿನ ತರಕಾರಿ. ಬೇಸಿಗೆ ಗಾಲದಿಂದ ಮಳೆಗಾಲದವರೆಗೂ ಸಿಗುವ ಜೀಗುಜ್ಜೆ ಅಥವಾ ಬೇರು ಹಲಸಿನ ಪದಾರ್ಥ ಅದೆಷ್ಟು ರುಚಿಕರವೆಂದರೆ, ಇದರ ಪಲ್ಯ, ಚಿಪ್ಸ್, ಬಜ್ಜೆ ಎಲ್ಲವೂ ಬಾಯಿ ಚಪ್ಪರಿಸಿಕೊಂಡು ತಿನ್ನುವಷ್ಟು ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಜೀಗುಜ್ಜೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಜೀಗುಜ್ಜೆ ಸೀಸನಲ್ ತರಕಾರಿಯಾಗಿದ್ದು, ಇದು ಸಿಗುವ ಸಮಯದಲ್ಲಿ ಇದನ್ನು ಮಿತಿಯಲ್ಲೇ ತಿನ್ನಬೇಕು. ಇದರ ಸೇವನೆ ಅತೀಯಾದರೆ, ಆರೋಗ್ಯಕ್ಕೆ ಹಾನಿಕಾರಕ. ಇನ್ನು ಇದರ ಪದಾರ್ಥ ತಿಂದರೆ, ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ನಿಮ್ಮ ದೇಹದ ತೂಕವನ್ನು ಸಮವಾಗಿ ಇರಿಸಿಕೊಳ್ಳಬೇಕು ಅಂದ್ರೆ, ಜೀಗುಜ್ಜೆ ಸೇವನೆ ಮಾಡಬೇಕು. ಆಗ ನಿಮ್ಮ ದೇಹದ ತೂಕ, ಸರಿಯಾಗಿ ಇರುತ್ತದೆ. ಹೆಚ್ಚು ಏರುವುದು, ತೂಕ ಇಳಿಯುವುದೂ ಇಲ್ಲ. ಏಕೆಂದರೆ, ನೀವು ಜೀಗುಜ್ಜೆ ಪದಾರ್ಥ ಸ್ವಲ್ಪ ತಿಂದರೂ ನಿಮ್ಮ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಆಗ ಆಹಾರ ಕಡಿಮೆ ಸೇವಿಸಬೇಕಾಗುತ್ತದೆ. ಈ ಕಾರಣಕ್ಕೆ, ಜೀಗುಜ್ಜೆ ಸೇವನೆ ಮಾಡಬೇಕು.
ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸಲು ಜೀಗುಜ್ಜೆ ಸಹಕಾರಿಯಾಗಿದೆ. ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಹಲವು ಆರೋಗ್ಯಕರ ಆಹಾರದ ಜೊತೆ, ಜೀಗುಜ್ಜೆಯನ್ನು ಸಹ ನಿಮ್ಮ ಆಹಾರದ ಲೀಸ್ಟ್ಗೆ ಸೇರಿಸಬೇಕಾಗುತ್ತದೆ. ಜೀಗುಜ್ಜೆಯ ಪದಾರ್ಥ ತಯಾರಿಸುವಾಗ, ಹೆಚ್ಚು ಎಣ್ಣೆ, ಉಪ್ಪು, ಖಾರ ಹಾಕದೇ, ಆಹಾರ ತಯಾರಿಸಿದ್ರೆ, ಅದು ಅತ್ಯಂತ ಆರೋಗ್ಯಕರ ಮತ್ತು ರುಚಿಕರ ಪದಾರ್ಥವಾಗುತ್ತದೆ. ಆಗ ಅದರ ಸೇವನೆ ನಿಮ್ಮ ಆರೋಗ್ಯಕ್ಕೆ ಲಾಭ ತಂದು ಕೊಡುತ್ತದೆ. ಆದರೆ ನೀವು ಜೀಗುಜ್ಜೆಗೆ ಹೆಚ್ಚು ಮಸಾಲೆ, ಖಾರ, ಉಪ್ಪು, ಎಣ್ಣೆ ಹಾಕಿ, ಪದಾರ್ಥ ತಯಾರಿಸಿದರೆ, ಅದು ಬರೀ ನಾಲಿಗೆಗೆ ರುಚಿಸುತ್ತದೆ. ಆರೋಗ್ಯಕ್ಕೇನೂ ಪ್ರಯೋಜನವಾಗುವುದಿಲ್ಲ.