Sunday, September 8, 2024

Latest Posts

ಮಾಧ್ಯಮಗಳಿಗೆ ಕ್ಷಮೆಯಾಚಿಸಿದ ಅಲ್ಲು ಅರ್ಜುನ್, ಬೆಂಗಳೂರಿನಲ್ಲಿ ಪುಷ್ಪ ಚಿತ್ರತಂಡ..!

- Advertisement -

www.karnatakatv.net:`ಪುಷ್ಪ’ ಚಿತ್ರ, ಸದ್ಯ ಬಾರಿ ಸದ್ದು ಮಾಡುತ್ತಿದೆ. ಇದೇ ಡಿಸೆಂಬರ್ 17ಕ್ಕೆ ಪುಷ್ಪದ ಮೊದಲಭಾಗ ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರ ತಂಡ ಈಗಾಗಲೇ ಪ್ರಚಾರ ಕಾರ್ಯ ಶುರುಮಾಡಿದೆ. ತೆಲುಗು ನಾಡುಮಾತ್ರವಲ್ಲದೆ ಬೇರೆ ಬೇರೆ ಭಾಗಗಳಲ್ಲು ಪುಷ್ಪ ಸಿನಿಮಾದ ಪ್ರಚಾರ ಕಾರ್ಯಗಳು ಆರಂಭ ಆಗಿದೆ. ತೆಲುಗಿನಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಅಲ್ಲು ಅರ್ಜುನ್. ಅವರ ಅನೇಕ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಕಲೆಕ್ಷನ್ ಮಾಡಿವೆ ಈಗಾಗಿ ಇಂದು ಬೆಂಗಳೂರಿಗೆ ಪುಷ್ಪ ಚಿತ್ರತಂಡ ಆಗಮಿಸಿತ್ತು.

`ಪುಷ್ಪ’ ಚಿತ್ರದ ಕಾರ್ಯಕ್ರಮ ಮತ್ತು ಮಾಧ್ಯಮ ಸುದ್ದಿಗೋಷ್ಠಿಯನ್ನು ಬೆಂಗಳೂರಿನಲ್ಲಿ ಆಯೋಜಿಸಿಲಾಗಿತ್ತು. ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ನಟ ಧನಂಜಯ್ ಭಾಗಿಯಾಗಿದ್ದರು. ಕಾರ್ಯಕ್ರಮ ಶುರುವಾದಾಗ ಧನಂಜಯ್, ರಶ್ಮಿಕಾ, ಅಲ್ಲು ಅರ್ಜುನ್ ಚಿತ್ರದ ಕುರಿತು ವೇದಿಕೆಯಮೇಲೆ ಮಾತನಾಡಿದರು. ನಂತರ ಮಾಧ್ಯಮ ಸುದ್ದಿಗೋಷ್ಠಿ ಆರಂಭ ಮಾಡಲಾಯಿತು, ಸುದ್ದಿಗೋಷ್ಠಿ ಶುರುವಿನಲ್ಲಿ ಅಲ್ಲು ಅರ್ಜುನ್ ಮಾಧ್ಯಮದವರಲ್ಲಿ ಕ್ಷಮೆ ಕೇಳಿದರು. ಕಾರಣ ಅಲ್ಲು ಅರ್ಜುನ್ ಮತ್ತು ರಶ್ಮಿಕಾ 2ಗಂಟೆ ತಡವಾಗಿ ಸುದ್ದಿಗೋಷ್ಠಿಗೆ ಬಂದಿದ್ದರು.

ಸುಮಾರು 2ಗಂಟೆಗಳ ಕಾಲ ಪುಷ್ಪ ಚಿತ್ರದ ಸುದ್ದಿಗೋಷ್ಠಿಗಾಗಿ ಮಾಧ್ಯಮದವರು ಕಾದಿದ್ದರು. ಆದರೆ ಬಂದ ಕೂಡಲೇ ಯಾಕೆ ತಡವಾಗಿ ಬಂದರು ಎಂದು ಹೇಳಲಿಲ್ಲ, ಆದಕಾರಣ ಮಾಧ್ಯಮದ ವರದಿಗಾರರು ಈ ಪ್ರಶ್ನೆಯನ್ನು ಅಲ್ಲು ಅರ್ಜುನ್ ಅವರಿಗೆ ಕೇಳಿದರು. ಆಗ ಅಲ್ಲು ಅರ್ಜುನ್ ಮಾಧ್ಯಮದವರಲ್ಲಿ ಕ್ಷಮೆ ಕೇಳಿದರು. “ದಯವಿಟ್ಟು ಕ್ಷಮಿಸಿ, ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಖಾಸಗಿ ವಿಮಾನದಲ್ಲಿ ಬಂದೆ. ವಾತಾವರಣದಲ್ಲಿನ ಬದಲಾವಣೆ, ಫಾಗ್ ಇದ್ದ ಕಾರಣ, ವಿಮಾನ ಟೇಕ್ ಆಫ್ ಆಗುವುದಿಲ್ಲ. ಆದ್ದರಿಂದ ಸ್ವಲ್ಪ ಲೇಟ್ ಆಗುತ್ತದೆ. ನನಗೆ ಯಾರಿಗೂ ನೋವು ಮಾಡಲು ಇಷ್ಟ ಇಲ್ಲ. ತುಂಬಾ ಹೊತ್ತು ಕಾಯಿಸಿದ್ದಕ್ಕೆ ಎಲ್ಲಾ ಮಾಧ್ಯಮಗಳಿಗೂ ಕ್ಷಮೆ ಯಾಚಿಸುತ್ತೇನೆ. ಧನ್ಯವಾದಗಳು” ಎಂದು ಹೇಳಿದರು.

ಇನ್ನೇನು ಎರಡು ದಿನಗಳಲ್ಲಿ ಪುಷ್ಪ ಚಿತ್ರ ತೆರೆಕಾಣುತ್ತಿದೆ. ಆಗಾಗಿ ಬ್ಯಾಕ್ ಟು ಬ್ಯಾಕ್ ಪ್ರಚಾರದ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮುಗಿಸಿಕೊಂಡು ಕೊಚ್ಚಿಗೆ ಚಿತ್ರತಂಡ ತೆರಳಿತು.

- Advertisement -

Latest Posts

Don't Miss