Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ದರ್ಶನ್ ಮತ್ತು ಪವಿತ್ರಾಗೌಡ ಅವರಿಗೆ ಜಾಮೀನು ಸಿಕ್ಕಿಲ್ಲ. ಸೆಪ್ಟೆಂಬರ್ 27ಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 25ಕ್ಕೆ ಮುಂದೂಡಲಅಗಿದೆ. ದರ್ಶನ್ ಅವರು ಜಾಮೀನಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಎಸ್ ಪಿಪಿ ಪ್ರಸನ್ನಕುಮಅರ್ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಹಾಗಾಗಿ, ಸೆ.27ಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.
ಈ ಮಧ್ಯೆ ಸೋಮವಾರ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಅವರು ಹೋಗಿದ್ದರು. ಈ ವೇಳೆ ಕೋರ್ಟ್ ಮೂವರಿಗೆ ಬೇಲ್ ಸಿಕ್ಕ ಬಗ್ಗೆ ವಿಷಯ ತಿಳಿಸಿದ್ದಾರೆ. ಆ ಸುದ್ದಿ ಕೇಳಿದ ದರ್ಶನ್, ಮುಗಳ್ನಕ್ಕಿದ್ದಾರೆ. ಈ ವೇಳೆ, ನಿಮಗೂ ಬೇಲ್ ಸಿಗುತ್ತೆ ಧೈರ್ಯವಾಗಿರಿ ಎಂದು ಸಮಾಧಾನದ ಮಾತುಗಳನ್ನು ವಿಜಯಲಕ್ಷ್ಮಿ ಹೇಳಿದ್ದಾರೆ. ಆರೋಗ್ಯ ನೋಡಿಕೊಳ್ಳುವಂತೆಯೂ ಮಾತಾಡಿದ್ದಾರೆ. ಇನ್ನು, ಜೈಲಿನಲ್ಲಿ ಸಮಸ್ಯೆ ಆಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ದರ್ಶನ್. ಇಲ್ಲಿ ದಿಂಬು, ಚೇರ್ ಇತ್ಯಾದಿ ಅಗತ್ಯ ವಸ್ತು ಕೊಡುತ್ತಿಲ್ಲ ಎಂದಿದ್ದಾರೆ. ಆ ಬಗ್ಗೆಯೂ ಚರ್ಚಿಸುತ್ತೇನೆ. ನೀವು ಧೈರ್ಯವಾಗಿರಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಈ ನಡುವೆ, ಎ16 ಆರೊಪಿಯಾಗಿದ್ದ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದೆ. ಕೊಲೆ ಆರೋಪವನ್ನು ಹೊತ್ತು 5 ಲಕ್ಷ ಪಡೆದಿದ್ದ ಕಾರಣಕ್ಕೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇವರ ಜೊತೆ ಕಾರ್ತಿಕ್, ನಿಖಲ್ ಅವರಿಗೂ ಜಾಮೀನು ನೀಡಲಾಗಿದೆ.