Saturday, July 27, 2024

Latest Posts

ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

- Advertisement -

Bollywood News: ಬರೀ ಸ್ಟಾರ್ಸ್ ಅಲ್ಲದೇ, ಇಂದಿನ ದಿನದಲ್ಲಿ ಸಾಮಾನ್ಯರು ಕೂಡಾ ಬಡವರಿಗೆ ದಾನ ಮಾಡಿ, ಅದನ್ನು ಫೋಟೋ, ವೀಡಿಯೋ ತೆಗೆದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಶೋಕಿ ಮಾಡುವ ಕಾಲದಲ್ಲಿ, ಬಾಲಿವುಡ್ ನಟಿ ಸಾರಾ ಅಲಿಖಾನ್, ಬಡವರಿಗೆ ಅನ್ನದಾನ ಮಾಡಿ, ಅದನ್ನು ಕ್ಲಿಕ್ಕಿಸಲು ಬಂದ ಪಾಪರಾಜಿಗಳಿಗೆ, ಪ್ರಚಾರ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ.

ಆದರೆ ಪಾಪರಾಜಿಗಳು ಸಾರಾ ಅಲಿಖಾನ್‌ ಅವರ ಈ ಸಿಂಪಲ್ ಸ್ವಭಾವವನ್ನು ತಮ್ಮ ಕ್ಯಾಮೆರಾದಲ್ಲಿ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ನಟಿಯ ಸರಳ ಸ್ವಭಾವಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಪಾಪರಾಜಿಗಳು ಎಂದರೆ ಸೆಲೆಬ್ರಿಟಿಗಳ ಸುತ್ತ ಸುತ್ತಾಡುತ್ತಾ ಅವರ ಫೋಟೋ, ವೀಡಿಯೋ ಕ್ಲಿಕ್ಕಿಸುತ್ತಾರೆ.

ಅಂಥವರು ಸಾರಾ ಅಲಿಖಾನ್ ಹಿಂದೆಯೂ ಹೋಗಿದ್ದಾರೆ. ನಟಿ ದಾರಿ ಬದಿ ಬೇಡುವವರಿಗೆ ಆಹಾರದ ಪ್ಯಾಕೇಟ್ ಹಂಚಿದ್ದಾರೆ. ಇದನ್ನು ವೀಡಿಯೋ ಮಾಡಲು ಬಂದಾಗ, ದಯವಿಟ್ಟು ಇದನ್ನೆಲ್ಲ ವೀಡಿಯೋ ಮಾಡಿ, ಪ್ರಚಾರ ಮಾಡಬೇಡಿ ಎಂದು ಮೊದಲು ಮನವಿ ಮಾಡಿದ್ದಾರೆ. ಬಳಿಕ ಬೈದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು, ಸಾರಾ ಅಲಿಖಾನ್ ಸರಳತೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸಾಾರಾ ಅಲಿ ಖಾನ್ ಮುಸ್ಲಿಂ ಆದರೂ ಕೂಡ, ಅವರು ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಿ, ಸರ್ವಧರ್ಮಕ್ಕೂ ಗೌರವ ನೀಡುತ್ತಾರೆ. ಈ ಬಗ್ಗೆ ಅವರು ಟ್ರೋಲ್ ಆದರೂ ಕೂಡ, ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಹರ ಹರ ಮಹಾದೇವ ಎಂದು ಹೇಳಿದ್ದರು.

ಜೋಶಿಯವರನ್ನ‌ ಸೋಲಿಸುವುದೇ ನಮ್ಮ ಗುರಿ. ಅವರನ್ನು ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು: ದಿಂಗಾಲೇಶ್ವರ ಶ್ರೀ

ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸ್ಯಾಲೆನ್ಸರ್ ವಶಕ್ಕೆ ಪಡೆದ ಪೊಲೀಸರು

ಬೈಕ್‌ನಿಂದ ಆಯತಪ್ಪಿ ಬಿದ್ದು ಹೆಡ್‌ಕಾನ್ಸ್‌ಟೇಬಲ್ ಸಾವು

- Advertisement -

Latest Posts

Don't Miss